<p><strong>ಬೆಂಗಳೂರು</strong>: ಆರಂಭ ಆಟಗಾರ್ತಿ ನಿಕಿ ಪ್ರಸಾದ್ ಅವರ ಅರ್ಧಶತಕ ಹಾಗೂ ಪಿ. ಸಲೋನಿ ಅವರ ಆಲ್ರೌಂಡ್ ಆಟದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಎಲೀಟ್ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು 6 ವಿಕೆಟ್ಗಳಿಂದ ಮಣಿಸಿ, ಸೆಮಿಫೈನಲ್ ಪ್ರವೇಶಿಸಿತು.</p>.<p>ಅಹಮದಾಬಾದ್ನ ಎಡಿಎಸ್ಎ ರೈಲ್ವೇಸ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡವು ನಿಗದಿತ ಓವರ್ಗಳಲ್ಲಿ 5 ವಿಕೆಟ್ಗೆ 129 ರನ್ ಗಳಿಸಿತು.</p>.<p>ಆರಂಭ ಆಟಗಾರ್ತಿಯರಾದ ಎನ್.ಎಸ್.ಶುಭಹರಿಣಿ (46) ಹಾಗೂ ಜಿ.ಕಮಲಿನಿ (41) ಅವರು 92 ರನ್ಗಳ ಜೊತೆಯಾಟವಾಗಿ ಉತ್ತಮ ಬುನಾದಿ ಹಾಕಿಕೊಟ್ಟರು. ಆದರೆ, ನಂತರ ಬಂದ ಬ್ಯಾಟರ್ಗಳು ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಕರ್ನಾಟಕದ ಸಲೋನಿ ಪಿ. 18 ರನ್ಗಳಿಗೆ 2 ವಿಕೆಟ್ ಪಡೆದರೆ, ನಮಿತಾ ಡಿಸೋಜಾ ಹಾಗೂ ಬಿ.ಜಿ.ತೇಜಸ್ವಿನಿ ತಲಾ ಒಂದು ವಿಕೆಟ್ ಕಿತ್ತರು.</p>.<p>ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರೋಷಿಣಿ ಕಿರಣ್ ಬಳಗವು 18.1 ಓವರ್ಗಳಲ್ಲಿ 4 ವಿಕೆಟ್ಗೆ 131 ರನ್ ಗಳಿಸಿ ಸಂಭ್ರಮಿಸಿತು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ, ದಿಟ್ಟವಾಗಿ ಆಡಿದ ನಿಕಿ (ಔಟಾಗದೇ 58) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಬಿರುಸಿನ ಆಟವಾಡಿದ ತೇಜಸ್ವಿನಿ (17) ಹಾಗೂ ಸಾಲೊನಿ ಅವರೂ ಉಪಯುಕ್ತ ಕೊಡುಗೆ ನೀಡಿದರು.</p>.<p>ಕರ್ನಾಟಕ ತಂಡವು ಮಂಗಳವಾರ (ಡಿಸೆಂಬರ್ 9) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಎದುರಿಸಲಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> ತಮಿಳುನಾಡು: 20 ಓವರ್ಗಳಲ್ಲಿ 5 ವಿಕೆಟ್ಗೆ 129 (ಎನ್.ಎಸ್.ಶುಭಹರಿಣಿ 46, ಜಿ.ಕಮಲಿನಿ 41; ಸಲೋನಿ ಪಿ. 18ಕ್ಕೆ 2). ಕರ್ನಾಟಕ: 18.1 ಓವರ್ಗಳಲ್ಲಿ 4 ವಿಕೆಟ್ಗೆ 131 (ನಿಕಿ ಪ್ರಸಾದ್ ಔಟಾಗದೇ 58). ಫಲಿತಾಂಶ: ಕರ್ನಾಟಕ್ಕೆ ಆರು ವಿಕೆಟ್ಗಳ ಜಯ.</p>.<p><strong>ಕರ್ನಾಟಕ ತಂಡಕ್ಕೆ ರಚಿತಾ ನಾಯಕತ್ವ</strong></p><p><strong>ಉಡುಪಿ</strong>: ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕುಂದಾಪುರದ ರಚಿತಾ ಹತ್ವಾರ್ ಮುನ್ನಡೆಸಲಿದ್ದಾರೆ.</p><p>ಇದೇ 13 ರಿಂದ 21ರವರೆಗೆ ಹೈದರಾಬಾದ್ನಲ್ಲಿ ಟೂರ್ನಿ ನಡೆಯಲಿದ್ದು, ತಂಡದ ನಾಯಕಿಯಾಗಿ ರಚಿತಾ ಆಯ್ಕೆಯಾಗಿದ್ದಾರೆ. ವಿಕೆಟ್ ಕೀಪಿಂಗ್ ಮತ್ತು ಬ್ಯಾಟರ್ ಆಗಿರುವ ರಚಿತಾ ಸದ್ಯ<br>ಅಹಮದಾಬಾದ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಕರ್ನಾಟಕದ ಪರ ಆಡುತ್ತಿದ್ದಾರೆ.</p><p>ಕುಂದಾಪುರದ ವಕೀಲರಾದ ರಮೇಶ್ ಹತ್ವಾರ್ ಹಾಗೂ ಸರಿತಾ ಹತ್ವಾರ್ ದಂಪತಿಯ ಪುತ್ರಿಯಾಗಿರುವ ರಚಿತಾ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ನಲ್ಲಿ (ಎಸ್ಐಒಎಸ್) ಪ್ರಥಮ ಪಿಯುಸಿ ಕಲಿಯುತ್ತಿದ್ದಾರೆ.</p><p>ರಚಿತಾ ಅವರು 2023ರಲ್ಲಿ 16 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡಕ್ಕೆ ವಿಕೆಟ್ ಕೀಪರ್, ಆರಂಭಿಕ ಬ್ಯಾಟರ್ ಆಗಿ ಸೇರ್ಪಡೆಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆರಂಭ ಆಟಗಾರ್ತಿ ನಿಕಿ ಪ್ರಸಾದ್ ಅವರ ಅರ್ಧಶತಕ ಹಾಗೂ ಪಿ. ಸಲೋನಿ ಅವರ ಆಲ್ರೌಂಡ್ ಆಟದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಎಲೀಟ್ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು 6 ವಿಕೆಟ್ಗಳಿಂದ ಮಣಿಸಿ, ಸೆಮಿಫೈನಲ್ ಪ್ರವೇಶಿಸಿತು.</p>.<p>ಅಹಮದಾಬಾದ್ನ ಎಡಿಎಸ್ಎ ರೈಲ್ವೇಸ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡವು ನಿಗದಿತ ಓವರ್ಗಳಲ್ಲಿ 5 ವಿಕೆಟ್ಗೆ 129 ರನ್ ಗಳಿಸಿತು.</p>.<p>ಆರಂಭ ಆಟಗಾರ್ತಿಯರಾದ ಎನ್.ಎಸ್.ಶುಭಹರಿಣಿ (46) ಹಾಗೂ ಜಿ.ಕಮಲಿನಿ (41) ಅವರು 92 ರನ್ಗಳ ಜೊತೆಯಾಟವಾಗಿ ಉತ್ತಮ ಬುನಾದಿ ಹಾಕಿಕೊಟ್ಟರು. ಆದರೆ, ನಂತರ ಬಂದ ಬ್ಯಾಟರ್ಗಳು ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಕರ್ನಾಟಕದ ಸಲೋನಿ ಪಿ. 18 ರನ್ಗಳಿಗೆ 2 ವಿಕೆಟ್ ಪಡೆದರೆ, ನಮಿತಾ ಡಿಸೋಜಾ ಹಾಗೂ ಬಿ.ಜಿ.ತೇಜಸ್ವಿನಿ ತಲಾ ಒಂದು ವಿಕೆಟ್ ಕಿತ್ತರು.</p>.<p>ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರೋಷಿಣಿ ಕಿರಣ್ ಬಳಗವು 18.1 ಓವರ್ಗಳಲ್ಲಿ 4 ವಿಕೆಟ್ಗೆ 131 ರನ್ ಗಳಿಸಿ ಸಂಭ್ರಮಿಸಿತು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ, ದಿಟ್ಟವಾಗಿ ಆಡಿದ ನಿಕಿ (ಔಟಾಗದೇ 58) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಬಿರುಸಿನ ಆಟವಾಡಿದ ತೇಜಸ್ವಿನಿ (17) ಹಾಗೂ ಸಾಲೊನಿ ಅವರೂ ಉಪಯುಕ್ತ ಕೊಡುಗೆ ನೀಡಿದರು.</p>.<p>ಕರ್ನಾಟಕ ತಂಡವು ಮಂಗಳವಾರ (ಡಿಸೆಂಬರ್ 9) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಎದುರಿಸಲಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> ತಮಿಳುನಾಡು: 20 ಓವರ್ಗಳಲ್ಲಿ 5 ವಿಕೆಟ್ಗೆ 129 (ಎನ್.ಎಸ್.ಶುಭಹರಿಣಿ 46, ಜಿ.ಕಮಲಿನಿ 41; ಸಲೋನಿ ಪಿ. 18ಕ್ಕೆ 2). ಕರ್ನಾಟಕ: 18.1 ಓವರ್ಗಳಲ್ಲಿ 4 ವಿಕೆಟ್ಗೆ 131 (ನಿಕಿ ಪ್ರಸಾದ್ ಔಟಾಗದೇ 58). ಫಲಿತಾಂಶ: ಕರ್ನಾಟಕ್ಕೆ ಆರು ವಿಕೆಟ್ಗಳ ಜಯ.</p>.<p><strong>ಕರ್ನಾಟಕ ತಂಡಕ್ಕೆ ರಚಿತಾ ನಾಯಕತ್ವ</strong></p><p><strong>ಉಡುಪಿ</strong>: ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕುಂದಾಪುರದ ರಚಿತಾ ಹತ್ವಾರ್ ಮುನ್ನಡೆಸಲಿದ್ದಾರೆ.</p><p>ಇದೇ 13 ರಿಂದ 21ರವರೆಗೆ ಹೈದರಾಬಾದ್ನಲ್ಲಿ ಟೂರ್ನಿ ನಡೆಯಲಿದ್ದು, ತಂಡದ ನಾಯಕಿಯಾಗಿ ರಚಿತಾ ಆಯ್ಕೆಯಾಗಿದ್ದಾರೆ. ವಿಕೆಟ್ ಕೀಪಿಂಗ್ ಮತ್ತು ಬ್ಯಾಟರ್ ಆಗಿರುವ ರಚಿತಾ ಸದ್ಯ<br>ಅಹಮದಾಬಾದ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಕರ್ನಾಟಕದ ಪರ ಆಡುತ್ತಿದ್ದಾರೆ.</p><p>ಕುಂದಾಪುರದ ವಕೀಲರಾದ ರಮೇಶ್ ಹತ್ವಾರ್ ಹಾಗೂ ಸರಿತಾ ಹತ್ವಾರ್ ದಂಪತಿಯ ಪುತ್ರಿಯಾಗಿರುವ ರಚಿತಾ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ನಲ್ಲಿ (ಎಸ್ಐಒಎಸ್) ಪ್ರಥಮ ಪಿಯುಸಿ ಕಲಿಯುತ್ತಿದ್ದಾರೆ.</p><p>ರಚಿತಾ ಅವರು 2023ರಲ್ಲಿ 16 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡಕ್ಕೆ ವಿಕೆಟ್ ಕೀಪರ್, ಆರಂಭಿಕ ಬ್ಯಾಟರ್ ಆಗಿ ಸೇರ್ಪಡೆಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>