<p>ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಸುದ್ದಿ ನೋವು ತಂದಿದೆ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಪರೀಕ್ಷೆಯಲ್ಲಿ ಫೇಲಾದವರೆಲ್ಲ ದಡ್ಡರಲ್ಲ. ಪಾಸಾದವರೆಲ್ಲ ಬುದ್ಧಿವಂತರಲ್ಲ. ಮಕ್ಕಳಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡಬೇಕು.<br /> <br /> ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: ‘ಹಾರಲು ಆಗ ದಿದ್ದರೆ ಓಡು. ಓಡಲು ಆಗದಿದ್ದರೆ ನಡೆ. ನಡೆಯಲೂ ಆಗದಿದ್ದರೆ ತೆವಳು. ಆದರೆ ಮುಂದಕ್ಕೆ ಹೆಜ್ಜೆ ಹಾಕುವುದನ್ನು ಬಿಡಬೇಡ’. ಆತ್ಮಹತ್ಯೆಗೆ ಶರಣಾಗಿ ಹಿಂದಕ್ಕೆ ಬಾರದಷ್ಟು ಮುಂದೆ ಹೋಗು ಎಂದು ಯಾರೊಬ್ಬರೂ ಹೇಳಿಲ್ಲ. <br /> <br /> ಥಾಮಸ್ ಅಲ್ವ ಎಡಿಸನ್ ಅವರಿಗೆ ವಿದ್ಯೆ ಬರುವುದಿಲ್ಲ ಎಂದು ಹೇಳಿ ಮುಖ್ಯೋಪಾಧ್ಯಾಯರು ಅವರನ್ನು ಶಾಲೆಯಿಂದ ಮನೆಗೆ ಅಟ್ಟಿದರು. ತನ್ನನ್ನು ಶಾಲೆಯಿಂದ ಏಕೆ ಓಡಿಸಿದರು ಎಂಬುದು ಎಡಿಸನ್ ಅವರಿಗೇ ಗೊತ್ತಿರಲಿಲ್ಲ.</p>.<p>ಎಡಿಸನ್ರ ತಾಯಿಯನ್ನು ಶಾಲೆಗೆ ಕರೆಸಿ ಮುಖ್ಯೋಪಾಧ್ಯಾಯರು ‘ನಿಮ್ಮ ಮಗನಿಗೆ ವಿದ್ಯೆ ಹತ್ತುವುದಿಲ್ಲ. ಆತ ಶತ ದಡ್ಡ. ಅವನನ್ನು ಶಾಲೆಗೆ ಕಳುಹಿಸುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. <br /> <br /> ಮನೆಗೆ ಕರೆದುಕೊಂಡು ಬಂದ ತಾಯಿಯನ್ನು ತನ್ನನ್ನು ಶಾಲೆ ಬಿಡಿಸಿ ಕರೆದುಕೊಂಡು ಬಂದದ್ದು ಏಕೆ ಎಂದು ಕೇಳಿದ್ದಕ್ಕೆ ಆತನ ತಾಯಿ ‘ನೀನು ತುಂಬಾ ಬುದ್ಧಿವಂತ, ನಿನಗೆ ಶಾಲೆಯ ಅಗತ್ಯವಿಲ್ಲ. </p>.<p>ನಿನ್ನ ಬುದ್ಧಿವಂತಿಕೆಗೆ ಶಾಲೆಯಲ್ಲಿ ಪಾಠ ಹೇಳಿಕೊಡುವ ಶಿಕ್ಷಕರೇ ಇಲ್ಲ ಎಂದು ಮುಖ್ಯೋಪಾಧ್ಯಾಯರು ಹೇಳಿದರು’ ಎಂದು ದುಃಖ ಮರೆಮಾಚಿ ಮಗನನ್ನು ಹುರಿದುಂಬಿಸಿದರು.<br /> <br /> ‘ನಿನಗೆ ನಾನೇ ಪಾಠ ಹೇಳಿಕೊಡುತ್ತೇನೆ’ ಎಂದು ಹೇಳಿ ಸಮಾಧಾನ ಮಾಡಿದರು. ಎಡಿಸನ್ ಮುಂದೇನಾದರು ಎಂಬುದು ಎಲ್ಲರಿಗೂ ಗೊತ್ತು. ದೊಡ್ಡ ವಿಜ್ಞಾನಿಯಾಗಿ ವಿಶ್ವಕ್ಕೇ ದಾರಿದೀಪವಾದರು.<br /> <br /> ಮಕ್ಕಳು ವೈಫಲ್ಯಕ್ಕೆ ಎದೆಗುಂದಬಾರದು. ಪರೀಕ್ಷೆಯಲ್ಲಿ ಜೀವನವಿಲ್ಲ. ಜೀವನದಲ್ಲಿ ಪರೀಕ್ಷೆಯಿದೆ. ಜೀವನದ ಪರೀಕ್ಷೆಯಲ್ಲಿ ಗೆಲ್ಲುವ ಛಲವನ್ನು ರೂಢಿಸಿಕೊಳ್ಳಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಸುದ್ದಿ ನೋವು ತಂದಿದೆ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಪರೀಕ್ಷೆಯಲ್ಲಿ ಫೇಲಾದವರೆಲ್ಲ ದಡ್ಡರಲ್ಲ. ಪಾಸಾದವರೆಲ್ಲ ಬುದ್ಧಿವಂತರಲ್ಲ. ಮಕ್ಕಳಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡಬೇಕು.<br /> <br /> ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ: ‘ಹಾರಲು ಆಗ ದಿದ್ದರೆ ಓಡು. ಓಡಲು ಆಗದಿದ್ದರೆ ನಡೆ. ನಡೆಯಲೂ ಆಗದಿದ್ದರೆ ತೆವಳು. ಆದರೆ ಮುಂದಕ್ಕೆ ಹೆಜ್ಜೆ ಹಾಕುವುದನ್ನು ಬಿಡಬೇಡ’. ಆತ್ಮಹತ್ಯೆಗೆ ಶರಣಾಗಿ ಹಿಂದಕ್ಕೆ ಬಾರದಷ್ಟು ಮುಂದೆ ಹೋಗು ಎಂದು ಯಾರೊಬ್ಬರೂ ಹೇಳಿಲ್ಲ. <br /> <br /> ಥಾಮಸ್ ಅಲ್ವ ಎಡಿಸನ್ ಅವರಿಗೆ ವಿದ್ಯೆ ಬರುವುದಿಲ್ಲ ಎಂದು ಹೇಳಿ ಮುಖ್ಯೋಪಾಧ್ಯಾಯರು ಅವರನ್ನು ಶಾಲೆಯಿಂದ ಮನೆಗೆ ಅಟ್ಟಿದರು. ತನ್ನನ್ನು ಶಾಲೆಯಿಂದ ಏಕೆ ಓಡಿಸಿದರು ಎಂಬುದು ಎಡಿಸನ್ ಅವರಿಗೇ ಗೊತ್ತಿರಲಿಲ್ಲ.</p>.<p>ಎಡಿಸನ್ರ ತಾಯಿಯನ್ನು ಶಾಲೆಗೆ ಕರೆಸಿ ಮುಖ್ಯೋಪಾಧ್ಯಾಯರು ‘ನಿಮ್ಮ ಮಗನಿಗೆ ವಿದ್ಯೆ ಹತ್ತುವುದಿಲ್ಲ. ಆತ ಶತ ದಡ್ಡ. ಅವನನ್ನು ಶಾಲೆಗೆ ಕಳುಹಿಸುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. <br /> <br /> ಮನೆಗೆ ಕರೆದುಕೊಂಡು ಬಂದ ತಾಯಿಯನ್ನು ತನ್ನನ್ನು ಶಾಲೆ ಬಿಡಿಸಿ ಕರೆದುಕೊಂಡು ಬಂದದ್ದು ಏಕೆ ಎಂದು ಕೇಳಿದ್ದಕ್ಕೆ ಆತನ ತಾಯಿ ‘ನೀನು ತುಂಬಾ ಬುದ್ಧಿವಂತ, ನಿನಗೆ ಶಾಲೆಯ ಅಗತ್ಯವಿಲ್ಲ. </p>.<p>ನಿನ್ನ ಬುದ್ಧಿವಂತಿಕೆಗೆ ಶಾಲೆಯಲ್ಲಿ ಪಾಠ ಹೇಳಿಕೊಡುವ ಶಿಕ್ಷಕರೇ ಇಲ್ಲ ಎಂದು ಮುಖ್ಯೋಪಾಧ್ಯಾಯರು ಹೇಳಿದರು’ ಎಂದು ದುಃಖ ಮರೆಮಾಚಿ ಮಗನನ್ನು ಹುರಿದುಂಬಿಸಿದರು.<br /> <br /> ‘ನಿನಗೆ ನಾನೇ ಪಾಠ ಹೇಳಿಕೊಡುತ್ತೇನೆ’ ಎಂದು ಹೇಳಿ ಸಮಾಧಾನ ಮಾಡಿದರು. ಎಡಿಸನ್ ಮುಂದೇನಾದರು ಎಂಬುದು ಎಲ್ಲರಿಗೂ ಗೊತ್ತು. ದೊಡ್ಡ ವಿಜ್ಞಾನಿಯಾಗಿ ವಿಶ್ವಕ್ಕೇ ದಾರಿದೀಪವಾದರು.<br /> <br /> ಮಕ್ಕಳು ವೈಫಲ್ಯಕ್ಕೆ ಎದೆಗುಂದಬಾರದು. ಪರೀಕ್ಷೆಯಲ್ಲಿ ಜೀವನವಿಲ್ಲ. ಜೀವನದಲ್ಲಿ ಪರೀಕ್ಷೆಯಿದೆ. ಜೀವನದ ಪರೀಕ್ಷೆಯಲ್ಲಿ ಗೆಲ್ಲುವ ಛಲವನ್ನು ರೂಢಿಸಿಕೊಳ್ಳಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>