<p>ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರುಕೋಲ್ಕತ್ತ ನೈಟ್ರೈಡರ್ಸ್ ತಂಡದ ನಾಯಕತ್ವವನ್ನು ಸಹ ಆಟಗಾರ ಎಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.</p>.<p>ಈ ಬಾರಿಯು ಐಪಿಎಲ್ನಲ್ಲಿ 7 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್ರೈಡರ್ಸ್ ತಂಡ ನಾಲ್ಕು ಜಯ ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಕಾರ್ತಿಕ್ ವೈಯಕ್ತಿಕವಾಗಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. 7 ಇನಿಂಗ್ಸ್ಗಳಿಂದ ಅವರು ಗಳಿಸಿರುವುದು ಕೇವಲ 108 ರನ್ ಮಾತ್ರ.</p>.<p>ಕಾರ್ತಿಕ್ ನಿರ್ಧಾರವನ್ನು ತಂಡದ ಸಿಇಒ ವೆಂಕಿ ಮೈಸೂರುಖಚಿತಪಡಿಸಿದ್ದಾರೆ. ‘ತಂಡದ ಹಿತಕ್ಕೆ ಮೊದಲ ಆದ್ಯತೆ ನೀಡುವಡಿಕೆ (ದಿನೇಶ್ ಕಾರ್ತಿಕ್) ಅವರಂತಹ ನಾಯಕರಿರುವುದು ನಮ್ಮ ಅದೃಷ್ಟ. ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು. ಈ ನಿರ್ಧಾರದಿಂದ ನಾವು ಅಚ್ಚರಿಗೊಂಡಿದ್ದೇವೆ, ಅವರ ಆಶಯವನ್ನು ಗೌರವಿಸುತ್ತೇವೆ. ಇದುವರೆಗೆ ತಂಡದ ಉಪನಾಯಕರಾಗಿದ್ದ ಹಾಗೂ 2019ರ ಏಕದಿನ ವಿಶ್ವಕಪ್ ಗೆದ್ದ ತಂಡದ (ಇಂಗ್ಲೆಂಡ್) ನಾಯಕ ಎಯಾನ್ ಮಾರ್ಗನ್ ಅವರು ತಂಡದಲ್ಲಿರುವುದೂ ನಮ್ಮ ಅದೃಷ್ಟವೇ. ಅವರು ತಂಡವನ್ನು ಮುನ್ನಡೆಸಲಿದ್ದಾರೆ’ ಎಂದುತಿಳಿಸಿದ್ದಾರೆ.</p>.<p>ಮುಂದುವರಿದು, ‘ಈ ಟೂರ್ನಿಯಲ್ಲಿ ಡಿಕೆ ಮತ್ತು ಮಾರ್ಗನ್ ಇಬ್ಬರೂ ಒಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದಾಗ್ಯೂ ಮಾರ್ಗನ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇದು ಪರಿಣಾಮಕಾರಿಯಾದ ಬೆಳವಣಿಗೆಯಾಗಿದೆ. ಈ ಬದಲಾವಣೆಯಿಂದಾಗಿ ತಂಡ ತಡೆರಹಿತ ಓಟ ಮುಂದುವರಿಸಲಿದೆ ಎಂದು ನಿರೀಕ್ಷಿಸುತ್ತೇವೆ’ ಎಂದೂ ಹೇಳಿದ್ದಾರೆ.</p>.<p>ಈ ವಿಚಾರವನ್ನು ಕೆಕೆಆರ್ ತನ್ನ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ.</p>.<p>ಕೆಕೆಆರ್ ತಂಡವು 2018ರಿಂದ ಇಲ್ಲಿಯವರೆಗೆ ಕಾರ್ತಿಕ್ ನಾಯಕತ್ವದಲ್ಲಿ 37 ಪಂದ್ಯಗಳಲ್ಲಿ ಆಡಿದ್ದು, 19 ಗೆಲುವು ಮತ್ತು 17 ಸೋಲುಗಳನ್ನು ಕಂಡಿದೆ. 2018ರಲ್ಲಿ ಮೂರನೇ ಸ್ಥಾನ ಮತ್ತು ಕಳೆದ ವರ್ಷ 5ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿತ್ತು.</p>.<p>ಕೆಕೆಆರ್ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರುಕೋಲ್ಕತ್ತ ನೈಟ್ರೈಡರ್ಸ್ ತಂಡದ ನಾಯಕತ್ವವನ್ನು ಸಹ ಆಟಗಾರ ಎಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.</p>.<p>ಈ ಬಾರಿಯು ಐಪಿಎಲ್ನಲ್ಲಿ 7 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್ರೈಡರ್ಸ್ ತಂಡ ನಾಲ್ಕು ಜಯ ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಕಾರ್ತಿಕ್ ವೈಯಕ್ತಿಕವಾಗಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. 7 ಇನಿಂಗ್ಸ್ಗಳಿಂದ ಅವರು ಗಳಿಸಿರುವುದು ಕೇವಲ 108 ರನ್ ಮಾತ್ರ.</p>.<p>ಕಾರ್ತಿಕ್ ನಿರ್ಧಾರವನ್ನು ತಂಡದ ಸಿಇಒ ವೆಂಕಿ ಮೈಸೂರುಖಚಿತಪಡಿಸಿದ್ದಾರೆ. ‘ತಂಡದ ಹಿತಕ್ಕೆ ಮೊದಲ ಆದ್ಯತೆ ನೀಡುವಡಿಕೆ (ದಿನೇಶ್ ಕಾರ್ತಿಕ್) ಅವರಂತಹ ನಾಯಕರಿರುವುದು ನಮ್ಮ ಅದೃಷ್ಟ. ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು. ಈ ನಿರ್ಧಾರದಿಂದ ನಾವು ಅಚ್ಚರಿಗೊಂಡಿದ್ದೇವೆ, ಅವರ ಆಶಯವನ್ನು ಗೌರವಿಸುತ್ತೇವೆ. ಇದುವರೆಗೆ ತಂಡದ ಉಪನಾಯಕರಾಗಿದ್ದ ಹಾಗೂ 2019ರ ಏಕದಿನ ವಿಶ್ವಕಪ್ ಗೆದ್ದ ತಂಡದ (ಇಂಗ್ಲೆಂಡ್) ನಾಯಕ ಎಯಾನ್ ಮಾರ್ಗನ್ ಅವರು ತಂಡದಲ್ಲಿರುವುದೂ ನಮ್ಮ ಅದೃಷ್ಟವೇ. ಅವರು ತಂಡವನ್ನು ಮುನ್ನಡೆಸಲಿದ್ದಾರೆ’ ಎಂದುತಿಳಿಸಿದ್ದಾರೆ.</p>.<p>ಮುಂದುವರಿದು, ‘ಈ ಟೂರ್ನಿಯಲ್ಲಿ ಡಿಕೆ ಮತ್ತು ಮಾರ್ಗನ್ ಇಬ್ಬರೂ ಒಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದಾಗ್ಯೂ ಮಾರ್ಗನ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇದು ಪರಿಣಾಮಕಾರಿಯಾದ ಬೆಳವಣಿಗೆಯಾಗಿದೆ. ಈ ಬದಲಾವಣೆಯಿಂದಾಗಿ ತಂಡ ತಡೆರಹಿತ ಓಟ ಮುಂದುವರಿಸಲಿದೆ ಎಂದು ನಿರೀಕ್ಷಿಸುತ್ತೇವೆ’ ಎಂದೂ ಹೇಳಿದ್ದಾರೆ.</p>.<p>ಈ ವಿಚಾರವನ್ನು ಕೆಕೆಆರ್ ತನ್ನ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ.</p>.<p>ಕೆಕೆಆರ್ ತಂಡವು 2018ರಿಂದ ಇಲ್ಲಿಯವರೆಗೆ ಕಾರ್ತಿಕ್ ನಾಯಕತ್ವದಲ್ಲಿ 37 ಪಂದ್ಯಗಳಲ್ಲಿ ಆಡಿದ್ದು, 19 ಗೆಲುವು ಮತ್ತು 17 ಸೋಲುಗಳನ್ನು ಕಂಡಿದೆ. 2018ರಲ್ಲಿ ಮೂರನೇ ಸ್ಥಾನ ಮತ್ತು ಕಳೆದ ವರ್ಷ 5ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿತ್ತು.</p>.<p>ಕೆಕೆಆರ್ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>