ಆರ್.ಅಶ್ವಿನ್ ಎಸೆದ 67ನೇ ಓವರ್ನಲ್ಲಿ ವಿಲ್ ಯಂಗ್ ಅವರು ರನ್ ಗಳಿಸಲು ಪ್ರಯತ್ನಿಸಿದರು. ಆದರೆ, ಬಾಲ್ ಬ್ಯಾಟ್ಗೆ ಬಡಿದು ವಿಕೆಟ್ ಕೀಪರ್ ಭರತ್ ಕೈಸೇರಿತು. ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಭರತ್, ತಕ್ಷಣ ಡಿಆರ್ಎಸ್ ಪಡೆಯುವಂತೆ ನಾಯಕ ಅಜಿಂಕ್ಯ ರಹಾನೆಗೆ ಸೂಚಿಸಿದರು. ಡಿಆರ್ಎಸ್ ರಿವ್ಯೂ ಔಟ್ ಆಗಿತ್ತು.