ತರೌಬಾ (ಟ್ರಿನಿಡಾಡ್):19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಪರ, ಮಾನವ್ ಪರಾಖ್ಗೆಬದಲಿ ಆಟಗಾರನಾಗಿ ವಸಿ ವತ್ಸ್ಕಣಕ್ಕಿಳಿಯಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮತಿ ನೀಡಿದೆ.
ಪರಾಖ್ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಪ್ರತ್ಯೇಕವಾಸದಲ್ಲಿ ಉಳಿದಿದ್ದಾರೆ.ಹೀಗಾಗಿ ವತ್ಸ್ ಅವರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ. ಪರಾಖ್ ಗುಣಮುಖರಾದರೆವತ್ಸ್ ಬದಲು ತಂಡ ಕೂಡಿಕೊಳ್ಳಲಿದ್ದಾರೆ.
ಬದಲಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲು ಟೂರ್ನಿಯ ತಾಂತ್ರಿಕ ಸಮಿತಿಯ ಅನುಮತಿಬೇಕು.
ಸದ್ಯ ಟೂರ್ನಿಯಲ್ಲಿ ಬಿ ಗುಂಪಿನಲ್ಲಿರುವ ಭಾರತ, ಗುಂಪು ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಇದರೊಂದಿಗೆ ತಂಡವು ಕ್ವಾರ್ಟರ್ಫೈನಲ್ ಪ್ರವೇಶಿಸುವುದು ಖಚಿತವಾಗಿದೆ.
ಗುಂಪು ಹಂತದ ತನ್ನ ಕೊನೇ ಪಂದ್ಯದಲ್ಲಿಇಂದು ಉಗಾಂಡ ಎದುರು ಕಣಕ್ಕಿಳಿಯಲ್ಲಿದ್ದು, ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.