<p><strong>ಪುಣೆ:</strong> ಎಚ್ಚರಿಕೆಯ ನಡೆ ಅನುಸರಿಸಿದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದದಲ್ಲಿ ಮಹಾರಾಷ್ಟ್ರ ಎದುರು ಡ್ರಾ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆಯ ಮೂರು ಅಂಕ ಗಳಿಸಿತು. </p><p>ಮಂಗಳವಾರ ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (103; 249ಎ, 4X8, 6X1) ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದರು. ಹಲವು ದಿನಗಳಿಂದ ಲಯಕ್ಕಾಗಿ ಪರದಾಡಿದ್ದ ಮಯಂಕ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಹೊಡೆದಿದ್ದರು. ಆದರೆ ಅಭಿನವ್ ಮನೋಹರ್ (96; 161ಎ, 4X11, 6X2) ಅಲ್ಪ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಇವರಿಬ್ಬರ ಬ್ಯಾಟಿಂಗ್ನಿಂದಾಗಿ ಎರಡನೇ ಇನಿಂಗ್ಸ್ನಲ್ಲಿ ತಂಡವು 110 ಓವರ್ಗಳಲ್ಲಿ 8 ವಿಕೆಟ್ಗಳಿಗೆ 309 ರನ್ ಗಳಿಸಿತು. ಒಟ್ಟು 326 ರನ್ಗಳ ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ 13 ರನ್ಗಳ ಮುನ್ನಡೆ ಪಡೆದಿತ್ತು. </p><p>ಮಹಾರಾಷ್ಟ್ರ ತಂಡಕ್ಕೆ ಗುರಿಯೊಡ್ಡಿ ಗೆಲುವಿಗೆ ಪ್ರಯತ್ನಿಸುವ ಗೋಜಿಗೆ ಮಯಂಕ್ ಬಳಗ ಹೋಗಲಿಲ್ಲ. ಸೋಮವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 5 ವಿಕೆಟ್ಗಳಿಗೆ 144 ರನ್ ಗಳಿಸಿತ್ತು.64 ರನ್ ಗಳಿಸಿದ್ದ ಮಯಂಕ್ ಕ್ರೀಸ್ನಲ್ಲಿದ್ದರು. ಮಂಗಳವಾರ ಆಟ ಮುಂದುವರಿಸಿದ ಅವರು ಈ ಟೂರ್ನಿಯಲ್ಲಿ ತಮ್ಮ ಮೊದಲ ಶತಕದ ಗಡಿ ದಾಟಿದರು. ಎದುರಾಳಿ ಬೌಲರ್ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದರು. </p><p>ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಏಳನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ಹೆಚ್ಚಿತು. ಸಮಯವೂ ಕಳೆಯಿತು. ವಿಕೆಟ್ ಉಳಿಸಿಕೊಂಡು ಆಡಿದ ಕರ್ನಾಟಕದ ಆಟಗಾರರು ಡ್ರಾದತ್ತ ವಾಲಿದರು. </p><p><strong>ಸಂಕ್ಷಿಪ್ತ ಸ್ಕೋರು</strong></p><p><strong><ins>ಮೊದಲ ಇನಿಂಗ್ಸ್</ins></strong></p><p><strong>ಕರ್ನಾಟಕ:</strong> 111 ಓವರ್ಗಳಲ್ಲಿ 313</p><p><strong>ಮಹಾರಾಷ್ಟ್ರ</strong>: 99.2 ಓವರ್ಗಳಲ್ಲಿ 300. </p><p><strong><ins>ಎರಡನೇ ಇನಿಂಗ್ಸ್</ins></strong></p><p><strong>ಕರ್ನಾಟಕ</strong> 110 ಓವರ್ಗಳಲ್ಲಿ 8ಕ್ಕೆ309 (ಮಯಂಕ್ ಅಗರವಾಲ್ 103, ಕೆ.ಎಲ್. ಶ್ರೀಜಿತ್ 29, ಅಭಿವನ್ ಮನೋಹರ್ 96, ಶ್ರೇಯಸ್ ಗೋಪಾಲ್ ಔಟಾಗದೇ 24, ಮುಕೇಶ್ ಚೌಧರಿ 70ಕ್ಕೆ3, ವಿಕಿ ಓಸ್ವಾಲ್ 49ಕ್ಕೆ2)</p><p><strong>ಫಲಿತಾಂಶ ಡ್ರಾ.</strong> ಕರ್ನಾಟಕಕ್ಕೆ 3, ಮಹಾರಾಷ್ಟ್ರಕ್ಕೆ 1 ಅಂಕ.</p><p><strong>ಪಂದ್ಯಶ್ರೇಷ್ಠ</strong>: ಶ್ರೇಯಸ್ ಗೋಪಾಲ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ಎಚ್ಚರಿಕೆಯ ನಡೆ ಅನುಸರಿಸಿದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದದಲ್ಲಿ ಮಹಾರಾಷ್ಟ್ರ ಎದುರು ಡ್ರಾ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆಯ ಮೂರು ಅಂಕ ಗಳಿಸಿತು. </p><p>ಮಂಗಳವಾರ ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (103; 249ಎ, 4X8, 6X1) ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದರು. ಹಲವು ದಿನಗಳಿಂದ ಲಯಕ್ಕಾಗಿ ಪರದಾಡಿದ್ದ ಮಯಂಕ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಹೊಡೆದಿದ್ದರು. ಆದರೆ ಅಭಿನವ್ ಮನೋಹರ್ (96; 161ಎ, 4X11, 6X2) ಅಲ್ಪ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಇವರಿಬ್ಬರ ಬ್ಯಾಟಿಂಗ್ನಿಂದಾಗಿ ಎರಡನೇ ಇನಿಂಗ್ಸ್ನಲ್ಲಿ ತಂಡವು 110 ಓವರ್ಗಳಲ್ಲಿ 8 ವಿಕೆಟ್ಗಳಿಗೆ 309 ರನ್ ಗಳಿಸಿತು. ಒಟ್ಟು 326 ರನ್ಗಳ ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ 13 ರನ್ಗಳ ಮುನ್ನಡೆ ಪಡೆದಿತ್ತು. </p><p>ಮಹಾರಾಷ್ಟ್ರ ತಂಡಕ್ಕೆ ಗುರಿಯೊಡ್ಡಿ ಗೆಲುವಿಗೆ ಪ್ರಯತ್ನಿಸುವ ಗೋಜಿಗೆ ಮಯಂಕ್ ಬಳಗ ಹೋಗಲಿಲ್ಲ. ಸೋಮವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 5 ವಿಕೆಟ್ಗಳಿಗೆ 144 ರನ್ ಗಳಿಸಿತ್ತು.64 ರನ್ ಗಳಿಸಿದ್ದ ಮಯಂಕ್ ಕ್ರೀಸ್ನಲ್ಲಿದ್ದರು. ಮಂಗಳವಾರ ಆಟ ಮುಂದುವರಿಸಿದ ಅವರು ಈ ಟೂರ್ನಿಯಲ್ಲಿ ತಮ್ಮ ಮೊದಲ ಶತಕದ ಗಡಿ ದಾಟಿದರು. ಎದುರಾಳಿ ಬೌಲರ್ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದರು. </p><p>ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಏಳನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ಹೆಚ್ಚಿತು. ಸಮಯವೂ ಕಳೆಯಿತು. ವಿಕೆಟ್ ಉಳಿಸಿಕೊಂಡು ಆಡಿದ ಕರ್ನಾಟಕದ ಆಟಗಾರರು ಡ್ರಾದತ್ತ ವಾಲಿದರು. </p><p><strong>ಸಂಕ್ಷಿಪ್ತ ಸ್ಕೋರು</strong></p><p><strong><ins>ಮೊದಲ ಇನಿಂಗ್ಸ್</ins></strong></p><p><strong>ಕರ್ನಾಟಕ:</strong> 111 ಓವರ್ಗಳಲ್ಲಿ 313</p><p><strong>ಮಹಾರಾಷ್ಟ್ರ</strong>: 99.2 ಓವರ್ಗಳಲ್ಲಿ 300. </p><p><strong><ins>ಎರಡನೇ ಇನಿಂಗ್ಸ್</ins></strong></p><p><strong>ಕರ್ನಾಟಕ</strong> 110 ಓವರ್ಗಳಲ್ಲಿ 8ಕ್ಕೆ309 (ಮಯಂಕ್ ಅಗರವಾಲ್ 103, ಕೆ.ಎಲ್. ಶ್ರೀಜಿತ್ 29, ಅಭಿವನ್ ಮನೋಹರ್ 96, ಶ್ರೇಯಸ್ ಗೋಪಾಲ್ ಔಟಾಗದೇ 24, ಮುಕೇಶ್ ಚೌಧರಿ 70ಕ್ಕೆ3, ವಿಕಿ ಓಸ್ವಾಲ್ 49ಕ್ಕೆ2)</p><p><strong>ಫಲಿತಾಂಶ ಡ್ರಾ.</strong> ಕರ್ನಾಟಕಕ್ಕೆ 3, ಮಹಾರಾಷ್ಟ್ರಕ್ಕೆ 1 ಅಂಕ.</p><p><strong>ಪಂದ್ಯಶ್ರೇಷ್ಠ</strong>: ಶ್ರೇಯಸ್ ಗೋಪಾಲ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>