<p><strong>ಕೋಲ್ಕತ್ತ:</strong> ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ಬದಲು ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ಬುಧವಾರ ತಿಳಿಸಿದ್ದಾರೆ.</p><p>ಶುಕ್ರವಾರ ಕೋಲ್ಕತ್ತದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಕುರಿತು ಮಾತನಾಡಿದ ರಯಾನ್ ಟೆನ್ ಡೋಶೆ, ‘ಕಳೆದ 6 ತಿಂಗಳಲ್ಲಿ ಧ್ರುವ್ ಆಡಿರುವ ರೀತಿ ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಅವರು ಸಿಡಿಸಿದ 2 ಶತಗಳನ್ನು ನೋಡಿದರೆ, ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ’ ಎಂದಿದ್ದಾರೆ.</p><p>‘ಪಂದ್ಯ ಗೆಲ್ಲಲು ಬೇಕಾದ ತಂತ್ರಗಳನ್ನು ರೂಪಿಸುವುದು ನಮ್ಮ ಆದ್ಯತೆಯ ವಿಚಾರವಾಗಿದೆ. ಹಾಗೆಂದು ನಿತೀಶ್ ಕುಮಾರ್ ಮೇಲಿನ ನಮ್ಮ ಒಲವು ಕಡಿಮೆಯಾಗಿದೆ ಎಂಬ ಅರ್ಥವಲ್ಲ. ಆದರೆ ಈ ಸರಣಿಯ ಪ್ರಾಮುಖ್ಯತೆ ಮತ್ತು ಪರಿಸ್ಥಿತಿಗಳನ್ನು ಗಮನಿಸಿದರೆ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಆಡುವುದು ಬಹುತೇಕ ಖಚಿತ’ ಎಂದು ಅವರು ಹೇಳಿದ್ದಾರೆ. </p><p>ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಮರಳಿರುವುದರಿಂದ ಧ್ರುವ್ ಜುರೆಲ್ ಪರಿಪೂರ್ಣ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಧ್ರುವ್ ಕೊನೆಯ 8 ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.</p>.ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸುವ ಹಸಿವಿದೆ: ಕೇಶವ್ ಮಹಾರಾಜ್.ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ದೃಷ್ಟಿಯಿಂದ ದ.ಆಫ್ರಿಕಾ ಸರಣಿ ನಿರ್ಣಾಯಕ: ಸಿರಾಜ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ಬದಲು ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ಬುಧವಾರ ತಿಳಿಸಿದ್ದಾರೆ.</p><p>ಶುಕ್ರವಾರ ಕೋಲ್ಕತ್ತದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಕುರಿತು ಮಾತನಾಡಿದ ರಯಾನ್ ಟೆನ್ ಡೋಶೆ, ‘ಕಳೆದ 6 ತಿಂಗಳಲ್ಲಿ ಧ್ರುವ್ ಆಡಿರುವ ರೀತಿ ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಅವರು ಸಿಡಿಸಿದ 2 ಶತಗಳನ್ನು ನೋಡಿದರೆ, ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ’ ಎಂದಿದ್ದಾರೆ.</p><p>‘ಪಂದ್ಯ ಗೆಲ್ಲಲು ಬೇಕಾದ ತಂತ್ರಗಳನ್ನು ರೂಪಿಸುವುದು ನಮ್ಮ ಆದ್ಯತೆಯ ವಿಚಾರವಾಗಿದೆ. ಹಾಗೆಂದು ನಿತೀಶ್ ಕುಮಾರ್ ಮೇಲಿನ ನಮ್ಮ ಒಲವು ಕಡಿಮೆಯಾಗಿದೆ ಎಂಬ ಅರ್ಥವಲ್ಲ. ಆದರೆ ಈ ಸರಣಿಯ ಪ್ರಾಮುಖ್ಯತೆ ಮತ್ತು ಪರಿಸ್ಥಿತಿಗಳನ್ನು ಗಮನಿಸಿದರೆ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಆಡುವುದು ಬಹುತೇಕ ಖಚಿತ’ ಎಂದು ಅವರು ಹೇಳಿದ್ದಾರೆ. </p><p>ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಮರಳಿರುವುದರಿಂದ ಧ್ರುವ್ ಜುರೆಲ್ ಪರಿಪೂರ್ಣ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಧ್ರುವ್ ಕೊನೆಯ 8 ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.</p>.ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸುವ ಹಸಿವಿದೆ: ಕೇಶವ್ ಮಹಾರಾಜ್.ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ದೃಷ್ಟಿಯಿಂದ ದ.ಆಫ್ರಿಕಾ ಸರಣಿ ನಿರ್ಣಾಯಕ: ಸಿರಾಜ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>