ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕರ್ನಾಟಕ ತಂಡ, ನಾಯಕ ಮಯಂಕ್ ಅಗರವಾಲ್ ದ್ವಿಶತಕದ ಬಲದಿಂದ 407 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಪರ ನಾಯಕ ಅರ್ಪಿತ್ 202 ರನ್, ಶೆಲ್ಡನ್ 160 ರನ್ ಹಾಗೂ ಚಿರಾಗ್ ಜಾನಿ 72 ರನ್ ಗಳಿಸಿ ಮಿಂಚಿದರು. ಹೀಗಾಗಿ ಪ್ರವಾಸಿ ಪಡೆ 527 ರನ್ ಕಲೆಹಾಕಿ 120 ರನ್ ಅಂತರದ ಮುನ್ನಡೆ ಪಡೆದಿದೆ.