<p><strong>ಮಂಗಳೂರು:</strong> ಎದುರಾಳಿಯ ಆಟಗಾರನ ಪ್ರಬಲ ಪೈಪೋಟಿಯನ್ನು ಮೀರಿದ ಬೆಂಗಳೂರು ನಗರ ಜಿಲ್ಲೆಯ ವರುಣ್ ಜಿ.ಪಿ, ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಸೀನಿಯರ್ ಮತ್ತು 19 ವರ್ಷದೊಳಗಿನವರ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದರು.</p>.<p>ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಉರ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಸೋಮವಾರ ಎರಡೂ ವಿಭಾಗಗಳ ಮೂರನೇ ಸುತ್ತಿನಲ್ಲಿ ಅವರು ಭರ್ಜರಿ ಜಯ ಸಾಧಿಸಿದರು. ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ತೋಷನ್ ನಾಯಕ್ ವಿರುದ್ಧ 8–15, 15–11, 15–12ರಲ್ಲಿ ಗೆದ್ದ ಅವರು 19 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ತೇಜಸ್ ಎದುರು 15-10, 15-10ರ ಗೆಲುವು ದಾಖಲಿಸಿದರು. </p>.<p>ಬೆಂಗಳೂರಿನ ತಿಲಕ್ ಬಿ.ಶೆಟ್ಟಿ ಮತ್ತು ಹಾರ್ದಿಕ್ ಮೊಹಾಂತಿ ಕೂಡ ಎರಡೂ ವಿಭಾಗಗಳಲ್ಲಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರು. ಸೀನಿಯರ್ ವಿಭಾಗದಲ್ಲಿ ತಿಲಕ್ ಶೆಟ್ಟಿ ಬೆಂಗಳೂರಿನ ರೋಹನ್ ಶ್ರೀಸಾಯ್ ವಿರುದ್ಧ 15-11, 15-12ರಲ್ಲಿ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಆದಿತ್ಯ ಕುರುವಿಳ ವಿರುದ್ಧ 15-8, 15-11ರಲ್ಲಿ ಗೆದ್ದರು. ಹಾರ್ದಿಕ್ ಸೀನಿಯರ್ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ಪವನ್ ಅವರನ್ನು 15-9, 15-4ರಿಂದ, 19 ವರ್ಷದೊಳಗಿನವರ ವಿಭಾಗದಲ್ಲಿ ಗಣೇಶ್ ಬಾಬು ಅವರನ್ನು 15-9, 15-5ರಲ್ಲಿ ಮಣಿಸಿದರು.</p>.<p><strong>3ನೇ ಸುತ್ತಿನ ಇತರ ಫಲಿತಾಂಶಗಳು:</strong> ಸೀನಿಯರ್ ವಿಭಾಗ: ಬೆಂಗಳೂರಿನ ವರುಣ್ ಶ್ರೀರಾಮ್ಗೆ ನಿಖಿಲ್ ಪಿ.ಎಂ ವಿರುದ್ಧ 15-4, 15-8ರಲ್ಲಿ, ಮೈಸೂರಿನ ಗೌರವ್ಗೆ ಬೆಂಗಳೂರಿನ ಪ್ರದ್ಯುಮ್ ವಿರುದ್ಧ 15-12, 15-13ರಲ್ಲಿ, ಬೆಂಗಳೂರಿನ ಪ್ರಣವ್ಗೆ ಅರ್ಜುನ್ ವಿರುದ್ಧ 15-10, 15-11ರಲ್ಲಿ, ಮೈಸೂರಿನ ವಿಶಾಲ್ಗೆ ದಕ್ಷಿಣ ಕನ್ನಡದ ಗ್ಲ್ಯಾನಿಷ್ ವಿರುದ್ಧ 9-15, 15-12, 1-0ರಲ್ಲಿ, ಬೆಂಗಳೂರಿನ ಅತೀಕ್ಷ್ಗೆ ತ್ರಿಶ್ ವಿಠಲ್ ವಿರುದ್ಧ 15-7, 19-17ರಲ್ಲಿ, ಬೆಂಗಳೂರಿನ ಶ್ಯಾಮ್ ಬಿಂಡಿಗನವಿಲೆಗೆ ನರೈನ್ ವಿರುದ್ಧ 15-8, 15-6ರಲ್ಲಿ, ಬೆಂಗಳೂರಿನ ಶಮಂತ್ ರಾವ್ ಕದಿಯೂರ್ಗೆ ಸ್ವರೂಪ್ ಫಾಲಾಕ್ಷಯ್ಯ ವಿರುದ್ಧ 11-15, 15-9, 15-7ರಲ್ಲಿ, ಮೈಸೂರಿನ ಭುವನ್ಗೆ ಬೆಳಗಾವಿಯ ಮಹಿಮ್ ವಿರುದ್ಧ 15-8, 15-11ರಲ್ಲಿ, ಬೆಂಗಳೂರಿನ ರಾಘವೇಂದ್ರಗೆ ಯುವರಾಜ್ ವಿರುದ್ಧ 15-9, 15-8ರಲ್ಲಿ, ಬೆಂಗಳೂರಿನ ಕೌಶಿಕ್ ರೆಡ್ಡಿಗೆ ಸ್ವಯಂ ವಿರುದ್ಧ 15-6, 15-9ರಲ್ಲಿ, ದಕ್ಷಿಣ ಕನ್ನಡದ ಸಹರ್ಷ್ ಪ್ರಭುಗೆ ಬೆಂಗಳೂರಿನ ಸುಬುದ್ಧ್ ವಿರುದ್ಧ 14-16, 15-6, 15-10ರಲ್ಲಿ, ಕೊಡಗಿನ ಜೈದ್ಗೆ ಬೆಂಗಳೂರಿನ ಮೌರ್ಯ ವಿರುದ್ಧ 15-13, 15-11ರಲ್ಲಿ, ಬೆಂಗಳೂರಿನ ಪ್ರತೀಶ್ಗೆ ವಂಶಿಲ್ ವಿರುದ್ಧ 15-3, 15-4ರಲ್ಲಿ ಗೆಲುವು.</p>.<p><strong>19 ವರ್ಷದೊಳಗಿನವರು:</strong> ಬೆಂಗಳೂರಿನ ಇಂದ್ರಜ್ ವಿನೋದ್ಗೆ ಹರ್ಷಿಲ್ ಎದುರು 15-10, 15-11ರಲ್ಲಿ, ಬೆಂಗಳೂರಿನ ಕೊಂಟನೂರು ಶಿವರಾಜ್ಗೆ ಶ್ಯಾಮ್ಚರಣ್ ಎದುರು 15-11, 15-9ರಲ್ಲಿ, ಬೆಂಗಳೂರಿನ ಅದಿತ್ ಶೆಟ್ಟಿಗೆ ಪ್ರೀತಮ್ ಕುಮಾರ್ ಎದುರು 15-6, 10-15, 15-13ರಲ್ಲಿ, ಬೆಳಗಾವಿಯ ಮಹಿಮ್ಗೆ ದಕ್ಷಿಣ ಕನ್ನಡದ ಸಾತ್ವಿಕ್ ಪ್ರಭು ಎದುರು 15-11, 15-11ರಲ್ಲಿ, ಬೆಂಗಳೂರಿನ ತೋಷನ್ ನಾಯಕ್ಗೆ ತನ್ಮಯ್ ಎದುರು 17-15, 12-15, 15-10ರಲ್ಲಿ, ಬೆಂಗಳೂರಿನ ವಿಸ್ಮಯ್ ರಾಜ್ಗೆ ವಂಶಿಲ್ ಎದುರು 9-15, 15-13, 15-12ರಲ್ಲಿ, ಬೆಂಗಳೂರಿನ ಸ್ವಯಂಗೆ ಸುಜಿತ್ ಎದುರು 15-8, 13-15, 15-12ರಲ್ಲಿ, ಬೆಂಗಳೂರಿನ ಸ್ವರೂಪ್ ಫಾಲಾಕ್ಷಯ್ಯಗೆ ಮೊಹಮ್ಮದ್ ಸುಹಾನ್ ಎದುರು 15-6, 15-10ರಲ್ಲಿ, ಬೆಂಗಳೂರಿನ ಕರಣ್ಶ್ಗೆ ರಾಘವ್ ಎದುರು 15-12, 15-4ರಲ್ಲಿ, ಬೆಂಗಳೂರಿನ ಶ್ರೇಯಸ್ಗೆ ಅಭಿನವ್ ಎದುರು 15-7, 15-8ರಲ್ಲಿ, ದಕ್ಷಿಣ ಕನ್ನಡದ ನಿಕೇತನ್ ಅಮೀನ್ಗೆ ಬೆಂಗಳೂರಿನ ವಿಭು ಎದುರು 15-7, 15-7ರಲ್ಲಿ, ಬೆಂಗಳೂರು ಗ್ರಾಮಾಂತರದ ನೀಲೇಶ್ಗೆ ವೀರ್ ಎದುರು 15-9, 15-8ರಲ್ಲಿ ಜಯ. ಉಡುಪಿಯ ಕನಿಷ್ಕ್ಗೆ ವಾಕ್ ಓವರ್.</p>.<p>ಮಹಿಳೆಯರ ಮೊದಲ ಸುತ್ತಿನಲ್ಲಿ ಬೆಂಗಳೂರಿನ 15, ಉಡುಪಿಯ ಮೂವರು ಹಾಗೂ ದಕ್ಷಿಣ ಕನ್ನಡದ ಒಬ್ಬರು ಜಯ ಸಾಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಎದುರಾಳಿಯ ಆಟಗಾರನ ಪ್ರಬಲ ಪೈಪೋಟಿಯನ್ನು ಮೀರಿದ ಬೆಂಗಳೂರು ನಗರ ಜಿಲ್ಲೆಯ ವರುಣ್ ಜಿ.ಪಿ, ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಸೀನಿಯರ್ ಮತ್ತು 19 ವರ್ಷದೊಳಗಿನವರ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದರು.</p>.<p>ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಉರ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಸೋಮವಾರ ಎರಡೂ ವಿಭಾಗಗಳ ಮೂರನೇ ಸುತ್ತಿನಲ್ಲಿ ಅವರು ಭರ್ಜರಿ ಜಯ ಸಾಧಿಸಿದರು. ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ತೋಷನ್ ನಾಯಕ್ ವಿರುದ್ಧ 8–15, 15–11, 15–12ರಲ್ಲಿ ಗೆದ್ದ ಅವರು 19 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ತೇಜಸ್ ಎದುರು 15-10, 15-10ರ ಗೆಲುವು ದಾಖಲಿಸಿದರು. </p>.<p>ಬೆಂಗಳೂರಿನ ತಿಲಕ್ ಬಿ.ಶೆಟ್ಟಿ ಮತ್ತು ಹಾರ್ದಿಕ್ ಮೊಹಾಂತಿ ಕೂಡ ಎರಡೂ ವಿಭಾಗಗಳಲ್ಲಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರು. ಸೀನಿಯರ್ ವಿಭಾಗದಲ್ಲಿ ತಿಲಕ್ ಶೆಟ್ಟಿ ಬೆಂಗಳೂರಿನ ರೋಹನ್ ಶ್ರೀಸಾಯ್ ವಿರುದ್ಧ 15-11, 15-12ರಲ್ಲಿ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಆದಿತ್ಯ ಕುರುವಿಳ ವಿರುದ್ಧ 15-8, 15-11ರಲ್ಲಿ ಗೆದ್ದರು. ಹಾರ್ದಿಕ್ ಸೀನಿಯರ್ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ಪವನ್ ಅವರನ್ನು 15-9, 15-4ರಿಂದ, 19 ವರ್ಷದೊಳಗಿನವರ ವಿಭಾಗದಲ್ಲಿ ಗಣೇಶ್ ಬಾಬು ಅವರನ್ನು 15-9, 15-5ರಲ್ಲಿ ಮಣಿಸಿದರು.</p>.<p><strong>3ನೇ ಸುತ್ತಿನ ಇತರ ಫಲಿತಾಂಶಗಳು:</strong> ಸೀನಿಯರ್ ವಿಭಾಗ: ಬೆಂಗಳೂರಿನ ವರುಣ್ ಶ್ರೀರಾಮ್ಗೆ ನಿಖಿಲ್ ಪಿ.ಎಂ ವಿರುದ್ಧ 15-4, 15-8ರಲ್ಲಿ, ಮೈಸೂರಿನ ಗೌರವ್ಗೆ ಬೆಂಗಳೂರಿನ ಪ್ರದ್ಯುಮ್ ವಿರುದ್ಧ 15-12, 15-13ರಲ್ಲಿ, ಬೆಂಗಳೂರಿನ ಪ್ರಣವ್ಗೆ ಅರ್ಜುನ್ ವಿರುದ್ಧ 15-10, 15-11ರಲ್ಲಿ, ಮೈಸೂರಿನ ವಿಶಾಲ್ಗೆ ದಕ್ಷಿಣ ಕನ್ನಡದ ಗ್ಲ್ಯಾನಿಷ್ ವಿರುದ್ಧ 9-15, 15-12, 1-0ರಲ್ಲಿ, ಬೆಂಗಳೂರಿನ ಅತೀಕ್ಷ್ಗೆ ತ್ರಿಶ್ ವಿಠಲ್ ವಿರುದ್ಧ 15-7, 19-17ರಲ್ಲಿ, ಬೆಂಗಳೂರಿನ ಶ್ಯಾಮ್ ಬಿಂಡಿಗನವಿಲೆಗೆ ನರೈನ್ ವಿರುದ್ಧ 15-8, 15-6ರಲ್ಲಿ, ಬೆಂಗಳೂರಿನ ಶಮಂತ್ ರಾವ್ ಕದಿಯೂರ್ಗೆ ಸ್ವರೂಪ್ ಫಾಲಾಕ್ಷಯ್ಯ ವಿರುದ್ಧ 11-15, 15-9, 15-7ರಲ್ಲಿ, ಮೈಸೂರಿನ ಭುವನ್ಗೆ ಬೆಳಗಾವಿಯ ಮಹಿಮ್ ವಿರುದ್ಧ 15-8, 15-11ರಲ್ಲಿ, ಬೆಂಗಳೂರಿನ ರಾಘವೇಂದ್ರಗೆ ಯುವರಾಜ್ ವಿರುದ್ಧ 15-9, 15-8ರಲ್ಲಿ, ಬೆಂಗಳೂರಿನ ಕೌಶಿಕ್ ರೆಡ್ಡಿಗೆ ಸ್ವಯಂ ವಿರುದ್ಧ 15-6, 15-9ರಲ್ಲಿ, ದಕ್ಷಿಣ ಕನ್ನಡದ ಸಹರ್ಷ್ ಪ್ರಭುಗೆ ಬೆಂಗಳೂರಿನ ಸುಬುದ್ಧ್ ವಿರುದ್ಧ 14-16, 15-6, 15-10ರಲ್ಲಿ, ಕೊಡಗಿನ ಜೈದ್ಗೆ ಬೆಂಗಳೂರಿನ ಮೌರ್ಯ ವಿರುದ್ಧ 15-13, 15-11ರಲ್ಲಿ, ಬೆಂಗಳೂರಿನ ಪ್ರತೀಶ್ಗೆ ವಂಶಿಲ್ ವಿರುದ್ಧ 15-3, 15-4ರಲ್ಲಿ ಗೆಲುವು.</p>.<p><strong>19 ವರ್ಷದೊಳಗಿನವರು:</strong> ಬೆಂಗಳೂರಿನ ಇಂದ್ರಜ್ ವಿನೋದ್ಗೆ ಹರ್ಷಿಲ್ ಎದುರು 15-10, 15-11ರಲ್ಲಿ, ಬೆಂಗಳೂರಿನ ಕೊಂಟನೂರು ಶಿವರಾಜ್ಗೆ ಶ್ಯಾಮ್ಚರಣ್ ಎದುರು 15-11, 15-9ರಲ್ಲಿ, ಬೆಂಗಳೂರಿನ ಅದಿತ್ ಶೆಟ್ಟಿಗೆ ಪ್ರೀತಮ್ ಕುಮಾರ್ ಎದುರು 15-6, 10-15, 15-13ರಲ್ಲಿ, ಬೆಳಗಾವಿಯ ಮಹಿಮ್ಗೆ ದಕ್ಷಿಣ ಕನ್ನಡದ ಸಾತ್ವಿಕ್ ಪ್ರಭು ಎದುರು 15-11, 15-11ರಲ್ಲಿ, ಬೆಂಗಳೂರಿನ ತೋಷನ್ ನಾಯಕ್ಗೆ ತನ್ಮಯ್ ಎದುರು 17-15, 12-15, 15-10ರಲ್ಲಿ, ಬೆಂಗಳೂರಿನ ವಿಸ್ಮಯ್ ರಾಜ್ಗೆ ವಂಶಿಲ್ ಎದುರು 9-15, 15-13, 15-12ರಲ್ಲಿ, ಬೆಂಗಳೂರಿನ ಸ್ವಯಂಗೆ ಸುಜಿತ್ ಎದುರು 15-8, 13-15, 15-12ರಲ್ಲಿ, ಬೆಂಗಳೂರಿನ ಸ್ವರೂಪ್ ಫಾಲಾಕ್ಷಯ್ಯಗೆ ಮೊಹಮ್ಮದ್ ಸುಹಾನ್ ಎದುರು 15-6, 15-10ರಲ್ಲಿ, ಬೆಂಗಳೂರಿನ ಕರಣ್ಶ್ಗೆ ರಾಘವ್ ಎದುರು 15-12, 15-4ರಲ್ಲಿ, ಬೆಂಗಳೂರಿನ ಶ್ರೇಯಸ್ಗೆ ಅಭಿನವ್ ಎದುರು 15-7, 15-8ರಲ್ಲಿ, ದಕ್ಷಿಣ ಕನ್ನಡದ ನಿಕೇತನ್ ಅಮೀನ್ಗೆ ಬೆಂಗಳೂರಿನ ವಿಭು ಎದುರು 15-7, 15-7ರಲ್ಲಿ, ಬೆಂಗಳೂರು ಗ್ರಾಮಾಂತರದ ನೀಲೇಶ್ಗೆ ವೀರ್ ಎದುರು 15-9, 15-8ರಲ್ಲಿ ಜಯ. ಉಡುಪಿಯ ಕನಿಷ್ಕ್ಗೆ ವಾಕ್ ಓವರ್.</p>.<p>ಮಹಿಳೆಯರ ಮೊದಲ ಸುತ್ತಿನಲ್ಲಿ ಬೆಂಗಳೂರಿನ 15, ಉಡುಪಿಯ ಮೂವರು ಹಾಗೂ ದಕ್ಷಿಣ ಕನ್ನಡದ ಒಬ್ಬರು ಜಯ ಸಾಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>