<p><strong>ಮುಂಬೈ:</strong> ತಂಡದಲ್ಲಿ ಮೇಲು-ಕೀಳು ಭಾವನೆ ಇಲ್ಲ. ಎಲ್ಲ ಆಟಗಾರರು ಸಮಾನರು ಎಂದು ಗುಜರಾತ್ ಟೈಟನ್ಸ್ ಯಶಸ್ಸಿನ ಗುಟ್ಟನ್ನು ನಾಯಕ ಹಾರ್ದಿಕ್ ಪಾಂಡ್ಯ ಬಯಲು ಮಾಡಿದ್ದಾರೆ.</p>.<p>ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್, ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಒಟ್ಟು 16 ಅಂಕ ಸಂಪಾದಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/it-was-a-huge-step-in-right-direction-faf-on-kohlis-fifty-933110.html" itemprop="url">'ಸರಿಯಾದ ದಿಶೆಯತ್ತ ದಿಟ್ಟ ಹೆಜ್ಜೆ' - ಕೊಹ್ಲಿ ಅರ್ಧಶತಕದ ಬಗ್ಗೆ ನಾಯಕ ಡುಪ್ಲೆಸಿ </a></p>.<p>ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಹಾರ್ದಿಕ್ ನಾಯಕತ್ವವು ಹೆಚ್ಚಿನ ಗಮನ ಸೆಳೆದಿದೆ. ಆದರೆ ತಂಡದ ಯಶಸ್ಸಿನ ಶ್ರೇಯಸ್ಸಿಗೆ ಎಲ್ಲ ಆಟಗಾರರು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.</p>.<p>'ಓರ್ವ ಆಟಗಾರನಾಗಿ, ನಾನೊಬ್ಬನೇ ಬೆಳೆಯಲು ಇಷ್ಟಪಡುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತೇನೆ. ನನ್ನ ತಂಡದ ಸಹ ಆಟಗಾರರೊಂದಿಗೆ ಬೆಳೆಯಲು ಇಷ್ಟಪಡುತ್ತೇನೆ. ಅದೇ ನಮ್ಮ ಯಶಸ್ಸಿಗೂ ಕಾರಣ. ನಾನು ನಾಯಕನಾಗಿರಬಹುದು. ಆದರೆ ಮೇಲು-ಕೀಳು ಭಾವನೆ ಇಲ್ಲ. ನಾವೆಲ್ಲರೂ ಒಂದೇ ಹಾದಿಯಲ್ಲಿದ್ದೇವೆ. ಎಲ್ಲರೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ' ಎಂದು ತಿಳಿಸಿದ್ದಾರೆ.</p>.<p>'ಹೌದು, ನಿಸ್ಸಂಶಯವಾಗಿಯೂ ಹೊಸ ಅವಕಾಶವನ್ನು ಎಲ್ಲರೂ ಆನಂದಿಸುತ್ತಿದ್ದಾರೆ. ಅತ್ಯುತ್ತಮ ಆಟಗಾರರ ಪಡೆಯೇ ಇದೆ. ಫಲಿತಾಂಶವು ನಮ್ಮ ಪರವಾಗಿರುವುದರಿಂದ ಇದಕ್ಕಿಂತಲೂ ಉತ್ತಮ ಆರಂಭವನ್ನು ಬಯಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.</p>.<p>ಆರ್ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲೂ ಗುಜರಾತ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ರಾಹುಲ್ ತೆವಾಟಿಯಾ ಹಾಗೂ ಡೇವಿಡ್ ಮಿಲ್ಲರ್ ಗೆಲುವಿನ ಜೊತೆಯಾಟ ಕಟ್ಟಿದ್ದರು.</p>.<p>ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಐದು ಪಂದ್ಯಗಳಲ್ಲಿ ಗುಜರಾತ್ ತಂಡವು ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ತಂಡದಲ್ಲಿ ಮೇಲು-ಕೀಳು ಭಾವನೆ ಇಲ್ಲ. ಎಲ್ಲ ಆಟಗಾರರು ಸಮಾನರು ಎಂದು ಗುಜರಾತ್ ಟೈಟನ್ಸ್ ಯಶಸ್ಸಿನ ಗುಟ್ಟನ್ನು ನಾಯಕ ಹಾರ್ದಿಕ್ ಪಾಂಡ್ಯ ಬಯಲು ಮಾಡಿದ್ದಾರೆ.</p>.<p>ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್, ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಒಟ್ಟು 16 ಅಂಕ ಸಂಪಾದಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/it-was-a-huge-step-in-right-direction-faf-on-kohlis-fifty-933110.html" itemprop="url">'ಸರಿಯಾದ ದಿಶೆಯತ್ತ ದಿಟ್ಟ ಹೆಜ್ಜೆ' - ಕೊಹ್ಲಿ ಅರ್ಧಶತಕದ ಬಗ್ಗೆ ನಾಯಕ ಡುಪ್ಲೆಸಿ </a></p>.<p>ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಹಾರ್ದಿಕ್ ನಾಯಕತ್ವವು ಹೆಚ್ಚಿನ ಗಮನ ಸೆಳೆದಿದೆ. ಆದರೆ ತಂಡದ ಯಶಸ್ಸಿನ ಶ್ರೇಯಸ್ಸಿಗೆ ಎಲ್ಲ ಆಟಗಾರರು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.</p>.<p>'ಓರ್ವ ಆಟಗಾರನಾಗಿ, ನಾನೊಬ್ಬನೇ ಬೆಳೆಯಲು ಇಷ್ಟಪಡುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತೇನೆ. ನನ್ನ ತಂಡದ ಸಹ ಆಟಗಾರರೊಂದಿಗೆ ಬೆಳೆಯಲು ಇಷ್ಟಪಡುತ್ತೇನೆ. ಅದೇ ನಮ್ಮ ಯಶಸ್ಸಿಗೂ ಕಾರಣ. ನಾನು ನಾಯಕನಾಗಿರಬಹುದು. ಆದರೆ ಮೇಲು-ಕೀಳು ಭಾವನೆ ಇಲ್ಲ. ನಾವೆಲ್ಲರೂ ಒಂದೇ ಹಾದಿಯಲ್ಲಿದ್ದೇವೆ. ಎಲ್ಲರೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ' ಎಂದು ತಿಳಿಸಿದ್ದಾರೆ.</p>.<p>'ಹೌದು, ನಿಸ್ಸಂಶಯವಾಗಿಯೂ ಹೊಸ ಅವಕಾಶವನ್ನು ಎಲ್ಲರೂ ಆನಂದಿಸುತ್ತಿದ್ದಾರೆ. ಅತ್ಯುತ್ತಮ ಆಟಗಾರರ ಪಡೆಯೇ ಇದೆ. ಫಲಿತಾಂಶವು ನಮ್ಮ ಪರವಾಗಿರುವುದರಿಂದ ಇದಕ್ಕಿಂತಲೂ ಉತ್ತಮ ಆರಂಭವನ್ನು ಬಯಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.</p>.<p>ಆರ್ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲೂ ಗುಜರಾತ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ರಾಹುಲ್ ತೆವಾಟಿಯಾ ಹಾಗೂ ಡೇವಿಡ್ ಮಿಲ್ಲರ್ ಗೆಲುವಿನ ಜೊತೆಯಾಟ ಕಟ್ಟಿದ್ದರು.</p>.<p>ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಐದು ಪಂದ್ಯಗಳಲ್ಲಿ ಗುಜರಾತ್ ತಂಡವು ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>