ಒಂದು ದಿನ ದಿನಪತ್ರಿಕೆ ಬಂದಿಲ್ಲದೇ ಹೋದರೆ ಆದಿನ ಪತ್ರಿಕೆಯನ್ನು ಓದಲು ಆಗದಿದ್ದರೆ ಇಡೀ ದಿನ ಏನೋ ಒಂದನ್ನು ಕಳೆದುಕೊಂಡಂತೆ ಅನಿಸುತ್ತದೆ. ಬೇರೆ ಪತ್ರಿಕೆಯವರು ಹಲವಾರು ಸಾರಿ ಬಂದು ನಮ್ಮ ಪತ್ರಿಕೆಯನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸಿಸುತ್ತಿದ್ದರೂ ನಾನು ಯಾರ ಒತ್ತಾಯಕ್ಕು ಮಣಿಯದೇ ನನಗೆ ಇಷ್ಟವಾದ, ಚಂದವಾದ , ಅಂದವಾದ ಬರಹಗಳುಳ್ಳ ಪ್ರಜಾವಾಣಿಯನ್ನು 1985 ರಿಂದ ನನ್ನ ಅಂಗಡಿ ವ್ಯಾಪಾರ ವ್ಯವಹಾರ ಶುರುಮಾಡಿದಾಗಿನಿಂದಲೂ ಅದೇ ಪತ್ರಿಕೆಯನ್ನು ತರಿಸಿ ಓದುತ್ತಿದ್ದೇನೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ರವಿಗೂ ಕಾಣದ್ದನ್ನು ಪ್ರಜಾವಾಣಿ ಕಂಡು ಜನರಿಗೆ ತೋರಿಸುತ್ತಿದೆ ಎಂಬ ಭಾವನೆ ಉಂಟಾಗಿದೆ.
ತಾಯಂದಿರು ತಮ್ಮ ಮಕ್ಕಳಿಗೆ ಊಟಮಾಡಿಸುವಾಗ ಮಕ್ಕಳು ರಗಳೆಮಾಡಿದಾಗ ಮೊಬೈಲ್ಗಳನ್ನು ತೋರಿಸಿ ಅದೇ ಚಟಕ್ಕೆ ಒಳಗಾಗಿರುವ ಬಗ್ಗೆ ತಮ್ಮ ಪತ್ರಿಕೆಯಲ್ಲಿಯೇ ಓದಿರುತ್ತೇನೆ. ಇನ್ನು ಮುಂದೆ ತಾಯಂದಿರು ಮಕ್ಕಳಿಗೆ ಮೊಬೈಲ್ ಅನ್ನು ತೋರಿಸದೇ ಪ್ರಜಾವಾಣಿ ದಿನಪತ್ರಿಕೆಯಲ್ಲಿರುವ ಇರುವ ಒಳ್ಳೆಯ ಚಿತ್ರಗಳನ್ನು . ಬಂದಿರುವ ಒಳ್ಳೆಯ ಸುದ್ದಿಗಳ ಬಗ್ಗೆ ತೋರಿಸಿ ಹೇಳಿ ಊಟಮಾಡಿಸಲು ಪ್ರಯತ್ನಿಸಿ
-ಬಿ.ಆರ್. ಬಸವರಾಜ್, ರೇಣುಕ ಜರಾಕ್ಸ್ ಆಲ್ದೂರು, 577111