ಶಾಲೆಯಲ್ಲಿ ಬಾಲಕನೊಬ್ಬನಿಂದ ‘ಪಕ್ಕೆಲುಬು’ ಎಂದು ಹೇಳಿಸಲು ಹೋಗಿ, ಅದು ಸಾಧ್ಯವಾಗದೆ ಆ ಮಗುವಿಗೆ ಮಾನಸಿಕವಾಗಿ ಹಿಂಸೆ ನೀಡಿದ ‘ಗುರು’ವೊಬ್ಬರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವಿಕೃತಿಯೇ ಸರಿ. ‘ಆಸ್ಪತ್ರೆ’ ಎಂಬ ಪದವನ್ನು ಹುಡುಗನೊಬ್ಬ ‘ಅಪ್ಪಾಸತ್ರೆ’ ಎಂದು ಹೇಳಿದ ಎಂದು ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಹೇಳಿದ್ದರು. ಮಕ್ಕಳ ಉಚ್ಚಾರವನ್ನು ಹೀಗೆ ವ್ಯಂಗ್ಯ ಮಾಡುವುದು ದುರದೃಷ್ಟಕರ. ‘ಅ’ಕಾರಕ್ಕೆ ‘ಹ’ಕಾರ, ‘ಶ’ಕಾರಕ್ಕೆ ‘ಸ’ಕಾರ, ಉತ್ಸಾಹಕ್ಕೆ ಉಸ್ತಾಹ ಹೀಗೆಲ್ಲ ಕೆಲವರು, ಅದರಲ್ಲೂ ಗ್ರಾಮೀಣ ಭಾಗದವರು ಉಚ್ಚರಿಸುವುದು ಸಹಜ.