ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಮಿತಿ ಮೀರಬಾರದು

Last Updated 28 ಜನವರಿ 2020, 19:58 IST
ಅಕ್ಷರ ಗಾತ್ರ

ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದಾಗಲೀ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಾಗಲೀ ಪ್ರಜಾಪ‍್ರಭುತ್ವಕ್ಕೆ ಸಲ್ಲದ ನಡೆ. ಆದರೆ ಇತ್ತೀಚೆಗೆ ಮಠಾಧೀಶರು ರಾಜಕೀಯದಲ್ಲಿ ಮೂಗು ತೂರಿಸುವ, ಅನವಶ್ಯಕ ಹಸ್ತಕ್ಷೇಪ ಮಾಡುವ, ಅಧಿಕಾರಸ್ಥರಿಗೆ ಬಹಿರಂಗವಾಗಿ ಧಮಕಿ ಹಾಕುವ ಉಸಾಬರಿಯಲ್ಲಿ ತೊಡಗಿರುವುದು ಅಪಾಯಕಾರಿ ಬೆಳವಣಿಗೆ. ಇದು ಖಂಡನಾರ್ಹ.

ಯಾವುದೇ ಒಂದು ಜಾತಿಯಿಂದ ಅಥವಾ ಜಾತಿಯ ಬೆಂಬಲದಿಂದ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಜಾತಿ, ಧರ್ಮದ ಹಿನ್ನೆಲೆಯಲ್ಲಿ ಸ್ಥಾನಮಾನ ಕೇಳುವುದಾಗಲೀ, ಪಡೆಯುವುದಾಗಲೀ ಪ್ರಜಾತಂತ್ರಕ್ಕೆ ದೊಡ್ಡ ಕಳಂಕ. ಯೋಗ್ಯತೆ, ಸೇವೆ, ಸಾಧನೆ, ಪ್ರಾಮಾಣಿಕತೆ ಆಧರಿಸಿ ಪದವಿ ಸಿಗುವುದಾದರೆ ಅದು ಸಾರ್ಥಕ. ಅಷ್ಟೇ ಅಲ್ಲ, ಪುರಸ್ಕಾರ ಪಡೆದವರಿಗೂ ಅದನ್ನು ಪ್ರದಾನ ಮಾಡಿದವರಿಗೂ ಗೌರವ, ಅಭಿನಂದನೆ ಸಲ್ಲುತ್ತದೆ.

- ಪ್ರೊ. ಆರ್.ವಿ.ಹೊರಡಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT