‘ಈ ಸಾಧನೆಗೆ ಆತ್ಮವಿಶ್ವಾಸ ಬಹು ಮುಖ್ಯವಾಗಿದೆ. ಓದು, ಬರಹದ ಜೊತೆಗೆ ಆಟ, ಓಟ ಅತ್ಯವಶ್ಯವಿದೆ. ಕೊರೊನಾ ಪರಿಸ್ಥಿತಿಯಿಂದ ಸಿಕ್ಕಿದ್ದ ಬಿಡುವಿನ ವೇಳೆಯಲ್ಲಿ ಓದಿನ ಜೊತೆಗೆ ಕಬಡ್ಡಿ ಆಟದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದೆ. ಇದು ಗುರಿ ಸಾಧನೆಗೆ ಸಹಕಾರಿ ಆಗಿದೆ. ತರಬೇತುದಾರ ಶಿಕ್ಷಕರ ಕೊಡುಗೆಯೂ ಇದೆ’ ಎಂದು ಅಂಜಲಿ ‘ಪ್ರಜಾವಾಣಿ’ಗೆ ತಿಳಿಸಿದರು.