ಕೈಬಿಸಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಯ ಕೇಂದ್ರ ಕಚೇರಿಗಳಿಂದ ಪಿಂಚಣಿ ದಾಖಲಾತಿಗಳು ಸಕಾಲ
ದಲ್ಲಿ ಮಹಾಲೇಖಪಾಲರಿಗೆ ಹೋಗುವುದಿಲ್ಲ. ಈಗಂತೂ ಮಹಾಲೇಖಪಾಲರ ಕಚೇರಿಯಿಂದಲೂ ಪಿಂಚಣಿ, ಪರಿವ
ರ್ತಿತ ಮೊಬಲಗು ಮತ್ತು ಇತರ ಸೌಲಭ್ಯಗಳು ಸಕಾಲದಲ್ಲಿ ಮಂಜೂರಾಗುತ್ತಿಲ್ಲ. ನಿವೃತ್ತಿಯ ನಂತರ ನೀಡಬೇಕಾದ ಆರ್ಥಿಕ ಸವಲತ್ತನ್ನು ಮಂಜೂರು ಮಾಡಲು ಮಹಾಲೇಖ
ಪಾಲರ ಕಚೇರಿಯೂ 10 ರಿಂದ 12 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪಿಂಚಣಿ ಹಣವನ್ನೇ ಅವಲಂಬಿಸಿರುವವರ ಗೋಳು ಹೇಳತೀರದಾಗಿದೆ. ನಿವೃತ್ತ ನೌಕರರ ಈ ಸಮಸ್ಯೆಗಳು ಪರಿಹಾರ ಕಾಣುವವೇ?