ನವದೆಹಲಿ: ಐಜ್ವಾಲ್ನಲ್ಲಿ ನಡೆಯಬೇಕಿದ್ದ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಅಂತಿಮ ಸುತ್ತನ್ನು ಕೊರೊನಾ ಸೋಂಕಿನ ಭೀತಿಯ ಕಾರಣ ಮುಂದೂಡಲಾಗಿದೆ. ಸರ್ಕಾರ ನೀಡಿದ ಆರೋಗ್ಯ ಸಲಹೆಗಳಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅರ್ಹತೆ ಪಡೆದ ಎಲ್ಲ ರಾಜ್ಯ ಸಂಸ್ಥೆಗಳಿಗೆಅಂತಿಮ ಸುತ್ತು ಮುಂದೂ ಡಿರುವುದರಮಾಹಿತಿ ನೀಡಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಪತ್ರ ಬರೆದಿದೆ.
‘ಆಟಗಾರರು ಹಾಗೂ ಸಿಬ್ಬಂದಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಐಜ್ವಾಲ್ನಲ್ಲಿ 14ರಿಂದ 27ರವರೆಗೆ ನಡೆಯಬೇಕಿದ್ದ ಅಂತಿಮ ಸುತ್ತು ಮುಂದೂಡಲಾಗಿದೆ’ ಎಂದು ಎಐಎಫ್ಎಫ್ ತಿಳಿಸಿದೆ.