<p><strong>ಆ್ಯಂಟಿಗುವಾ:</strong> ವಿವಾದಾತ್ಮಕ ಅಂಪೈರ್ ತೀರ್ಪಿನ ಬಳಿಕ ಘಟನೆ ಸಂಬಂಧ ವೆಸ್ಟ್ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ತಮ್ಮ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಶ್ರೀಲಂಕಾ ಬ್ಯಾಟ್ಸ್ಮನ್ ಧನುಷ್ಕಾ ಗುಣತಿಲಕ ಹೇಳಿದ್ದಾರೆ.</p>.<p>ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ನಡುವೆ ಆ್ಯಂಟಿಗುವಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಘಟನೆ ನಡೆದಿತ್ತು. ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ಮನ್ ಗುಣತಿಲಕ ಆಕರ್ಷಕ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿ ಕಂಡುಬಂದಿದ್ದರು.</p>.<p>ಈ ಹಂತದಲ್ಲಿ ಕೀರಾನ್ ಪೊಲಾರ್ಡ್ ಎಸೆದ ಇನ್ನಿಂಗ್ಸ್ನ 22ನೇ ಓವರ್ನ ಮೊದಲ ಎಸೆತದಲ್ಲಿ ಒಂಟಿ ರನ್ ಕಸಿಯುವ ಯತ್ನದಲ್ಲಿ ಶ್ರೀಲಂಕಾ ಬ್ಯಾಟ್ಸ್ಮನ್ಗಳ ನಡುವೆ ಗೊಂದಲವುಂಟಾಯಿತು.</p>.<p>ಗುಣತಿಲಕ ರಕ್ಷಣಾತ್ಮಕ ಆಟವಾಡಿ ಮೊದಲು ಒಂದು ರನ್ ಕದಿಯಲೆತ್ನಿಸಿ ಬಳಿಕ ನಾನ್ ಸ್ಟೈಕರ್ ಆಟಗಾರನನ್ನು ಮರಳಿಸಿದರು. ಈ ಸಂದರ್ಭದಲ್ಲಿ ಚೆಂಡು ಪಿಚ್ ಮೇಲೆ ಬಿದ್ದಿತ್ತು.</p>.<p>ಇದನ್ನು ಗಮನಿಸಿದ ಪೊಲಾರ್ಡ್ ಚೆಂಡಿನತ್ತ ಧಾವಿಸುತ್ತಾ ರನೌಟ್ ಮಾಡುವ ಪ್ರಯತ್ನ ಮಾಡಿದರು. ಆದರೆ ಗುಣತಿಲಕ ಅಡ್ಡಿಯಾಗಿದ್ದರಿಂದ ರನೌಟ್ ಮಾಡುವ ಯತ್ನ ಸಫಲವಾಗಲಿಲ್ಲ. ಆದರೂ ಆಕ್ರೋಶಗೊಂಡು ಅಂಪೈರ್ಗೆ ಮನವಿ ಮಾಡಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/wi-vs-sl-kieron-pollard-hits-6-sixes-in-an-over-against-sri-lankas-hat-trick-hero-akila-dananjaya-810373.html" itemprop="url">6,6,6,6,6,6; ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್ </a></p>.<p>ತಕ್ಷಣ ಮನವಿ ಪುರಸ್ಕರಿಸಿದ ಫೀಲ್ಡ್ ಅಂಪೈರ್, ತೀರ್ಪನ್ನು ಥರ್ಡ್ ಅಂಪೈರ್ಗೆ ಕಾಯ್ದಿರಿಸಿದರು. ಬಳಿಕ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪಿನಲ್ಲಿ ಗುಣತಿಲಕ ಔಟ್ ಎಂದು ಘೋಷಿಸಿದರು.</p>.<p>ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್ಗೆ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದರು. ಇದರಿಂದಾಗಿ ನಿರಾಸೆಯಾಗಿ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು.</p>.<p>ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಫೀಲ್ಡಿಂಗ್ಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಗುಣತಿಲಕ ಮಾಡಿರಲಿಲ್ಲ. ಬಳಿಕ ಇದನ್ನು ಮನಗಂಡಿರುವ ಕೀರಾನ್ ಪೊಲಾರ್ಡ್, ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರನ ಬಳಿ ತೆರಳಿ ಕ್ಷಮೆಯಾಚನೆ ನಡೆಸಿದ್ದಾರೆ.</p>.<p>ಅವರು (ಪೊಲಾರ್ಡ್) ಕ್ಷಮೆಯಾಚಿಸಿದರು. ಪಂದ್ಯದ ವೇಳೆ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ನೋಡಿದ ಬಳಿಕವಷ್ಟೇ ನಾನು ತಪ್ಪು ಮಾಡಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡರು ಎಂದು ಧನುಷ್ಕಾ ವಿವರಿಸಿದರು.</p>.<p>ಧನುಷ್ಕಾ ಹೆಗಲ ಮೇಲೆ ಕೈಯನ್ನಿಟ್ಟಿರುವ ಪೊಲಾರ್ಡ್ ಸಮಾಲೋಚಿಸುತ್ತಿರುವ ಚಿತ್ರವನ್ನು ಹಂಚಿರುವ ವೆಸ್ಟ್ಇಂಡೀಸ್ ಕ್ರಿಕೆಟ್, ಉತ್ತಮ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ ಎಂದು ಶ್ಲಾಘಿಸಿದೆ.</p>.<p>ಅಂದ ಹಾಗೆ ಶಾಯ್ ಹೋಪ್ ಶತಕದ ಬೆಂಬಲದೊಂದಿಗೆ ವಿಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆ್ಯಂಟಿಗುವಾ:</strong> ವಿವಾದಾತ್ಮಕ ಅಂಪೈರ್ ತೀರ್ಪಿನ ಬಳಿಕ ಘಟನೆ ಸಂಬಂಧ ವೆಸ್ಟ್ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ತಮ್ಮ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಶ್ರೀಲಂಕಾ ಬ್ಯಾಟ್ಸ್ಮನ್ ಧನುಷ್ಕಾ ಗುಣತಿಲಕ ಹೇಳಿದ್ದಾರೆ.</p>.<p>ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ನಡುವೆ ಆ್ಯಂಟಿಗುವಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಘಟನೆ ನಡೆದಿತ್ತು. ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ಮನ್ ಗುಣತಿಲಕ ಆಕರ್ಷಕ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿ ಕಂಡುಬಂದಿದ್ದರು.</p>.<p>ಈ ಹಂತದಲ್ಲಿ ಕೀರಾನ್ ಪೊಲಾರ್ಡ್ ಎಸೆದ ಇನ್ನಿಂಗ್ಸ್ನ 22ನೇ ಓವರ್ನ ಮೊದಲ ಎಸೆತದಲ್ಲಿ ಒಂಟಿ ರನ್ ಕಸಿಯುವ ಯತ್ನದಲ್ಲಿ ಶ್ರೀಲಂಕಾ ಬ್ಯಾಟ್ಸ್ಮನ್ಗಳ ನಡುವೆ ಗೊಂದಲವುಂಟಾಯಿತು.</p>.<p>ಗುಣತಿಲಕ ರಕ್ಷಣಾತ್ಮಕ ಆಟವಾಡಿ ಮೊದಲು ಒಂದು ರನ್ ಕದಿಯಲೆತ್ನಿಸಿ ಬಳಿಕ ನಾನ್ ಸ್ಟೈಕರ್ ಆಟಗಾರನನ್ನು ಮರಳಿಸಿದರು. ಈ ಸಂದರ್ಭದಲ್ಲಿ ಚೆಂಡು ಪಿಚ್ ಮೇಲೆ ಬಿದ್ದಿತ್ತು.</p>.<p>ಇದನ್ನು ಗಮನಿಸಿದ ಪೊಲಾರ್ಡ್ ಚೆಂಡಿನತ್ತ ಧಾವಿಸುತ್ತಾ ರನೌಟ್ ಮಾಡುವ ಪ್ರಯತ್ನ ಮಾಡಿದರು. ಆದರೆ ಗುಣತಿಲಕ ಅಡ್ಡಿಯಾಗಿದ್ದರಿಂದ ರನೌಟ್ ಮಾಡುವ ಯತ್ನ ಸಫಲವಾಗಲಿಲ್ಲ. ಆದರೂ ಆಕ್ರೋಶಗೊಂಡು ಅಂಪೈರ್ಗೆ ಮನವಿ ಮಾಡಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/wi-vs-sl-kieron-pollard-hits-6-sixes-in-an-over-against-sri-lankas-hat-trick-hero-akila-dananjaya-810373.html" itemprop="url">6,6,6,6,6,6; ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್ </a></p>.<p>ತಕ್ಷಣ ಮನವಿ ಪುರಸ್ಕರಿಸಿದ ಫೀಲ್ಡ್ ಅಂಪೈರ್, ತೀರ್ಪನ್ನು ಥರ್ಡ್ ಅಂಪೈರ್ಗೆ ಕಾಯ್ದಿರಿಸಿದರು. ಬಳಿಕ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪಿನಲ್ಲಿ ಗುಣತಿಲಕ ಔಟ್ ಎಂದು ಘೋಷಿಸಿದರು.</p>.<p>ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್ಗೆ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದರು. ಇದರಿಂದಾಗಿ ನಿರಾಸೆಯಾಗಿ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು.</p>.<p>ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಫೀಲ್ಡಿಂಗ್ಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಗುಣತಿಲಕ ಮಾಡಿರಲಿಲ್ಲ. ಬಳಿಕ ಇದನ್ನು ಮನಗಂಡಿರುವ ಕೀರಾನ್ ಪೊಲಾರ್ಡ್, ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರನ ಬಳಿ ತೆರಳಿ ಕ್ಷಮೆಯಾಚನೆ ನಡೆಸಿದ್ದಾರೆ.</p>.<p>ಅವರು (ಪೊಲಾರ್ಡ್) ಕ್ಷಮೆಯಾಚಿಸಿದರು. ಪಂದ್ಯದ ವೇಳೆ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ನೋಡಿದ ಬಳಿಕವಷ್ಟೇ ನಾನು ತಪ್ಪು ಮಾಡಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡರು ಎಂದು ಧನುಷ್ಕಾ ವಿವರಿಸಿದರು.</p>.<p>ಧನುಷ್ಕಾ ಹೆಗಲ ಮೇಲೆ ಕೈಯನ್ನಿಟ್ಟಿರುವ ಪೊಲಾರ್ಡ್ ಸಮಾಲೋಚಿಸುತ್ತಿರುವ ಚಿತ್ರವನ್ನು ಹಂಚಿರುವ ವೆಸ್ಟ್ಇಂಡೀಸ್ ಕ್ರಿಕೆಟ್, ಉತ್ತಮ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ ಎಂದು ಶ್ಲಾಘಿಸಿದೆ.</p>.<p>ಅಂದ ಹಾಗೆ ಶಾಯ್ ಹೋಪ್ ಶತಕದ ಬೆಂಬಲದೊಂದಿಗೆ ವಿಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>