‘ಭಾರತ ತಂಡವು ಈಗ ಯಶಸ್ಸಿನ ಉತ್ತುಂಗದಲ್ಲಿದೆ. ಈ ಬಾರಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ನಾಲ್ಕನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಅವರ ಬದಲು ಈ ಕ್ರಮಾಂಕದಲ್ಲಿ ಧೋನಿಯವರನ್ನು ಆಡಿಸಬೇಕು. ಜೊತೆಗೆ ರವೀಂದ್ರ ಜಡೇಜ ಅವರಿಗೂ ಆಡುವ ಬಳಗದಲ್ಲಿ ಸ್ಥಾನ ನೀಡುವುದು ಅಗತ್ಯ. ಆಗ ಹೆಚ್ಚುವರಿ ಸ್ಪಿನ್ನರ್ ಒಬ್ಬರು ಸಿಕ್ಕಂತಾಗುತ್ತದೆ’ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ತಿಳಿಸಿದ್ದಾರೆ.