ಈ ಪ್ರಕರಣದಿಂದ ಒಂದು ರಾಷ್ಟ್ರ ಹೇಗೆ ಘನತೆ, ಗೌರವಕ್ಕೆ, ಮಾನವೀಯತೆಗೆ ಮಾನ್ಯತೆ ನೀಡುತ್ತದೆ, ಮಾನವಾಭಿವೃದ್ಧಿ ಸೂಚ್ಯಂಕಗಳ ಕುರಿತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೇಗೆ ಮುಂಚೂಣಿ ನೆಲೆಯಲ್ಲಿ ನಿಲ್ಲುತ್ತವೆ ಎಂಬುದು ಬಹಿರಂಗವಾಗಿದೆ. ನಮ್ಮಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳ ಹೆಸರಿನಲ್ಲಿ ಕೋಟ್ಯಂತರ ಹಣ ಪ್ರತಿವರ್ಷ ವಿನಿಯೋಗವಾಗುತ್ತದೆ. ಆದರೆ, ದೇಶದಲ್ಲಿನ ಎಷ್ಟೋ ಮಂದಿ ಸಾಕ್ಷರರಿಗೂ ಶಿಕ್ಷಣ, ಆರೋಗ್ಯ ಸಂಪನ್ಮೂಲಗಳು, ಲಿಂಗತ್ವದಂತಹ ವಿಷಯಗಳಿಗೆ ಇರುವ ಆದ್ಯತೆ, ಕಾರ್ಯಕ್ರಮಗಳು, ಸೇವೆ, ಸವಲತ್ತುಗಳ ಕುರಿತು ಮಾಹಿತಿ ಇರುವುದಿಲ್ಲ. ತಂತ್ರಜ್ಞಾನ ಮುಂದುವರಿದಿದ್ದರೂ ಇಂತಹ ಪರಿಸ್ಥಿತಿ ಇರುವುದು ದುರದೃಷ್ಟಕರ. ಆಡಳಿತ ವ್ಯವಸ್ಥೆಯು ಸ್ಪಂದನಶೀಲವಾಗಬೇಕಿದೆ. ಜನಪರ ಕಲ್ಯಾಣ ಕಾರ್ಯಗಳನ್ನು ರೂಪಿಸುವಲ್ಲಿ, ಅನುಷ್ಠಾನ ಮಾಡುವಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಕಂಡುಕೊಳ್ಳುವಲ್ಲಿನ ಪ್ರಕ್ರಿಯೆ ಹಾಗೂ ಕಾರ್ಯತಂತ್ರಗಳ ಕುರಿತು ವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.
-ಸಿ.ವಿಜಯಕುಮಾರ್, ಮೈಸೂರು