<p>ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂತ್ಯಸಂಸ್ಕಾರ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿದೆ.</p><p>ಈ ಯೋಜನೆಯ ಅಡಿಯಲ್ಲಿ ಕೆಲಸದ ವೇಳೆ ಕಾರ್ಮಿಕರು ಆಕಾಲಿಕವಾಗಿ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.</p><p>ರಾಜ್ಯ ಸರ್ಕಾರವು ಹೇಳಿರುವಂತೆ 2025ರ ಜುಲೈ 16ರ ನಂತರ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆಗೆ ₹4 ಸಾವಿರ ಹಾಗೂ ಪರಿಹಾರ ಧನ ₹1.46 ಲಕ್ಷ ಸೇರಿದಂತೆ ಆ ಕುಟುಂಬಕ್ಕೆ ಒಟ್ಟು ₹1.50 ಲಕ್ಷ ಸಿಗಲಿದೆ. ಒಂದು ವೇಳೆ ಕಾರ್ಮಿಕನ ಮರಣವು ಮೇಲೆ ತಿಳಿಸಿದ ದಿನಾಂಕಕ್ಕಿಂತ ಮೊದಲು ಸಂಭವಿಸಿದ್ದರೆ ಪರಿಹಾರದ ಹಣ ₹75 ಸಾವಿರ ದೊರೆಯಲಿದೆ. </p>.ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ ಸೌಲಭ್ಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.<p><strong>ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು?</strong></p><ul><li><p>ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು.</p></li><li><p>ಮೃತ ಕಾರ್ಮಿಕ ಯಾರ ಹೆಸರನ್ನು ನಾಮಿನಿಯಾಗಿ ನೀಡಿರುತ್ತಾರೋ ಅವರು ಈ ಸೌಲಭ್ಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು. </p></li><li><p>ಕಾರ್ಮಿಕನ ಮರಣ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. </p></li><li><p>ಮರಣದ ಸಮಯದಲ್ಲಿ ಅವರ ನೋಂದಣಿಯು ಸಕ್ರಿಯವಾಗಿರಬೇಕು. </p></li><li><p>ಕಾರ್ಮಿಕನು 2025ರ ಜುಲೈ 16ರ ನಂತರದಲ್ಲಿ ಮೃತ ಹೊಂದಿದ್ದರೆ ಪರಿಷ್ಕೃತ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.</p></li><li><p>ಈ ಹಿಂದಿನ ದಿನಾಂಕಗಳಲ್ಲಿ ಮರಣ ಹೊಂದಿದಲ್ಲಿ ಅರ್ಜಿದಾರರು ಹಳೆಯ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.</p></li></ul><p><strong>ಅಗತ್ಯವಿರುವ ದಾಖಲೆಗಳು ಯಾವುವು?</strong> </p><ul><li><p>ಉದ್ಯೋಗದಾತರ ಪ್ರಮಾಣಪತ್ರ</p></li><li><p>ಬ್ಯಾಂಕ್ ಖಾತೆ ಪುಸ್ತಕ (ಫಲಾನುಭವಿ ಅಥವಾ ನಾಮಿನಿಯದ್ದು).</p></li><li><p>ರೇಷನ್ ಕಾರ್ಡ್</p></li><li><p>ಕಾರ್ಮಿಕ ಗುರುತಿನ ಚೀಟಿ.</p></li><li><p>ಆಧಾರ್ ಕಾರ್ಡ್</p></li><li><p>ಮರಣ ಪ್ರಮಾಣಪತ್ರ.</p></li><li><p>ಭಾವಚಿತ್ರ</p></li><li><p>ಉದ್ಯೋಗ ಪ್ರಮಾಣಪತ್ರ </p></li></ul>.ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ .<p><strong>ನೋಂದಣಿ ಹೇಗೆ?</strong></p><ul><li><p>‘KBOCWWB‘ ಅಧಿಕೃತ ಅಂತರ್ಜಾಲ ತಾಣ <a href="https://kbocwwb.karnataka.gov.in/login">https://kbocwwb.karnataka.gov.in/login</a> ಗೆ ಭೇಟಿ ನೀಡಬೇಕು. ಬಳಿಕ ’ನೋಂದಣಿ’ಯನ್ನು ಆಯ್ಕೆ ಮಾಡಿ.</p></li><li><p>ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಪರಿಶೀಲನೆ ಪಡೆದುಕೊಳ್ಳಿ.</p></li><li><p>ನಂತರ ’ನೋಂದಣಿ’ ಆಯ್ಕೆ ಮಾಡಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿದರೆ ನೋಂದಾಣಿಯಾಗುತ್ತದೆ. </p></li></ul><p><strong>ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?</strong></p><ul><li><p>ಅರ್ಜಿದಾರನು ಫಾರ್ಮ್ ಹದಿನೆಂಟು ಅನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸಬೇಕು. </p></li><li><p>ಅರ್ಜಿಯೊಂದಿಗೆ ಮೃತರ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.</p></li><li><p>ಗುರುತಿನ ಚೀಟಿ ಅಥವಾ ಕಾರ್ಮಿಕರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.</p></li><li><p>ಈ ಸೌಲಭ್ಯವನ್ನು ಮೃತರಾದ ಸಮಯದಿಂದ 1 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂತ್ಯಸಂಸ್ಕಾರ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿದೆ.</p><p>ಈ ಯೋಜನೆಯ ಅಡಿಯಲ್ಲಿ ಕೆಲಸದ ವೇಳೆ ಕಾರ್ಮಿಕರು ಆಕಾಲಿಕವಾಗಿ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಸಿಗುವ ಲಾಭಗಳೇನು? ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.</p><p>ರಾಜ್ಯ ಸರ್ಕಾರವು ಹೇಳಿರುವಂತೆ 2025ರ ಜುಲೈ 16ರ ನಂತರ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆಗೆ ₹4 ಸಾವಿರ ಹಾಗೂ ಪರಿಹಾರ ಧನ ₹1.46 ಲಕ್ಷ ಸೇರಿದಂತೆ ಆ ಕುಟುಂಬಕ್ಕೆ ಒಟ್ಟು ₹1.50 ಲಕ್ಷ ಸಿಗಲಿದೆ. ಒಂದು ವೇಳೆ ಕಾರ್ಮಿಕನ ಮರಣವು ಮೇಲೆ ತಿಳಿಸಿದ ದಿನಾಂಕಕ್ಕಿಂತ ಮೊದಲು ಸಂಭವಿಸಿದ್ದರೆ ಪರಿಹಾರದ ಹಣ ₹75 ಸಾವಿರ ದೊರೆಯಲಿದೆ. </p>.ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ ಸೌಲಭ್ಯ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.<p><strong>ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು?</strong></p><ul><li><p>ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು.</p></li><li><p>ಮೃತ ಕಾರ್ಮಿಕ ಯಾರ ಹೆಸರನ್ನು ನಾಮಿನಿಯಾಗಿ ನೀಡಿರುತ್ತಾರೋ ಅವರು ಈ ಸೌಲಭ್ಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು. </p></li><li><p>ಕಾರ್ಮಿಕನ ಮರಣ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. </p></li><li><p>ಮರಣದ ಸಮಯದಲ್ಲಿ ಅವರ ನೋಂದಣಿಯು ಸಕ್ರಿಯವಾಗಿರಬೇಕು. </p></li><li><p>ಕಾರ್ಮಿಕನು 2025ರ ಜುಲೈ 16ರ ನಂತರದಲ್ಲಿ ಮೃತ ಹೊಂದಿದ್ದರೆ ಪರಿಷ್ಕೃತ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.</p></li><li><p>ಈ ಹಿಂದಿನ ದಿನಾಂಕಗಳಲ್ಲಿ ಮರಣ ಹೊಂದಿದಲ್ಲಿ ಅರ್ಜಿದಾರರು ಹಳೆಯ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.</p></li></ul><p><strong>ಅಗತ್ಯವಿರುವ ದಾಖಲೆಗಳು ಯಾವುವು?</strong> </p><ul><li><p>ಉದ್ಯೋಗದಾತರ ಪ್ರಮಾಣಪತ್ರ</p></li><li><p>ಬ್ಯಾಂಕ್ ಖಾತೆ ಪುಸ್ತಕ (ಫಲಾನುಭವಿ ಅಥವಾ ನಾಮಿನಿಯದ್ದು).</p></li><li><p>ರೇಷನ್ ಕಾರ್ಡ್</p></li><li><p>ಕಾರ್ಮಿಕ ಗುರುತಿನ ಚೀಟಿ.</p></li><li><p>ಆಧಾರ್ ಕಾರ್ಡ್</p></li><li><p>ಮರಣ ಪ್ರಮಾಣಪತ್ರ.</p></li><li><p>ಭಾವಚಿತ್ರ</p></li><li><p>ಉದ್ಯೋಗ ಪ್ರಮಾಣಪತ್ರ </p></li></ul>.ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ .<p><strong>ನೋಂದಣಿ ಹೇಗೆ?</strong></p><ul><li><p>‘KBOCWWB‘ ಅಧಿಕೃತ ಅಂತರ್ಜಾಲ ತಾಣ <a href="https://kbocwwb.karnataka.gov.in/login">https://kbocwwb.karnataka.gov.in/login</a> ಗೆ ಭೇಟಿ ನೀಡಬೇಕು. ಬಳಿಕ ’ನೋಂದಣಿ’ಯನ್ನು ಆಯ್ಕೆ ಮಾಡಿ.</p></li><li><p>ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಪರಿಶೀಲನೆ ಪಡೆದುಕೊಳ್ಳಿ.</p></li><li><p>ನಂತರ ’ನೋಂದಣಿ’ ಆಯ್ಕೆ ಮಾಡಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿದರೆ ನೋಂದಾಣಿಯಾಗುತ್ತದೆ. </p></li></ul><p><strong>ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?</strong></p><ul><li><p>ಅರ್ಜಿದಾರನು ಫಾರ್ಮ್ ಹದಿನೆಂಟು ಅನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸಬೇಕು. </p></li><li><p>ಅರ್ಜಿಯೊಂದಿಗೆ ಮೃತರ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.</p></li><li><p>ಗುರುತಿನ ಚೀಟಿ ಅಥವಾ ಕಾರ್ಮಿಕರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.</p></li><li><p>ಈ ಸೌಲಭ್ಯವನ್ನು ಮೃತರಾದ ಸಮಯದಿಂದ 1 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>