<p><strong>ಬೆಂಗಳೂರು</strong>: ಮಧ್ಯಪ್ರದೇಶ ತಂಡವು ಸೋಮವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್ ವಿರುದ್ಧದ ಫೈನಲ್ ಪಂದ್ಯವು ಡ್ರಾನಲ್ಲಿ ಮುಕ್ತಾಯಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ಪ್ರಶಸ್ತಿ ಗೆದ್ದಿತು.</p>.<p>ಮೊದಲ ಇನಿಂಗ್ಸ್ನಲ್ಲಿ 20 ರನ್ಗಳ ಮುನ್ನಡೆ ಪಡೆದಿದ್ದ ಮಧ್ಯಪ್ರದೇಶ ತಂಡವು, ಕೊನೆಯ ದಿನ ಎರಡನೇ ಇನಿಂಗ್ಸ್ನಲ್ಲಿ 85.1 ಓವರ್ಗಳಲ್ಲಿ 242 ರನ್ ಗಳಿಸಿ ಆಲೌಟ್ ಆಯಿತು. ಭಾನುವಾರ 4 ವಿಕೆಟ್ಗೆ 96 ರನ್ ಗಳಿಸಿದ್ದ ತಂಡಕ್ಕೆ ವೆಂಕಟೇಶ್ ಅಯ್ಯರ್ (79) ಆಸರೆಯಾದರು. ಇಲೆವೆನ್ ತಂಡದ ಧ್ರುವ್ ಪಿ. ಮತ್ತು ಮಾಧವ್ ಪಿ. ಬಜಾಜ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಪಡೆದರು. </p>.<p>ಗೆಲುವಿಗೆ 263 ರನ್ಗಳ ಗುರಿ ಪಡೆದ ಇಲೆವೆನ್ ತಂಡವು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಇಳಿಯಿತು. ಆದರೆ, ರನ್ ವೇಗವನ್ನು ಹೆಚ್ಚಿಸುವ ಭರದಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ದಿನದಾಟದ ಅಂತ್ಯಕ್ಕೆ 29 ಓವರ್ಗಳಲ್ಲಿ 7 ವಿಕೆಟ್ಗೆ 168 ರನ್ ಗಳಿಸಿ ಡ್ರಾ ಮಾಡಿಕೊಂಡಿತು. ವೆಂಕಟೇಶ್ ಎಂ. (38), ಕೃತಿಕ್ ಕೃಷ್ಣ (34) ಕೊಂಚ ಹೋರಾಟ ತೋರಿದರು. ಎದುರಾಳಿ ತಂಡದ ಆರ್ಯನ್ ಮತ್ತು ಅರ್ಷದ್ ಖಾನ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು. </p>.<p>ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: 338 ಮತ್ತು 85.1 ಓವರ್ಗಳಲ್ಲಿ 242 (ರಿಷಭ್ ಚವ್ಹಾಣ್ 35, ವೆಂಕಟೇಶ್ ಅಯ್ಯರ್ 79, ಆರ್ಯನ್ ಪಾಂಡೆ 42; ಧ್ರುವ್ ಪಿ. 52ಕ್ಕೆ 4, ಮಾಧವ್ ಪಿ. ಬಜಾಜ್ 86ಕ್ಕೆ 3). ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್: 318 ಮತ್ತು 29 ಓವರ್ಗಳಲ್ಲಿ 7 ವಿಕೆಟ್ಗೆ 168 (ವೆಂಕಟೇಶ್ ಎಂ. 38, ರಾಜವೀರ್ ವಾಧ್ವಾ 32, ಕೃತಿಕ್ ಕೃಷ್ಣ 34; ಆರ್ಯನ್ ಪಾಂಡೆ 46ಕ್ಕೆ 3, ಅರ್ಷದ್ ಖಾನ್ 46ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಧ್ಯಪ್ರದೇಶ ತಂಡವು ಸೋಮವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್ ವಿರುದ್ಧದ ಫೈನಲ್ ಪಂದ್ಯವು ಡ್ರಾನಲ್ಲಿ ಮುಕ್ತಾಯಗೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ಪ್ರಶಸ್ತಿ ಗೆದ್ದಿತು.</p>.<p>ಮೊದಲ ಇನಿಂಗ್ಸ್ನಲ್ಲಿ 20 ರನ್ಗಳ ಮುನ್ನಡೆ ಪಡೆದಿದ್ದ ಮಧ್ಯಪ್ರದೇಶ ತಂಡವು, ಕೊನೆಯ ದಿನ ಎರಡನೇ ಇನಿಂಗ್ಸ್ನಲ್ಲಿ 85.1 ಓವರ್ಗಳಲ್ಲಿ 242 ರನ್ ಗಳಿಸಿ ಆಲೌಟ್ ಆಯಿತು. ಭಾನುವಾರ 4 ವಿಕೆಟ್ಗೆ 96 ರನ್ ಗಳಿಸಿದ್ದ ತಂಡಕ್ಕೆ ವೆಂಕಟೇಶ್ ಅಯ್ಯರ್ (79) ಆಸರೆಯಾದರು. ಇಲೆವೆನ್ ತಂಡದ ಧ್ರುವ್ ಪಿ. ಮತ್ತು ಮಾಧವ್ ಪಿ. ಬಜಾಜ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಪಡೆದರು. </p>.<p>ಗೆಲುವಿಗೆ 263 ರನ್ಗಳ ಗುರಿ ಪಡೆದ ಇಲೆವೆನ್ ತಂಡವು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಇಳಿಯಿತು. ಆದರೆ, ರನ್ ವೇಗವನ್ನು ಹೆಚ್ಚಿಸುವ ಭರದಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ದಿನದಾಟದ ಅಂತ್ಯಕ್ಕೆ 29 ಓವರ್ಗಳಲ್ಲಿ 7 ವಿಕೆಟ್ಗೆ 168 ರನ್ ಗಳಿಸಿ ಡ್ರಾ ಮಾಡಿಕೊಂಡಿತು. ವೆಂಕಟೇಶ್ ಎಂ. (38), ಕೃತಿಕ್ ಕೃಷ್ಣ (34) ಕೊಂಚ ಹೋರಾಟ ತೋರಿದರು. ಎದುರಾಳಿ ತಂಡದ ಆರ್ಯನ್ ಮತ್ತು ಅರ್ಷದ್ ಖಾನ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರು. </p>.<p>ಸಂಕ್ಷಿಪ್ತ ಸ್ಕೋರ್: ಮಧ್ಯಪ್ರದೇಶ: 338 ಮತ್ತು 85.1 ಓವರ್ಗಳಲ್ಲಿ 242 (ರಿಷಭ್ ಚವ್ಹಾಣ್ 35, ವೆಂಕಟೇಶ್ ಅಯ್ಯರ್ 79, ಆರ್ಯನ್ ಪಾಂಡೆ 42; ಧ್ರುವ್ ಪಿ. 52ಕ್ಕೆ 4, ಮಾಧವ್ ಪಿ. ಬಜಾಜ್ 86ಕ್ಕೆ 3). ಕೆಎಸ್ಸಿಎ ಕಾರ್ಯದರ್ಶಿ ಇಲೆವೆನ್: 318 ಮತ್ತು 29 ಓವರ್ಗಳಲ್ಲಿ 7 ವಿಕೆಟ್ಗೆ 168 (ವೆಂಕಟೇಶ್ ಎಂ. 38, ರಾಜವೀರ್ ವಾಧ್ವಾ 32, ಕೃತಿಕ್ ಕೃಷ್ಣ 34; ಆರ್ಯನ್ ಪಾಂಡೆ 46ಕ್ಕೆ 3, ಅರ್ಷದ್ ಖಾನ್ 46ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>