ಇದೇ ವರ್ಷ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ನಂತರವೂ ಇವರಿಬ್ಬರ ಮುನಿಸು ಪ್ರದರ್ಶನವಾಗಿತ್ತು. ಕೊನೆಗೆ ಲಖನೌ ನಾಯಕ ಕೆ.ಎಲ್ ರಾಹುಲ್ ರಾಹುಲ್ ಹಾಗೂ ಮೆಂಟರ್ ಗೌತಮ್ ಗಂಭೀರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಗಂಭೀರ್ ಕೂಡ ಕೋಪಗೊಂಡಿದ್ದರು.
ಬುಧವಾರದ ಪಂದ್ಯದಲ್ಲಿ ನವೀನ್ ಉಲ್ ಹಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲು ಬಂದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ ಎಂದು ಕೂಗುತ್ತಿದ್ದರು.
‘ಅದು ಮೈದಾನದಲ್ಲಿ ನಡೆದ ಘಟನೆ. ಮೈದಾನದ ಹೊರಗೆ ಏನೂ ಇಲ್ಲ. ಜನ ಅದನ್ನು ದೊಡ್ಡದು ಮಾಡುತ್ತಾರೆ. ಅವರ ಬೆಂಬಲಿಗರಿಗೆ ಏನಾದರೂ ಬೇಕು. ನಾವು ಅದನ್ನು ಕೊನೆಗೊಳಿಸಿದ್ದೇವೆ. ನಾವು ಹಸ್ತಲಾಘವ ಮಾಡಿ, ತಬ್ಬಿಕೊಂಡಿದ್ದೇವೆ’ ಎಂದು ನವೀನ್ ಹೇಳಿದ್ದಾರೆ.
‘ತವರು ಮೈದಾನದಲ್ಲಿ ಆಟಗಾರರ ಹೆಸರನ್ನು ಪ್ರೇಕ್ಷಕರು ಕೂಗಿದ್ದಾರೆ. ಇದು ಕೊಹ್ಲಿಯ ತವರು ಅಂಗಳ. ಅವರು ಒಳ್ಳೆಯ ಮನುಷ್ಯ. ಉತ್ತಮ ಆಟಗಾರ’ ಎಂದು ನವೀನ್ ಪ್ರಶಂಸಿದರು.