‘ಸನ್ನಿ’ ಯುವಕ ಮಂಡಳಿಯಂತೆ! (ಪ್ರ.ವಾ., ಜ. 16) ದ್ರೋಣಾಚಾರ್ಯರು ಮರ ತೋರಿ ಏನು ಕಾಣುತ್ತಿದೆ ನೋಡಿ ಹೇಳಿ
ಎಂದರಂತೆ ಶಿಷ್ಯೋತ್ತಮರಿಗೆ... ಎಲ್ಲರೂ ಕೊಂಬೆ, ಎಲೆ, ಕಾಯಿ, ಹಣ್ಣು ಎಂದೇನೇನನ್ನೋ ಹೇಳಿದರಂತೆ, ಅರ್ಜುನನಿಗೆ ಮಾತ್ರ ಹಕ್ಕಿಯ
ಕಣ್ಣು ಕಂಡಿತಂತೆ, ಅಂತೆಯೇ ದೇಶದ ಇತರ ಯುವಕರು ಕಾಣಲಾರದ್ದನ್ನು ಕಂಡಿರುವರಲ್ಲಾ ರಾಯಚೂರಿನ ಹುಡಾ ಗ್ರಾಮದ ಯುವಕರು. ಎಲ್ಲರೂ ಸನ್ನಿಯ ಮೈಮಾಟಕೆ ಸಮೂಹಸನ್ನಿಗೆ ಒಳಗಾದರೆ ಈ ಯುವಕರು ಮಾತ್ರ ಸನ್ನಿಯ ಸಹಾಯಗುಣವ ಕಂಡು ಮಂಡಳಿ ಕಟ್ಟಿರುವರಂತೆ... ಮಾದರಿಯಾಗಲಿ ಈ ಯುವಕರ ನಡೆ ಸನ್ನಿಯಂತಹವರು ಸಾವಿರವಾಗಲಿ ಹುರಿದುಂಬಿಸುತ ಯುವಕರ ಪಡೆ!