<p><strong>ಪೊಷೆಸ್ಟ್ರೂಮ್:</strong>19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಗೆಲುವಿನ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ ಬಾಂಗ್ಲಾದೇಶ ತಂಡದ ಮೂವರು ಮತ್ತು ಸೋಲಿನ ನಿರಾಸೆಯಲ್ಲಿದ್ದ ಭಾರತ ತಂಡದ ಇಬ್ಬರು ಆಟಗಾರರುದುರ್ವರ್ತನೆ ತೋರಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಐಸಿಸಿ ಹೇಳಿದೆ.</p>.<p>ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಪಡೆ ಭಾರತ ವಿರುದ್ಧ ಮೂರು ವಿಕೆಟ್ಗಳ ಜಯ ಸಾಧಿಸಿತ್ತು. ಐತಿಹಾಸಿಕ ಜಯವನ್ನು ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತಆಕ್ರಮಣಕಾರಿಯಾಗಿ ಸನ್ನೆ ಮಾಡಿ ಉದ್ಧಟತನ ತೋರಿದ್ದರು. ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡಿದ್ದರು.</p>.<p>ಇದರಿಂದ ಕೆರಳಿದ್ದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು. ಉಭಯ ತಂಡದ ಕೆಲ ಆಟಗಾರರು ಒಬ್ಬರನ್ನೊಬ್ಬರು ತಳ್ಳುತ್ತಾಕೈಕೈ ಮಿಲಾಯಿಸುವ ಹಂತಕ್ಕೆ ಸಾಗಿದ್ದರು. ಈ ವೇಳೆ ಅಂಪೈರ್ಗಳು ಮತ್ತುಭಾರತದ ನಾಯಕ ಪ್ರಿಯಂಮ ಗರ್ಗ್, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/icc-has-taken-bangladesh-aggressive-celebrations-very-seriously-indian-team-manager-anil-patel-bcci-704288.html" target="_blank">ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’</a></p>.<p>ಘಟನೆಯ ವಿಡಿಯೊಗಳನ್ನು ಪರಿಶೀಲಿಸಿರುವ ಐಸಿಸಿ ಎರಡೂ ತಂಡಗಳ ಒಟ್ಟು ಐವರು ಆಟಗಾರರು ದುರ್ನಡತೆ ತೋರಿದ್ದಾರೆ ಎಂದು ಹೇಳಿದೆ. ಮುಂದುವರಿದು ಇಂತಹ ವರ್ತನೆಗಳಿಗೆ ‘ನಮ್ಮ ಕ್ರೀಡೆಯಲ್ಲಿ ಅವಕಾಶವಿಲ್ಲ’ ಎಂದು ಕಟುವಾಗಿ ಹೇಳಿದೆ.</p>.<p>‘ಪಂದ್ಯದ ಬಳಿಕ ಕೆಲವು ಆಟಗಾರರು ತೋರಿದ ಸಂಭ್ರಮ ಮತ್ತು ನಿರಾಸೆಯ ವರ್ತನೆಗಳಿಗೆ ನಮ್ಮ ಕ್ರೀಡೆಯಲ್ಲಿ ಸ್ಥಳಾವಕಾಶವಿಲ್ಲ’ ಎಂದು ಐಸಿಸಿಯ ವ್ಯವಸ್ಥಾಪಕ ನಿರ್ದೇಶಕ ಗಿಯಾಫ್ ಅಲ್ಲಾರ್ಡೈಸ್ ಹೇಳಿದ್ದಾರೆ.</p>.<p>‘ಹೃದಯದಲ್ಲಿಗೌರವವನ್ನು ಹೊಂದಿರುವುದುಕ್ರಿಕೆಟ್ನ ಸ್ಫೂರ್ತಿಯಾಗಿದೆ. ಎದುರಾಳಿ ತಂಡದ ಯಶಸ್ಸನ್ನು ಬೆಂಬಲಿಸುವುದನ್ನು, ತಮ್ಮ ತಂಡದ ಗೆಲುವುನ್ನು ಸಂಭ್ರಮಿಸುವುದನ್ನು ಹಾಗೂಸ್ವಯಂ ಶಿಸ್ತನ್ನು ಆಟಗಾರನಿಂದ ನಿರೀಕ್ಷಿಸಲಾಗುತ್ತದೆ’</p>.<p>‘ನಿಕಟ ಪೈಪೋಟಿ ಕಂಡ ಪಂದ್ಯದ ಬಳಿಕ ಆಟಗಾರರ ನೀತಿ ಸಂಹಿತೆಯನ್ನು ಹೇರಬೇಕಿರುವುದು ನಿರಾಶಾದಾಯಕವಾದದ್ದಾಗಿದೆ. ಆದರೂ, ಈ ಯುವ ಆಟಗಾರರ ವರ್ತನೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬದಲಿಸಬೇಕಿರುವುದರಿಂದ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/yashasvi-jaiswal-gets-most-runs-and-ravi-bishnoi-gets-most-wickets-in-2020-u19-world-cup-priyam-garg-704248.html" target="_blank">ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ</a></p>.<p>ಐಸಿಸಿಯನೀತಿ ಸಂಹಿತೆ ಉಲ್ಲಂಘಿಸಿದ ಕಾರಣಬಾಂಗ್ಲಾದೇಶ ತಂಡದತೌಹಿದ್ ಹೃದಯ್, ಶಮೀಮ್ ಹುಸೇನ್ ಹಾಗೂ ರಕಿಬುಲ್ ಹಸನ್ ಅವರಿಗೆ ತಲಾ 6 ಡಿಮೆರಿಟ್ ಪಾಯಿಂಟ್ಸ್ ಮತ್ತು ಭಾರತದ ಆಕಾಶ್ ಸಿಂಗ್, ರವಿ ಬಿಷ್ಣೋಯಿ ಅವರಿಗೆ ತಲಾ 5 ಡಿಮೆರಿಟ್ ಪಾಯಿಂಟ್ಸ್ ಹಾಕಲಾಗಿದೆ.</p>.<p>ಬಿಷ್ಣೋಯಿ ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳನ್ನು ಗಳಿಸಿಕೊಂಡಿದ್ದರು. ಮಾತ್ರವಲ್ಲದೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್ (17) ಗಳಿಸಿಕೊಂಡ ಸಾಧನೆ ಮಾಡಿದ್ದರು. ಅವರು, ಅಗೌರವ ತೋರುವ ಭಾಷೆ, ಸನ್ನೆ ಬಳಸಿದ್ದು, ಬ್ಯಾಟ್ಸ್ಮನ್ಗಳಿಗೆ ಆಕ್ರಮಣಕಾರಿ ರೀತಿಯಲ್ಲಿ ಪ್ರಚೋದನೆ ನೀಡಿದ್ದಾರೆ ಎಂದು ಐಸಿಸಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊಷೆಸ್ಟ್ರೂಮ್:</strong>19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಗೆಲುವಿನ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ ಬಾಂಗ್ಲಾದೇಶ ತಂಡದ ಮೂವರು ಮತ್ತು ಸೋಲಿನ ನಿರಾಸೆಯಲ್ಲಿದ್ದ ಭಾರತ ತಂಡದ ಇಬ್ಬರು ಆಟಗಾರರುದುರ್ವರ್ತನೆ ತೋರಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಐಸಿಸಿ ಹೇಳಿದೆ.</p>.<p>ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಪಡೆ ಭಾರತ ವಿರುದ್ಧ ಮೂರು ವಿಕೆಟ್ಗಳ ಜಯ ಸಾಧಿಸಿತ್ತು. ಐತಿಹಾಸಿಕ ಜಯವನ್ನು ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತಆಕ್ರಮಣಕಾರಿಯಾಗಿ ಸನ್ನೆ ಮಾಡಿ ಉದ್ಧಟತನ ತೋರಿದ್ದರು. ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡಿದ್ದರು.</p>.<p>ಇದರಿಂದ ಕೆರಳಿದ್ದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು. ಉಭಯ ತಂಡದ ಕೆಲ ಆಟಗಾರರು ಒಬ್ಬರನ್ನೊಬ್ಬರು ತಳ್ಳುತ್ತಾಕೈಕೈ ಮಿಲಾಯಿಸುವ ಹಂತಕ್ಕೆ ಸಾಗಿದ್ದರು. ಈ ವೇಳೆ ಅಂಪೈರ್ಗಳು ಮತ್ತುಭಾರತದ ನಾಯಕ ಪ್ರಿಯಂಮ ಗರ್ಗ್, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/icc-has-taken-bangladesh-aggressive-celebrations-very-seriously-indian-team-manager-anil-patel-bcci-704288.html" target="_blank">ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’</a></p>.<p>ಘಟನೆಯ ವಿಡಿಯೊಗಳನ್ನು ಪರಿಶೀಲಿಸಿರುವ ಐಸಿಸಿ ಎರಡೂ ತಂಡಗಳ ಒಟ್ಟು ಐವರು ಆಟಗಾರರು ದುರ್ನಡತೆ ತೋರಿದ್ದಾರೆ ಎಂದು ಹೇಳಿದೆ. ಮುಂದುವರಿದು ಇಂತಹ ವರ್ತನೆಗಳಿಗೆ ‘ನಮ್ಮ ಕ್ರೀಡೆಯಲ್ಲಿ ಅವಕಾಶವಿಲ್ಲ’ ಎಂದು ಕಟುವಾಗಿ ಹೇಳಿದೆ.</p>.<p>‘ಪಂದ್ಯದ ಬಳಿಕ ಕೆಲವು ಆಟಗಾರರು ತೋರಿದ ಸಂಭ್ರಮ ಮತ್ತು ನಿರಾಸೆಯ ವರ್ತನೆಗಳಿಗೆ ನಮ್ಮ ಕ್ರೀಡೆಯಲ್ಲಿ ಸ್ಥಳಾವಕಾಶವಿಲ್ಲ’ ಎಂದು ಐಸಿಸಿಯ ವ್ಯವಸ್ಥಾಪಕ ನಿರ್ದೇಶಕ ಗಿಯಾಫ್ ಅಲ್ಲಾರ್ಡೈಸ್ ಹೇಳಿದ್ದಾರೆ.</p>.<p>‘ಹೃದಯದಲ್ಲಿಗೌರವವನ್ನು ಹೊಂದಿರುವುದುಕ್ರಿಕೆಟ್ನ ಸ್ಫೂರ್ತಿಯಾಗಿದೆ. ಎದುರಾಳಿ ತಂಡದ ಯಶಸ್ಸನ್ನು ಬೆಂಬಲಿಸುವುದನ್ನು, ತಮ್ಮ ತಂಡದ ಗೆಲುವುನ್ನು ಸಂಭ್ರಮಿಸುವುದನ್ನು ಹಾಗೂಸ್ವಯಂ ಶಿಸ್ತನ್ನು ಆಟಗಾರನಿಂದ ನಿರೀಕ್ಷಿಸಲಾಗುತ್ತದೆ’</p>.<p>‘ನಿಕಟ ಪೈಪೋಟಿ ಕಂಡ ಪಂದ್ಯದ ಬಳಿಕ ಆಟಗಾರರ ನೀತಿ ಸಂಹಿತೆಯನ್ನು ಹೇರಬೇಕಿರುವುದು ನಿರಾಶಾದಾಯಕವಾದದ್ದಾಗಿದೆ. ಆದರೂ, ಈ ಯುವ ಆಟಗಾರರ ವರ್ತನೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬದಲಿಸಬೇಕಿರುವುದರಿಂದ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/yashasvi-jaiswal-gets-most-runs-and-ravi-bishnoi-gets-most-wickets-in-2020-u19-world-cup-priyam-garg-704248.html" target="_blank">ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ</a></p>.<p>ಐಸಿಸಿಯನೀತಿ ಸಂಹಿತೆ ಉಲ್ಲಂಘಿಸಿದ ಕಾರಣಬಾಂಗ್ಲಾದೇಶ ತಂಡದತೌಹಿದ್ ಹೃದಯ್, ಶಮೀಮ್ ಹುಸೇನ್ ಹಾಗೂ ರಕಿಬುಲ್ ಹಸನ್ ಅವರಿಗೆ ತಲಾ 6 ಡಿಮೆರಿಟ್ ಪಾಯಿಂಟ್ಸ್ ಮತ್ತು ಭಾರತದ ಆಕಾಶ್ ಸಿಂಗ್, ರವಿ ಬಿಷ್ಣೋಯಿ ಅವರಿಗೆ ತಲಾ 5 ಡಿಮೆರಿಟ್ ಪಾಯಿಂಟ್ಸ್ ಹಾಕಲಾಗಿದೆ.</p>.<p>ಬಿಷ್ಣೋಯಿ ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳನ್ನು ಗಳಿಸಿಕೊಂಡಿದ್ದರು. ಮಾತ್ರವಲ್ಲದೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್ (17) ಗಳಿಸಿಕೊಂಡ ಸಾಧನೆ ಮಾಡಿದ್ದರು. ಅವರು, ಅಗೌರವ ತೋರುವ ಭಾಷೆ, ಸನ್ನೆ ಬಳಸಿದ್ದು, ಬ್ಯಾಟ್ಸ್ಮನ್ಗಳಿಗೆ ಆಕ್ರಮಣಕಾರಿ ರೀತಿಯಲ್ಲಿ ಪ್ರಚೋದನೆ ನೀಡಿದ್ದಾರೆ ಎಂದು ಐಸಿಸಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>