ಆಟಗಾರರು ಕೋವಿಡ್ ಸೋಂಕಿಗೆ ಒಳಗಾದ ಬೆನ್ನಲ್ಲೇ ಸುರೇಶ್ ರೈನಾ ‘ವೈಯಕ್ತಿಕ’ ಕಾರಣ ನೀಡಿ ತಾಯ್ನಾಡಿಗೆ ಮರಳಿದ್ದು ಸಿಎಸ್ಕೆ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಇದೀಗ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ತಂಡ ನಿಟ್ಟುಸಿರು ಬಿಟ್ಟಿದೆ. ದೀಪಕ್, ಋತುರಾಜ್ ಮತ್ತು 11 ಸಿಬ್ಬಂದಿಯ 14 ದಿನಗಳ ಪ್ರತ್ಯೇಕತಾವಾಸ ಮುಂದಿನ ವಾರದ ಕೊನೆಯಲ್ಲಿ ಮುಗಿಯಲಿದೆ. ತರಬೇತಿಗೆ ಹಾಜರಾಗುವ ಮುನ್ನ ಅವರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.