ಆದರೆ, ಸಿಎಸ್ಕೆಗೆ ಜಡೇಜ ನಾಯಕನಾಗಬಾರದಿತ್ತು. ಜಡೇಜ ತಮ್ಮ ಕ್ರಿಕೆಟ್ ಬಗ್ಗೆ ಗಮನ ಹರಿಸಬೇಕು. ಬದಲಿಗೆ ಬೇರೆ ನಾಯಕನನ್ನು ಸಿಎಸ್ಕೆ ನೇಮಕ ಮಾಡಬೇಕಿತ್ತು ಎಂದು ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಸಿಎಸ್ಕೆ ನಾಯಕನ ಸ್ಥಾನಕ್ಕೆ ತಮ್ಮ ಆಯ್ಕೆಯ ಆಟಗಾರ ಯಾರಾಗಿದ್ದರು ಎಂಬುದನ್ನೂ ಅವರು ಸೂಚಿಸಿದ್ದಾರೆ.