ಯುಪಿಎಸ್ಸಿಯಲ್ಲಿ ಕರ್ನಾಟಕದ ಕೆಲವು ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಆದರೆ ಈ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಕಲಾ ವಿಭಾಗದಿಂದ ಆಯ್ಕೆಯಾಗಿಲ್ಲ. ಕರ್ನಾಟಕದಲ್ಲಿ ಕಲಾ ವಿಭಾಗವು ಕಡೆಗಣನೆಗೆ ಒಳಗಾಗಿರುವುದು ಇದರಿಂದ ತಿಳಿಯುತ್ತದೆ.
ಇದಕ್ಕೆ ಇನ್ನೊಂದು ನಿದರ್ಶನವೆಂದರೆ, ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಅನುರ್ತೀರ್ಣರಾಗಿರುವವರು ಕಲಾ ವಿಭಾಗದವರು, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು. ಇದು ಕಲಾ ವಿಭಾಗದ ಬಗ್ಗೆ ಮತ್ತು ಕನ್ನಡದ ಬಗ್ಗೆ ನಮಗಿರುವ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.