<p>ಪಿಂಚಣಿದಾರರಿಗೆ ತೊಂದರೆಯಾಗಬಾರದೆಂದು ಸರ್ಕಾರಗಳು ನಿಯಮಗಳನ್ನು ರೂಪಿಸಿವೆ. ಸೇವೆಯಿಂದ ನಿವೃತ್ತನಾದ ನೌಕರನೊಬ್ಬ ಮರು ತಿಂಗಳಿನಿಂದಲೇ ಪಿಂಚಣಿ ಪಡೆಯುವಂತಾಗಬೇಕು ಎಂದು ಸರ್ಕಾರ ಬಯಸುತ್ತದೆ. ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ನಿವೃತ್ತ ನೌಕರರಿಗೆ ಅಷ್ಟು ಸುಲಭವಾಗಿ ಪಿಂಚಣಿ ಪಡೆಯಲು ಬಿಡುತ್ತಿಲ್ಲ.</p>.<p>ಲೆಕ್ಕ ಪರಿಶೋಧಕರು ಮನಸ್ಸಿಗೆ ಬಂದಂತೆ ಆಕ್ಷೇಪ ಎತ್ತುವುದು ನಡೆದೇ ಇದೆ. ಇಂಥ ಆಕ್ಷೇಪಗಳನ್ನು ಯಾಕೆ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಒಂದಿಷ್ಟು ‘ಕೈ ಬಿಸಿ’ ಮಾಡಿದರೆ ಎಲ್ಲ ಆಕ್ಷೇಪಗಳೂ ಕಾಣೆಯಾಗುತ್ತವೆ.</p>.<p>ಕೈಬಿಸಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಯ ಕೇಂದ್ರ ಕಚೇರಿಗಳಿಂದ ಪಿಂಚಣಿ ದಾಖಲಾತಿಗಳು ಸಕಾಲ<br />ದಲ್ಲಿ ಮಹಾಲೇಖಪಾಲರಿಗೆ ಹೋಗುವುದಿಲ್ಲ. ಈಗಂತೂ ಮಹಾಲೇಖಪಾಲರ ಕಚೇರಿಯಿಂದಲೂ ಪಿಂಚಣಿ, ಪರಿವ<br />ರ್ತಿತ ಮೊಬಲಗು ಮತ್ತು ಇತರ ಸೌಲಭ್ಯಗಳು ಸಕಾಲದಲ್ಲಿ ಮಂಜೂರಾಗುತ್ತಿಲ್ಲ. ನಿವೃತ್ತಿಯ ನಂತರ ನೀಡಬೇಕಾದ ಆರ್ಥಿಕ ಸವಲತ್ತನ್ನು ಮಂಜೂರು ಮಾಡಲು ಮಹಾಲೇಖ<br />ಪಾಲರ ಕಚೇರಿಯೂ 10 ರಿಂದ 12 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪಿಂಚಣಿ ಹಣವನ್ನೇ ಅವಲಂಬಿಸಿರುವವರ ಗೋಳು ಹೇಳತೀರದಾಗಿದೆ. ನಿವೃತ್ತ ನೌಕರರ ಈ ಸಮಸ್ಯೆಗಳು ಪರಿಹಾರ ಕಾಣುವವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಂಚಣಿದಾರರಿಗೆ ತೊಂದರೆಯಾಗಬಾರದೆಂದು ಸರ್ಕಾರಗಳು ನಿಯಮಗಳನ್ನು ರೂಪಿಸಿವೆ. ಸೇವೆಯಿಂದ ನಿವೃತ್ತನಾದ ನೌಕರನೊಬ್ಬ ಮರು ತಿಂಗಳಿನಿಂದಲೇ ಪಿಂಚಣಿ ಪಡೆಯುವಂತಾಗಬೇಕು ಎಂದು ಸರ್ಕಾರ ಬಯಸುತ್ತದೆ. ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ನಿವೃತ್ತ ನೌಕರರಿಗೆ ಅಷ್ಟು ಸುಲಭವಾಗಿ ಪಿಂಚಣಿ ಪಡೆಯಲು ಬಿಡುತ್ತಿಲ್ಲ.</p>.<p>ಲೆಕ್ಕ ಪರಿಶೋಧಕರು ಮನಸ್ಸಿಗೆ ಬಂದಂತೆ ಆಕ್ಷೇಪ ಎತ್ತುವುದು ನಡೆದೇ ಇದೆ. ಇಂಥ ಆಕ್ಷೇಪಗಳನ್ನು ಯಾಕೆ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಒಂದಿಷ್ಟು ‘ಕೈ ಬಿಸಿ’ ಮಾಡಿದರೆ ಎಲ್ಲ ಆಕ್ಷೇಪಗಳೂ ಕಾಣೆಯಾಗುತ್ತವೆ.</p>.<p>ಕೈಬಿಸಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಯ ಕೇಂದ್ರ ಕಚೇರಿಗಳಿಂದ ಪಿಂಚಣಿ ದಾಖಲಾತಿಗಳು ಸಕಾಲ<br />ದಲ್ಲಿ ಮಹಾಲೇಖಪಾಲರಿಗೆ ಹೋಗುವುದಿಲ್ಲ. ಈಗಂತೂ ಮಹಾಲೇಖಪಾಲರ ಕಚೇರಿಯಿಂದಲೂ ಪಿಂಚಣಿ, ಪರಿವ<br />ರ್ತಿತ ಮೊಬಲಗು ಮತ್ತು ಇತರ ಸೌಲಭ್ಯಗಳು ಸಕಾಲದಲ್ಲಿ ಮಂಜೂರಾಗುತ್ತಿಲ್ಲ. ನಿವೃತ್ತಿಯ ನಂತರ ನೀಡಬೇಕಾದ ಆರ್ಥಿಕ ಸವಲತ್ತನ್ನು ಮಂಜೂರು ಮಾಡಲು ಮಹಾಲೇಖ<br />ಪಾಲರ ಕಚೇರಿಯೂ 10 ರಿಂದ 12 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪಿಂಚಣಿ ಹಣವನ್ನೇ ಅವಲಂಬಿಸಿರುವವರ ಗೋಳು ಹೇಳತೀರದಾಗಿದೆ. ನಿವೃತ್ತ ನೌಕರರ ಈ ಸಮಸ್ಯೆಗಳು ಪರಿಹಾರ ಕಾಣುವವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>