ಸಾವರ್, ಬಾಂಗ್ಲಾದೇಶ: ಸೌರಭ್ ದುಬೆ (26ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ನಾಯಕ ಬಿ.ಆರ್.ಶರತ್ (49; 49ಎ, 8ಬೌಂ, 1ಸಿ) ಮತ್ತು ಸನ್ವೀರ್ ಸಿಂಗ್ (56; 73ಎ, 4ಬೌಂ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತದ 23 ವರ್ಷದೊಳಗಿನವರ ತಂಡ ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್ಗಳಿಂದ ನೇಪಾಳ ತಂಡವನ್ನು ಮಣಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ 44.5 ಓವರ್ಗಳಲ್ಲಿ 193ರನ್ ಗಳಿಸಿತು. ಸುಲಭ ಗುರಿಯನ್ನು ಕನ್ನಡಿಗ ಶರತ್ ಸಾರಥ್ಯದ ಭಾರತ 42 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮುಟ್ಟಿತು.