<p><strong>ಬೆಂಗಳೂರು:</strong> ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ ₹ 33 ಲಕ್ಷದ ಸಮೇತ‘ಸಿಎಂಎಸ್ ಇನ್ಫೊ ಸಿಸ್ಟಂ’ ಕಂಪನಿಯ ಕಸ್ಟೋಡಿಯನ್ ಪರಾರಿಯಾಗಿದ್ದಾರೆ.</p>.<p>ಪುಲಿಕೇಶಿನಗರ ಠಾಣೆಗೆ ದೂರು ನೀಡಿರುವ ಕಂಪನಿಯ ವ್ಯವಸ್ಥಾಪಕ ಶಾಂತಕುಮಾರ್, ‘ಮಾರನಕುಂಟೆ ಗ್ರಾಮದ ಅಜಯ್ಕುಮಾರ್, 2017ರಿಂದ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೇ 8ರಂದು ₹ 33 ಲಕ್ಷ ಸಮೇತ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p>‘ನಗರದಲ್ಲಿರುವ ಕೆಲ ಬ್ಯಾಂಕ್ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬುವ ಜವಾಬ್ದಾರಿಯನ್ನು ಕಂಪನಿ ವಹಿಸಿಕೊಂಡಿದೆ. ಅದರಂತೆ, ಮೇ 8ರಂದು ಯಂತ್ರಗಳಿಗೆ ತುಂಬುವುದಕ್ಕಾಗಿ ಅಜಯ್ಕುಮಾರ್ ಅವರಿಗೆ ₹ 82 ಲಕ್ಷವನ್ನು ನೀಡಲಾಗಿತ್ತು.’</p>.<p>‘ನೌಕರ ನಾಗೇಶ್ ಜೊತೆ ವಾಹನದಲ್ಲಿ ತೆರಳಿದ್ದ ಅಜಯ್, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ ಬಂದಿಲ್ಲ. ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು’ ಎಂದು ಹೇಳಿದ್ದಾರೆ.</p>.<p>‘₹ 82 ಲಕ್ಷದ ಪೈಕಿ ₹ 38 ಲಕ್ಷವನ್ನು ಯಂತ್ರಗಳಿಗೆ ತುಂಬಲಾಗಿದೆ. ₹ 11 ಲಕ್ಷವನ್ನು ವಾಹನದಲ್ಲೇ ಬಿಟ್ಟು, ₹ 33 ಲಕ್ಷವನ್ನು ತೆಗೆದುಕೊಂಡು ಅಜಯ್ಕುಮಾರ್ ಪರಾರಿಯಾಗಿದ್ದಾರೆ. ಅವರನ್ನು ಹುಡುಕಿಕೊಡಿ’ ಎಂದು ಶಾಂತಕುಮಾರ್ ಕೋರಿದ್ದಾರೆ.</p>.<p>ಪೊಲೀಸರು, ‘ಹಣ ಸಿಕ್ಕ ಕೂಡಲೇ ಆರೋಪಿ ನಗರ ಬಿಟ್ಟು ಹೋಗಿರುವ ಮಾಹಿತಿ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಟಿಎಂ ಯಂತ್ರಗಳಿಗೆ ತುಂಬಬೇಕಿದ್ದ ₹ 33 ಲಕ್ಷದ ಸಮೇತ‘ಸಿಎಂಎಸ್ ಇನ್ಫೊ ಸಿಸ್ಟಂ’ ಕಂಪನಿಯ ಕಸ್ಟೋಡಿಯನ್ ಪರಾರಿಯಾಗಿದ್ದಾರೆ.</p>.<p>ಪುಲಿಕೇಶಿನಗರ ಠಾಣೆಗೆ ದೂರು ನೀಡಿರುವ ಕಂಪನಿಯ ವ್ಯವಸ್ಥಾಪಕ ಶಾಂತಕುಮಾರ್, ‘ಮಾರನಕುಂಟೆ ಗ್ರಾಮದ ಅಜಯ್ಕುಮಾರ್, 2017ರಿಂದ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೇ 8ರಂದು ₹ 33 ಲಕ್ಷ ಸಮೇತ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.</p>.<p>‘ನಗರದಲ್ಲಿರುವ ಕೆಲ ಬ್ಯಾಂಕ್ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬುವ ಜವಾಬ್ದಾರಿಯನ್ನು ಕಂಪನಿ ವಹಿಸಿಕೊಂಡಿದೆ. ಅದರಂತೆ, ಮೇ 8ರಂದು ಯಂತ್ರಗಳಿಗೆ ತುಂಬುವುದಕ್ಕಾಗಿ ಅಜಯ್ಕುಮಾರ್ ಅವರಿಗೆ ₹ 82 ಲಕ್ಷವನ್ನು ನೀಡಲಾಗಿತ್ತು.’</p>.<p>‘ನೌಕರ ನಾಗೇಶ್ ಜೊತೆ ವಾಹನದಲ್ಲಿ ತೆರಳಿದ್ದ ಅಜಯ್, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆಂದು ಹೋದವರು ವಾಪಸ್ ಬಂದಿಲ್ಲ. ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು’ ಎಂದು ಹೇಳಿದ್ದಾರೆ.</p>.<p>‘₹ 82 ಲಕ್ಷದ ಪೈಕಿ ₹ 38 ಲಕ್ಷವನ್ನು ಯಂತ್ರಗಳಿಗೆ ತುಂಬಲಾಗಿದೆ. ₹ 11 ಲಕ್ಷವನ್ನು ವಾಹನದಲ್ಲೇ ಬಿಟ್ಟು, ₹ 33 ಲಕ್ಷವನ್ನು ತೆಗೆದುಕೊಂಡು ಅಜಯ್ಕುಮಾರ್ ಪರಾರಿಯಾಗಿದ್ದಾರೆ. ಅವರನ್ನು ಹುಡುಕಿಕೊಡಿ’ ಎಂದು ಶಾಂತಕುಮಾರ್ ಕೋರಿದ್ದಾರೆ.</p>.<p>ಪೊಲೀಸರು, ‘ಹಣ ಸಿಕ್ಕ ಕೂಡಲೇ ಆರೋಪಿ ನಗರ ಬಿಟ್ಟು ಹೋಗಿರುವ ಮಾಹಿತಿ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>