<p><strong>ಜಕಾರ್ತ:</strong> ಕಾಲ್ತುಳಿತದಲ್ಲಿ 133 ಜನರು ಮೃತಪಟ್ಟ ಧಾರುಣ ಘಟನೆಗೆ ಸಾಕ್ಷಿಯಾದ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣವನ್ನು ಕೆಡವಿ, ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೊನೇಷ್ಯಾ ಅಧ್ಯಕ್ಷರು ಮಂಗಳವಾರ ಹೇಳಿದ್ದಾರೆ.</p>.<p>‘ಮಲಾಂಗ್ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ಕೆಡವಿ, ಫೀಫಾ ಮಾನದಂಡಗಳಿಗೆ ಅನುಗುಣವಾಗಿ ಪುನರ್ನಿರ್ಮಾಣ ಮಾಡುತ್ತೇವೆ’ ಎಂದು ಜೋಕೊ ವಿಡೋಡೊ ಸುದ್ದಿಗಾರರಿಗೆ ತಿಳಿಸಿದರು. ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊ ಅವರನ್ನು ಭೇಟಿಯಾದ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು.</p>.<p>ಅಕ್ಟೋಬರ್ 1 ರಂದು ಮಲಾಂಗ್ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಗಿದ್ದ ಕಾಲ್ತುಳಿತದಲ್ಲಿ 40 ಕ್ಕೂ ಹೆಚ್ಚು ಮಕ್ಕಳೂ ಸಾವಿಗೀಡಾಗಿದ್ದರು. ಈ ದುರ್ಘಟನೆಯನ್ನು ಇನ್ಫ್ಯಾಂಟಿನೊ ಅವರು ‘ಫುಟ್ಬಾಲ್ ರಂಗದ ಕರಾಳ ದಿನ’ ಎಂದು ಹೇಳಿದ್ದರು.</p>.<p>ಅರೆಮಾ ಎಫ್ಸಿ ಮತ್ತು ಪ್ರತಿಸ್ಪರ್ಧಿಗಳಾದ ಪರ್ಸೆಬಯಾ ಸುರಬಯಾ ನಡುವಿನ ಲೀಗ್ ಪಂದ್ಯದ ಕೊನೆಯಲ್ಲಿ ಬೆಂಬಲಿಗರು ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಪ್ರೇಕ್ಷಕರಿಂದ ತುಂಬಿದ್ದ ಸ್ಟ್ಯಾಂಡ್ಗಳತ್ತ ಪೊಲೀಸರು ಅಶ್ರುವಾಯು ಹಾರಿಸಿದ್ದರು. ಹೀಗಾಗಿ ಕಾಲ್ತುಳಿತ ಆಗಿತ್ತು.</p>.<p>‘ಆಟಗಾರರ ಮತ್ತು ಪ್ರೇಕ್ಷಕರ ಸುರಕ್ಷತೆ ಹೊಂದಿರುವ ಸೂಕ್ತ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನು ಅದೇ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ವಿಡೋಡೊ ಹೇಳಿದ್ದಾರೆ.</p>.<p>ಇಂಡೊನೇಷಿಯನ್ ಫುಟ್ಬಾಲ್ ಅನ್ನು ಸುಧಾರಿಸಲು ಮತ್ತು ರೂಪಾಂತರ ಮಾಡಲು ಫಿಫಾ ನೆರವಾಗಲಿದೆ ಎಂದು ಇನ್ಫ್ಯಾಂಟಿನೊ ಹೇಳಿದ್ದಾರೆ.</p>.<p>2004 ರಲ್ಲಿ ತೆರೆಯಲಾದ 42,000 ಸಾಮರ್ಥ್ಯದ ಕಂಜುರುಹಾನ್ ಕ್ರೀಡಾಂಗಣದ ಗೇಟ್ಗಳಲ್ಲಿ ಒಂದು ಬಾರಿಗೆ ಇಬ್ಬರು ಮಾತ್ರ ಒಳ/ಹೊರ ಹೋಗಲು ಸಾಧ್ಯ. ದುರ್ಘಟನೆ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ಈ ಗೇಟುಗಳನ್ನು ತೆರೆದಿರಲೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೂಲಸೌಕರ್ಯ ಕೊರತೆ, ಅಸಮರ್ಪಕ ನಿರ್ವಹಣೆ, ಹೊರಹೋಗಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೇರಿ ಹಲವು ಕಾರಣಗಳಿಂದಾಗಿ ಇಂಡೋನೇಷ್ಯಾದ ಕ್ರೀಡಾಂಗಣಗಳಲ್ಲಿ 1990ರಿಂದಲೂ ಹಲವು ಸಾವುಗಳು ಸಂಭವಿಸಿವೆ ಎಂದು ತಜ್ಞರು ಹೇಳಿದ್ದಾರೆ.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/sports/football/indonesia-to-probe-soccer-stampede-police-use-of-tear-gas-in-focus-977321.html" itemprop="url">ಇಂಡೊನೇಷ್ಯಾ ಫುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಸತ್ತವರಲ್ಲಿ 32 ಮಕ್ಕಳು! </a></p>.<p><a href="https://www.prajavani.net/world-news/body-of-indonesian-governor-son-found-in-swiss-river-944125.html" itemprop="url">ಇಂಡೋನೇಷ್ಯಾ: ಗವರ್ನರ್ ಪುತ್ರನ ಮೃತದೇಹ ಸ್ವಿಟ್ಜರ್ರ್ಲೆಂಡ್ನಲ್ಲಿ ಪತ್ತೆ </a></p>.<p><a href="https://www.prajavani.net/world-news/instagram-russian-influencer-jailed-for-posing-naked-under-a-holy-tree-in-indonesia-935002.html" itemprop="url">ಬಾಲಿಯ ಪವಿತ್ರ ಮರದ ಮುಂದೆ ನಗ್ನ ಫೋಟೊಕ್ಕೆ ಪೋಸ್ ಕೊಟ್ಟ ರಷಿಯನ್ ಬಾಲೆ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಕಾರ್ತ:</strong> ಕಾಲ್ತುಳಿತದಲ್ಲಿ 133 ಜನರು ಮೃತಪಟ್ಟ ಧಾರುಣ ಘಟನೆಗೆ ಸಾಕ್ಷಿಯಾದ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣವನ್ನು ಕೆಡವಿ, ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೊನೇಷ್ಯಾ ಅಧ್ಯಕ್ಷರು ಮಂಗಳವಾರ ಹೇಳಿದ್ದಾರೆ.</p>.<p>‘ಮಲಾಂಗ್ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ಕೆಡವಿ, ಫೀಫಾ ಮಾನದಂಡಗಳಿಗೆ ಅನುಗುಣವಾಗಿ ಪುನರ್ನಿರ್ಮಾಣ ಮಾಡುತ್ತೇವೆ’ ಎಂದು ಜೋಕೊ ವಿಡೋಡೊ ಸುದ್ದಿಗಾರರಿಗೆ ತಿಳಿಸಿದರು. ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊ ಅವರನ್ನು ಭೇಟಿಯಾದ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು.</p>.<p>ಅಕ್ಟೋಬರ್ 1 ರಂದು ಮಲಾಂಗ್ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಗಿದ್ದ ಕಾಲ್ತುಳಿತದಲ್ಲಿ 40 ಕ್ಕೂ ಹೆಚ್ಚು ಮಕ್ಕಳೂ ಸಾವಿಗೀಡಾಗಿದ್ದರು. ಈ ದುರ್ಘಟನೆಯನ್ನು ಇನ್ಫ್ಯಾಂಟಿನೊ ಅವರು ‘ಫುಟ್ಬಾಲ್ ರಂಗದ ಕರಾಳ ದಿನ’ ಎಂದು ಹೇಳಿದ್ದರು.</p>.<p>ಅರೆಮಾ ಎಫ್ಸಿ ಮತ್ತು ಪ್ರತಿಸ್ಪರ್ಧಿಗಳಾದ ಪರ್ಸೆಬಯಾ ಸುರಬಯಾ ನಡುವಿನ ಲೀಗ್ ಪಂದ್ಯದ ಕೊನೆಯಲ್ಲಿ ಬೆಂಬಲಿಗರು ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಪ್ರೇಕ್ಷಕರಿಂದ ತುಂಬಿದ್ದ ಸ್ಟ್ಯಾಂಡ್ಗಳತ್ತ ಪೊಲೀಸರು ಅಶ್ರುವಾಯು ಹಾರಿಸಿದ್ದರು. ಹೀಗಾಗಿ ಕಾಲ್ತುಳಿತ ಆಗಿತ್ತು.</p>.<p>‘ಆಟಗಾರರ ಮತ್ತು ಪ್ರೇಕ್ಷಕರ ಸುರಕ್ಷತೆ ಹೊಂದಿರುವ ಸೂಕ್ತ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನು ಅದೇ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ವಿಡೋಡೊ ಹೇಳಿದ್ದಾರೆ.</p>.<p>ಇಂಡೊನೇಷಿಯನ್ ಫುಟ್ಬಾಲ್ ಅನ್ನು ಸುಧಾರಿಸಲು ಮತ್ತು ರೂಪಾಂತರ ಮಾಡಲು ಫಿಫಾ ನೆರವಾಗಲಿದೆ ಎಂದು ಇನ್ಫ್ಯಾಂಟಿನೊ ಹೇಳಿದ್ದಾರೆ.</p>.<p>2004 ರಲ್ಲಿ ತೆರೆಯಲಾದ 42,000 ಸಾಮರ್ಥ್ಯದ ಕಂಜುರುಹಾನ್ ಕ್ರೀಡಾಂಗಣದ ಗೇಟ್ಗಳಲ್ಲಿ ಒಂದು ಬಾರಿಗೆ ಇಬ್ಬರು ಮಾತ್ರ ಒಳ/ಹೊರ ಹೋಗಲು ಸಾಧ್ಯ. ದುರ್ಘಟನೆ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ಈ ಗೇಟುಗಳನ್ನು ತೆರೆದಿರಲೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮೂಲಸೌಕರ್ಯ ಕೊರತೆ, ಅಸಮರ್ಪಕ ನಿರ್ವಹಣೆ, ಹೊರಹೋಗಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೇರಿ ಹಲವು ಕಾರಣಗಳಿಂದಾಗಿ ಇಂಡೋನೇಷ್ಯಾದ ಕ್ರೀಡಾಂಗಣಗಳಲ್ಲಿ 1990ರಿಂದಲೂ ಹಲವು ಸಾವುಗಳು ಸಂಭವಿಸಿವೆ ಎಂದು ತಜ್ಞರು ಹೇಳಿದ್ದಾರೆ.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/sports/football/indonesia-to-probe-soccer-stampede-police-use-of-tear-gas-in-focus-977321.html" itemprop="url">ಇಂಡೊನೇಷ್ಯಾ ಫುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಸತ್ತವರಲ್ಲಿ 32 ಮಕ್ಕಳು! </a></p>.<p><a href="https://www.prajavani.net/world-news/body-of-indonesian-governor-son-found-in-swiss-river-944125.html" itemprop="url">ಇಂಡೋನೇಷ್ಯಾ: ಗವರ್ನರ್ ಪುತ್ರನ ಮೃತದೇಹ ಸ್ವಿಟ್ಜರ್ರ್ಲೆಂಡ್ನಲ್ಲಿ ಪತ್ತೆ </a></p>.<p><a href="https://www.prajavani.net/world-news/instagram-russian-influencer-jailed-for-posing-naked-under-a-holy-tree-in-indonesia-935002.html" itemprop="url">ಬಾಲಿಯ ಪವಿತ್ರ ಮರದ ಮುಂದೆ ನಗ್ನ ಫೋಟೊಕ್ಕೆ ಪೋಸ್ ಕೊಟ್ಟ ರಷಿಯನ್ ಬಾಲೆ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>