ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ

Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

‘ಹಿರಿಯರ ಮನೆ’ ಎಂದೇ ಕರೆಯಲಾಗುವ ರಾಜ್ಯ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಡೆದ ಘಟನೆ ತೀರಾ ದುರದೃಷ್ಟಕರ. ಪರಿಷತ್ ಸಭಾಪತಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ನಡೆದ ಮಾರಾಮಾರಿ, ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ರಾಜ್ಯ ವಿಧಾನ ಪರಿಷತ್ತಿನ ಗೌರವ, ಘನತೆಯನ್ನು ಮಣ್ಣುಪಾಲು ಮಾಡಿದೆ.

ಕೆಲವು ಸದಸ್ಯರು ಸಭಾಪತಿಯವರ ಪ್ರವೇಶದ ಬಾಗಿಲನ್ನು ಒದ್ದ ಘಟನೆ, ಅವರು ಪರಿಷತ್ತನ್ನು ಪ್ರವೇಶಿಸದಂತೆ ತಡೆದದ್ದು, ಉಪಸಭಾಪತಿ ಧರ್ಮೇಗೌಡರನ್ನು ಸಭಾಧ್ಯಕ್ಷ ಪೀಠದಿಂದ ದೈಹಿಕವಾಗಿ ಎತ್ತಿ ಹೊರಗೆ ತೆಗೆದುಕೊಂಡು ಹೋದದ್ದು ತೀವ್ರ ಖಂಡನೀಯ. ಇಷ್ಟೆಲ್ಲ ಅವಾಂತರಗಳಿಗೂಅಲ್ಲೋಲಕಲ್ಲೋಲಕ್ಕೂ ರಾಜ್ಯದ ಮೂರೂ ಪ್ರಧಾನ ಪಕ್ಷಗಳಿಗೆ ಸೇರಿದ ಕೆಲವು ಸದಸ್ಯರೇ ಕಾರಣರಾಗಿದ್ದಾರೆ.

ಈ ಘಟನೆ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹವಾಗಿದೆ. ಈ ಸದಸ್ಯರು ತಮ್ಮ ನಡವಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT