ಈ ಪಂದ್ಯದಲ್ಲಿ ಪುದುಚೇರಿ ತಂಡವು ಇನಿಂಗ್ಸ್ ಮತ್ತು 272 ರನ್ಗಳಿಂದ ಗೆದ್ದ ಮೇಲೆ ಸಹ ಆಟಗಾರರು ವಿನಯ್ ಅವರಿಗೆ ಗೌರವ ರಕ್ಷೆ ನೀಡಿ ಅಭಿನಂದಿಸಿದರು. 2004ರಿಂದ ಹೋದ ಋತುವಿನವರೆಗೆ ಅವರು ಕರ್ನಾಟಕ ತಂಡದಲ್ಲಿ ಆಡುತ್ತಿದ್ದರು. ಅವರ ನಾಯಕತ್ವದಲ್ಲಿ ಕರ್ನಾಟಕ ತಂಡವು ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಿತ್ತು. ಈ ಋತುವಿನಿಂದ ಅವರು ಪುದುಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.