ಶಾಸಕ ಸ್ಥಾನಕ್ಕೆ ಸ್ವಾರ್ಥ ಪ್ರಯೋಜನಗಳಿಗಾಗಿ ರಾಜೀನಾಮೆ ನೀಡಿ ಉಪಚುನಾವಣೆಗಳನ್ನು ಜನರ ಮೇಲೆ ಹೇರುವುದು ಅಕ್ಷಮ್ಯ. ನಮ್ಮ ಬಹುಪಾಲು ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷದ ಬಿ ಫಾರಂ ಪಡೆದು ಸ್ಪರ್ಧಿಸಿ, ಗೆದ್ದು ಬಂದಿರುತ್ತಾರೆ. ಅವರು ಆ ಪಕ್ಷಕ್ಕೆ ಮತ್ತು ಮತದಾರರಿಗೆ ಜವಾಬ್ದಾರಿಯಾಗಿರುತ್ತಾರೆ. ಅವಧಿಗೂ ಮೊದಲೇ ಮತದಾರರ ಮನ್ನಣೆಯನ್ನು ಧಿಕ್ಕರಿಸಿ, ಪಕ್ಷಕ್ಕೆ ದ್ರೋಹ ಮಾಡುವುದು ಎಷ್ಟು ಸರಿ?