ಹ್ಯಾಮಿಲ್ಟನ್: ಮಳೆಯಿಂದಾಗಿ ಪಂದ್ಯಗಳು ರದ್ದಾಗುವುದು ಆಟಗಾರರಿಗೆ ಮತ್ತು ಟಿಕೆಟ್ ಖರೀದಿಸಿ ನೋಡಲು ಬರುವ ಪ್ರೇಕ್ಷಕರಿಗೆ ಕಿರಿಕಿರಿ ಎನಿಸುತ್ತದೆ. ಹೀಗಾಗಿ ಮೇಲ್ಚಾವಣಿ ಸೌಲಭ್ಯ ಹೊಂದಿರುವ ಕ್ರೀಡಾಂಗಣಗಳು ಉತ್ತಮ ಆಯ್ಕೆಯಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.