<p><strong>ಶಾರ್ಜಾ:</strong> ಐಪಿಎಲ್ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವಿನ ಬಳಿಕಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ,ಸಹಾಯಕ ಸಿಬ್ಬಂದಿಗೆ ಸೆಲ್ಯೂಟ್ ಹೊಡೆದಿರುವುದು ಬೆಳಕಿಗೆ ಬಂದಿದೆ.</p>.<p>ಪಂದ್ಯ ಮುಗಿದ ಬಳಿಕ ಅಂಬಟಿ ರಾಯುಡು ಅವರೊಂದಿಗೆ ಧೋನಿ ಸಮಾಲೋಚನೆ ನಡೆಸುತ್ತಿರುವ ವೇಳೆ ಘಟನೆ ನಡೆದಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/now-you-can-lick-what-i-cropped-harbhajan-singh-reply-to-haters-on-2007-wc-post-869860.html" itemprop="url">'ಈಗ ನೆಕ್ಕಬಹುದು' - ಧೋನಿ ಅಭಿಮಾನಿಗಳ ವಿರುದ್ಧ ಹರಭಜನ್ ಗರಂ </a></p>.<p>ತಮ್ಮ ಬಳಿ ಬಂದ ಸಿಎಸ್ಕೆ ಸಹಾಯಕ ಸಿಬ್ಬಂದಿ ಮೊದಲು ಧೋನಿ ಅವರಿಗೆ ಸೆಲ್ಯೂಟ್ ಹೊಡೆದರು. ಇದನ್ನು ಗಮನಿಸಿದ ಧೋನಿ ಸಹ ಗೌರವ ಸೂಚಕವಾಗಿ ಸೆಲ್ಯೂಟ್ ಹೊಡೆದರು. ಬಳಿಕ ಪರಸ್ಪರ ಹಸ್ತಲಾಘವ ಮಾಡಿದರು. ನಂತರ ರಾಯುಡು ಜೊತೆಗೆಮಹಿ ಸಮಾಲೋಚನೆ ಮುಂದುವರಿಸಿದರು.</p>.<p><strong>ಹೃದಯ ಗೆದ್ದ ಉತ್ತಪ್ಪ...</strong><br />ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅವರ ಕ್ರಿಕೆಟ್ ಕಿಟ್ಗಳನ್ನು (ಬ್ಯಾಟ್, ಹೆಲ್ಮೆಟ್) ಪೆವಿಲಿಯನ್ಗೆ ಹೊತ್ತೊಯ್ಯುವ ಮೂಲಕ ರಾಬಿನ್ ಉತ್ತಪ್ಪ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಉತ್ತಮ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ. ಇವೆರಡು ಘಟನೆಗಳು ಒಂದೇ ವಿಡಿಯೊದಲ್ಲಿ ಸೆರೆಯಾಗಿದ್ದು, ಸಿಎಸ್ಕೆ ಫ್ಯಾನ್ಸ್ ಖಾತೆಯಿಂದ ಬಿಡುಗಡೆಗೊಳಿಸಲಾಗಿದೆ.</p>.<p>ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಅಂತಿಮ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅಜೇಯರಾಗುಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಾರ್ಜಾ:</strong> ಐಪಿಎಲ್ನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವಿನ ಬಳಿಕಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ,ಸಹಾಯಕ ಸಿಬ್ಬಂದಿಗೆ ಸೆಲ್ಯೂಟ್ ಹೊಡೆದಿರುವುದು ಬೆಳಕಿಗೆ ಬಂದಿದೆ.</p>.<p>ಪಂದ್ಯ ಮುಗಿದ ಬಳಿಕ ಅಂಬಟಿ ರಾಯುಡು ಅವರೊಂದಿಗೆ ಧೋನಿ ಸಮಾಲೋಚನೆ ನಡೆಸುತ್ತಿರುವ ವೇಳೆ ಘಟನೆ ನಡೆದಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/now-you-can-lick-what-i-cropped-harbhajan-singh-reply-to-haters-on-2007-wc-post-869860.html" itemprop="url">'ಈಗ ನೆಕ್ಕಬಹುದು' - ಧೋನಿ ಅಭಿಮಾನಿಗಳ ವಿರುದ್ಧ ಹರಭಜನ್ ಗರಂ </a></p>.<p>ತಮ್ಮ ಬಳಿ ಬಂದ ಸಿಎಸ್ಕೆ ಸಹಾಯಕ ಸಿಬ್ಬಂದಿ ಮೊದಲು ಧೋನಿ ಅವರಿಗೆ ಸೆಲ್ಯೂಟ್ ಹೊಡೆದರು. ಇದನ್ನು ಗಮನಿಸಿದ ಧೋನಿ ಸಹ ಗೌರವ ಸೂಚಕವಾಗಿ ಸೆಲ್ಯೂಟ್ ಹೊಡೆದರು. ಬಳಿಕ ಪರಸ್ಪರ ಹಸ್ತಲಾಘವ ಮಾಡಿದರು. ನಂತರ ರಾಯುಡು ಜೊತೆಗೆಮಹಿ ಸಮಾಲೋಚನೆ ಮುಂದುವರಿಸಿದರು.</p>.<p><strong>ಹೃದಯ ಗೆದ್ದ ಉತ್ತಪ್ಪ...</strong><br />ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅವರ ಕ್ರಿಕೆಟ್ ಕಿಟ್ಗಳನ್ನು (ಬ್ಯಾಟ್, ಹೆಲ್ಮೆಟ್) ಪೆವಿಲಿಯನ್ಗೆ ಹೊತ್ತೊಯ್ಯುವ ಮೂಲಕ ರಾಬಿನ್ ಉತ್ತಪ್ಪ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಉತ್ತಮ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ. ಇವೆರಡು ಘಟನೆಗಳು ಒಂದೇ ವಿಡಿಯೊದಲ್ಲಿ ಸೆರೆಯಾಗಿದ್ದು, ಸಿಎಸ್ಕೆ ಫ್ಯಾನ್ಸ್ ಖಾತೆಯಿಂದ ಬಿಡುಗಡೆಗೊಳಿಸಲಾಗಿದೆ.</p>.<p>ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಅಂತಿಮ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಅಜೇಯರಾಗುಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>