<p><strong>ನವದೆಹಲಿ:</strong> ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದಿಗೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಮೈದಾನದ ಒಳಗೂ ಹೊರಗೂ ಶಾಂತಚಿತ್ತರಾಗಿ ವರ್ತಿಸುತ್ತಾರೆ. ಈ ಮೂಲಕ ಯುವ ಕ್ರಿಕೆಟಿಗರಿಗೂ ಮಾದರಿಯಾಗಿದ್ದಾರೆ.</p>.<p>ಆದರೆ ಅತಿ ವಿರಳ ಘಟನೆ ಎಂಬಂತೆ ಐಪಿಎಲ್ 2014ನೇ ಆವೃತ್ತಿಯಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡ ದ್ರಾವಿಡ್, ಕ್ಯಾಪ್ ನೆಲಕ್ಕೆ ಎಸೆದಿರುವುದು ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿತ್ತು.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-wc-2021-ind-vs-pak-star-sports-releases-new-mauka-mauka-ad-875604.html" itemprop="url">T20 WC | IND vs PAK: ಮತ್ತೆ ಬಂತು 'ಮೌಕಾ ಮೌಕಾ' ಜಾಹೀರಾತು </a></p>.<p>ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನುಭವಿಸಿದಾಗ ಡಗೌಟ್ನಲ್ಲಿದ್ದ ಮಾರ್ಗದರ್ಶಕ ದ್ರಾವಿಡ್ಗೆ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ. ಕ್ಯಾಪ್ ನೆಲಕ್ಕೆಸೆದು ನೇರವಾಗಿ ಡ್ರೆಸ್ಸಿಂಗ್ ಕೊಠಡಿಯತ್ತ ಹೆಜ್ಜೆ ಹಾಕಿದ್ದರು.</p>.<p>ಕ್ರೆಡ್ ಯೂಟ್ಯೂಬ್ ಚಾನೆಲ್ನಲ್ಲಿ ಘಟನೆಯನ್ನು ನೆನಪಿಸಿರುವ ದ್ರಾವಿಡ್, 'ನನ್ನ ಪಾಲಿಗೆ ಆ ಘಟನೆ ಹೆಮ್ಮೆಯ ಕ್ಷಣವಾಗಿರಲಿಲ್ಲ. ಆದರೆ ಯಾವತ್ತೂ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ' ಎಂದು ಹೇಳಿದ್ದಾರೆ.</p>.<p>'ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವತ್ತೂ ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಮೈದಾನದಲ್ಲಿ ಹಾಗೂ ಹೊರಗಡೆಯೂ ನಿಮ್ಮತ್ತ ಹೆಚ್ಚಿನ ಗಮನ ಇರುತ್ತದೆ. ನಾನು ತಾಳ್ಮೆಯಿಂದಿರುವಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ' ಎಂದು ಹೇಳಿದ್ದಾರೆ.</p>.<p>'ಆ ಘಟನೆಯಲ್ಲಿ ನಾನು ನಿಯಂತ್ರಣ ಕಳೆದುಕೊಂಡಿದ್ದೆ. ಹಾಗಾಗಬಾರದಿತ್ತು. ಆದರೆ ಕೆಲವೊಮ್ಮೆ ಹಾಗೆ ಸಂಭವಿಸುತ್ತದೆ. ಆ ರೀತಿ ಸಂಭವಿಸಿರುವುದು ಮೊದಲ ಬಾರಿಯೇನಲ್ಲ. ಸಾರ್ವಜನಿಕವಾಗಿ ಮೊದಲ ಬಾರಿ ಹಾಗಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಯಾರೂ ಕಾಣದೆ ಹಲವು ಬಾರಿ ಸಂಭವಿಸಿದೆ' ಎಂದು ನಗುತ್ತಲೇ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದಿಗೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಮೈದಾನದ ಒಳಗೂ ಹೊರಗೂ ಶಾಂತಚಿತ್ತರಾಗಿ ವರ್ತಿಸುತ್ತಾರೆ. ಈ ಮೂಲಕ ಯುವ ಕ್ರಿಕೆಟಿಗರಿಗೂ ಮಾದರಿಯಾಗಿದ್ದಾರೆ.</p>.<p>ಆದರೆ ಅತಿ ವಿರಳ ಘಟನೆ ಎಂಬಂತೆ ಐಪಿಎಲ್ 2014ನೇ ಆವೃತ್ತಿಯಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡ ದ್ರಾವಿಡ್, ಕ್ಯಾಪ್ ನೆಲಕ್ಕೆ ಎಸೆದಿರುವುದು ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿತ್ತು.</p>.<p>ಇದನ್ನೂ ಓದಿ:<a href="https://www.prajavani.net/sports/cricket/t20-wc-2021-ind-vs-pak-star-sports-releases-new-mauka-mauka-ad-875604.html" itemprop="url">T20 WC | IND vs PAK: ಮತ್ತೆ ಬಂತು 'ಮೌಕಾ ಮೌಕಾ' ಜಾಹೀರಾತು </a></p>.<p>ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನುಭವಿಸಿದಾಗ ಡಗೌಟ್ನಲ್ಲಿದ್ದ ಮಾರ್ಗದರ್ಶಕ ದ್ರಾವಿಡ್ಗೆ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ. ಕ್ಯಾಪ್ ನೆಲಕ್ಕೆಸೆದು ನೇರವಾಗಿ ಡ್ರೆಸ್ಸಿಂಗ್ ಕೊಠಡಿಯತ್ತ ಹೆಜ್ಜೆ ಹಾಕಿದ್ದರು.</p>.<p>ಕ್ರೆಡ್ ಯೂಟ್ಯೂಬ್ ಚಾನೆಲ್ನಲ್ಲಿ ಘಟನೆಯನ್ನು ನೆನಪಿಸಿರುವ ದ್ರಾವಿಡ್, 'ನನ್ನ ಪಾಲಿಗೆ ಆ ಘಟನೆ ಹೆಮ್ಮೆಯ ಕ್ಷಣವಾಗಿರಲಿಲ್ಲ. ಆದರೆ ಯಾವತ್ತೂ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ' ಎಂದು ಹೇಳಿದ್ದಾರೆ.</p>.<p>'ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವತ್ತೂ ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಮೈದಾನದಲ್ಲಿ ಹಾಗೂ ಹೊರಗಡೆಯೂ ನಿಮ್ಮತ್ತ ಹೆಚ್ಚಿನ ಗಮನ ಇರುತ್ತದೆ. ನಾನು ತಾಳ್ಮೆಯಿಂದಿರುವಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ' ಎಂದು ಹೇಳಿದ್ದಾರೆ.</p>.<p>'ಆ ಘಟನೆಯಲ್ಲಿ ನಾನು ನಿಯಂತ್ರಣ ಕಳೆದುಕೊಂಡಿದ್ದೆ. ಹಾಗಾಗಬಾರದಿತ್ತು. ಆದರೆ ಕೆಲವೊಮ್ಮೆ ಹಾಗೆ ಸಂಭವಿಸುತ್ತದೆ. ಆ ರೀತಿ ಸಂಭವಿಸಿರುವುದು ಮೊದಲ ಬಾರಿಯೇನಲ್ಲ. ಸಾರ್ವಜನಿಕವಾಗಿ ಮೊದಲ ಬಾರಿ ಹಾಗಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಯಾರೂ ಕಾಣದೆ ಹಲವು ಬಾರಿ ಸಂಭವಿಸಿದೆ' ಎಂದು ನಗುತ್ತಲೇ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>