ಬೆಂಗಳೂರಿನಲ್ಲಿ ಮೇ 20ರಂದು ಕೇಳಿಬಂದ ಸ್ಫೋಟದ ಸದ್ದಿಗೆ ಯುದ್ಧವಿಮಾನ ಹಾರಾಟ ಕಾರಣವಲ್ಲವೆಂದೂ ಬಂಗಾಳದಲ್ಲಿ ಬೀಸಿಬಂದ ಅಂಪನ್ ಚಂಡಮಾರುತವೇ ಕಾರಣವೆಂದೂ ಭೂವಿಜ್ಞಾನಿ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಮೇ 25). ಹಾಗಿದ್ದರೆ ಈ ಸದ್ದು ಚೆನ್ನೈ, ಕೊಲಂಬೊ, ಪುರಿ ಮುಂತಾದವನ್ನೆಲ್ಲ ಬಿಟ್ಟು ಬೆಂಗಳೂರಿಗೇ ಏಕೆ ಅಪ್ಪಳಿಸಿತೆಂದು ಅವರು ಸ್ಪಷ್ಟಪಡಿಸಿಲ್ಲ. ಅಂಪನ್ ಚಂಡಮಾರುತಕ್ಕೆ ಜಾವಾದ ಮಹಾಶಕ್ತಿಶಾಲಿ ಸೆಮೇರು ಜ್ವಾಲಾಮುಖಿ ಕಾರಣವೆಂದು ಹೇಳಿದ್ದಾರೆ. ಅದು ತೀರಾ ಸಾಮಾನ್ಯ ಜ್ವಾಲಾಮುಖಿಯಾಗಿದ್ದು, ಅದರ ಹೊಗೆದೂಳು ಪೂರ್ವಕ್ಕೆ ಹೊರಟುಹೋಗಿದೆ.