ಹಿಂದೂಗಳಾದ ದಲಿತರನ್ನು, ಕೆಳವರ್ಗದವರನ್ನು, ವಂಚಿತರನ್ನು ಕಡೆಗಣಿಸಿ, ಅವರನ್ನು ತುಚ್ಛೀಕರಿಸಿ, ಅವರು ದೇವಾಲಯಗಳಿಗೆ ಹೋಗುವುದಕ್ಕೆ ಅಡ್ಡಿಪಡಿಸಿ, ಅವರ ಮೇಲಿನ ಅತ್ಯಾಚಾರಗಳಿಗೆ, ದಾಳಿಗಳಿಗೆ ಉತ್ತೇಜನ ಕೊಟ್ಟು, ಅವರು ಮತಾಂಧರಿಗೆ ಬಲಿಪಶುಗಳಾಗಲು ಅವಕಾಶ ಕಲ್ಪಿಸಿ, ಬಾವಿ ನೀರನ್ನು ಪಡೆಯಲೂ ಅಡ್ಡಿಪಡಿಸಿ, ಅವರ ದೈಹಿಕ ನೋವುಗಳ ಜೊತೆಗೆ, ಮಾನಸಿಕವಾಗಿ ಜೀವನ ಜರ್ಜರಿತವಾಗುವಂತೆ ಆಗುವುದರ ಹಿಂದಿನ ಕಾರಣಗಳಿಗೆ ಸ್ಪಂದಿಸದೇ ಮತಾಂತರ ನಿಷೇಧ ಕಾಯ್ದೆ ತರುವುದು ಎಷ್ಟು ವಿವೇಕಶಾಲಿ? ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರೆ ನಿಷೇಧಿಸುತ್ತಿದ್ದರೇ?
-ಕೆ.ಎನ್.ಭಗವಾನ್,ಬೆಂಗಳೂರು