ಈ ದಿಸೆಯಲ್ಲಿ ಆಡಳಿತಯಂತ್ರ ಹೆಚ್ಚು ಚುರುಕುಗೊಳ್ಳುವಂತೆ ಅದರ ಕಿವಿ ಹಿಂಡಬೇಕಾಗಿರುವುದು ವಿರೋಧ ಪಕ್ಷಗಳ ಜವಾಬ್ದಾರಿಯೂ ಹೌದು. ಆದರೆ ಇತ್ತೀಚೆಗೆ ವಿರೋಧ ಪಕ್ಷಗಳ ನಾಯಕರು ಕೇವಲ ಸರ್ಕಾರದ ಕಾರ್ಯವನ್ನು ಟೀಕಿಸುವುದೇ ತಮ್ಮ ಕೆಲಸ ಅನ್ನುವಂತೆ ವರ್ತಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರದ ಕಿವಿ ಹಿಂಡುವುದರ ಜೊತೆಗೆ ತಾವು ಸಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಬೇಕಾದ ಸಹಾಯಕ್ಕೆ ಪೂರಕವಾಗಿ ಸರ್ಕಾರದೊಂದಿಗೆ ಕೈಜೋಡಿಸುವುದು ಅತ್ಯಂತ ಅವಶ್ಯಕ ಎಂಬುದನ್ನು ಅರಿಯಲಿ.