<p><strong>ಹ್ಯಾಮಿಲ್ಟನ್: </strong>ಮಳೆಯಿಂದಾಗಿ ಪಂದ್ಯಗಳು ರದ್ದಾಗುವುದು ಆಟಗಾರರಿಗೆ ಮತ್ತು ಟಿಕೆಟ್ ಖರೀದಿಸಿ ನೋಡಲು ಬರುವ ಪ್ರೇಕ್ಷಕರಿಗೆ ಕಿರಿಕಿರಿ ಎನಿಸುತ್ತದೆ. ಹೀಗಾಗಿ ಮೇಲ್ಚಾವಣಿ ಸೌಲಭ್ಯ ಹೊಂದಿರುವ ಕ್ರೀಡಾಂಗಣಗಳು ಉತ್ತಮ ಆಯ್ಕೆಯಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಭಾನುವಾರ ಇಲ್ಲಿ ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು.</p>.<p>ಈ ಕುರಿತು ಶುಭಮನ್ ಮಾತನಾಡಿದರು.</p>.<p>‘ಒಳಾಂಗಣ ಕ್ರೀಡಾಂಗಣ ಆಯ್ಕೆಯ ಕುರಿತು ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಬೇಕು‘ ಎಂದು ಶುಭಮನ್ ಹೇಳಿದರು.</p>.<p>ಪಂದ್ಯ ರದ್ದಾದ ವೇಳೆ ಭಾರತ 12.5 ಓವರ್ಗಳಲ್ಲಿ 89 ರನ್ ಗಳಿಸಿತ್ತು. ಶುಭಮನ್ (45) ಮತ್ತು ಸೂರ್ಯಕುಮಾರ್ ಯಾದವ್ (34) ಕ್ರೀಸ್ನಲ್ಲಿದ್ದರು. ಶಿಖರ್ ಧವನ್ ಮೂರು ರನ್ ಗಳಿಸಿ ಔಟಾಗಿದ್ದರು.</p>.<p>ಭಾರತದ ಇನಿಂಗ್ಸ್ನ ಐದನೇ ಓವರ್ನಲ್ಲಿ ಮಳೆ ಸುರಿಯಲಾರಂಭಿಸಿತು. ನಾಲ್ಕು ತಾಸುಗಳ ಬಳಿಕ ಎರಡೂ ತಂಡಗಳಿಗೆ ತಲಾ 29 ಓವರ್ಗಳನ್ನು ಆಡಿಸಲು ನಿರ್ಧರಿಸಲಾಗಿತ್ತು. ಆದರೆ ಏಳು ಓವರ್ಗಳ ಬಳಿಕ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು.</p>.<p>ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ನವೆಂಬರ್ 30ರಂದು ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹ್ಯಾಮಿಲ್ಟನ್: </strong>ಮಳೆಯಿಂದಾಗಿ ಪಂದ್ಯಗಳು ರದ್ದಾಗುವುದು ಆಟಗಾರರಿಗೆ ಮತ್ತು ಟಿಕೆಟ್ ಖರೀದಿಸಿ ನೋಡಲು ಬರುವ ಪ್ರೇಕ್ಷಕರಿಗೆ ಕಿರಿಕಿರಿ ಎನಿಸುತ್ತದೆ. ಹೀಗಾಗಿ ಮೇಲ್ಚಾವಣಿ ಸೌಲಭ್ಯ ಹೊಂದಿರುವ ಕ್ರೀಡಾಂಗಣಗಳು ಉತ್ತಮ ಆಯ್ಕೆಯಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಭಾನುವಾರ ಇಲ್ಲಿ ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು.</p>.<p>ಈ ಕುರಿತು ಶುಭಮನ್ ಮಾತನಾಡಿದರು.</p>.<p>‘ಒಳಾಂಗಣ ಕ್ರೀಡಾಂಗಣ ಆಯ್ಕೆಯ ಕುರಿತು ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಬೇಕು‘ ಎಂದು ಶುಭಮನ್ ಹೇಳಿದರು.</p>.<p>ಪಂದ್ಯ ರದ್ದಾದ ವೇಳೆ ಭಾರತ 12.5 ಓವರ್ಗಳಲ್ಲಿ 89 ರನ್ ಗಳಿಸಿತ್ತು. ಶುಭಮನ್ (45) ಮತ್ತು ಸೂರ್ಯಕುಮಾರ್ ಯಾದವ್ (34) ಕ್ರೀಸ್ನಲ್ಲಿದ್ದರು. ಶಿಖರ್ ಧವನ್ ಮೂರು ರನ್ ಗಳಿಸಿ ಔಟಾಗಿದ್ದರು.</p>.<p>ಭಾರತದ ಇನಿಂಗ್ಸ್ನ ಐದನೇ ಓವರ್ನಲ್ಲಿ ಮಳೆ ಸುರಿಯಲಾರಂಭಿಸಿತು. ನಾಲ್ಕು ತಾಸುಗಳ ಬಳಿಕ ಎರಡೂ ತಂಡಗಳಿಗೆ ತಲಾ 29 ಓವರ್ಗಳನ್ನು ಆಡಿಸಲು ನಿರ್ಧರಿಸಲಾಗಿತ್ತು. ಆದರೆ ಏಳು ಓವರ್ಗಳ ಬಳಿಕ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು.</p>.<p>ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ನವೆಂಬರ್ 30ರಂದು ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>