<p><strong>ಬೆಂಗಳೂರು</strong>: ಯಶಸ್ಸಿನ ಓಟ ಮುಂದುವರಿಸಿದ ಹಿಮಾಂಶಿ ಚೌಧರಿ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 19 ವರ್ಷದೊಳಗಿನ ಬಾಲಕಿಯರ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು. ಹಿಮಾಂಶಿ ಅವರು ಸೋಮವಾರ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿಯೂ ಪ್ರಶಸ್ತಿ ಜಯಿಸಿದ್ದರು.</p>.<p>ಜಯನಗರ ಟೇಬಲ್ ಟೆನಿಸ್ ಸಂಸ್ಥೆ (ಜೆಟಿಟಿಎ) ಆಶ್ರಯದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಹಿಮಾಂಶಿ ಅವರು 13–11, 11–2, 9–11, 11–4, 11–8ರಿಂದ ತೃಪ್ತಿ ಪುರೋಹಿತ್ ಎದುರು ರೋಚಕ ಜಯ ಸಾಧಿಸಿ ಕಿರೀಟ ತಮ್ಮದಾಗಿಸಿಕೊಂಡರು.</p>.<p>ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ತೃಪ್ತಿ 11–4, 11–6, 11–5, 13–11ರಿಂದ ಸಹನಾ ಮೂರ್ತಿ ವಿರುದ್ಧ; ಹಿಮಾಂಶಿ 7–11, 8–11, 11–3, 11–13, 11– 7, 11–8, 11–6ರಿಂದ ವೇದಲಕ್ಷ್ಮಿ ವಿರುದ್ಧ ಜಯ ಸಾಧಿಸಿದ್ದರು.</p>.<p>19 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಹಿಮಾಂಶಿ ಅವರು 9–11, 11–3, 5–11, 11–7, 11–8, 11–2ರಿಂದ ಇರೆನ್ ಅನ್ನಾ ಸುಭಾಷ್ ಅವರನ್ನು ಪರಾಭವಗೊಳಿಸಿದರು.</p>.<p>ವರುಣ್ ಚಾಂಪಿಯನ್:</p>.<p>ವರುಣ್ ಕಶ್ಯಪ್ ಅವರು ಪುರುಷರ ವಿಭಾಗದಲ್ಲಿ 12–10, 8–11, 11–8, 7–11, 11–5, 11–5ರಿಂದ ಸಂಜಯ್ ಮಾಧವನ್ ಅವರನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ವರುಣ್ 8–11, 5–11, 11–7, 7–11, 12–10, 11–6, 11–7ರಿಂದ ಅಭಿನವ್ ಮೂರ್ತಿ ಎದುರು ಹಾಗೂ ಸಂಜಯ್ ಅವರು 11–5, 11–5, 10–12, 10–12, 11–8, 11–6ರಿಂದ ಯಶವಂತ್ ಎದುರು ಗೆಲುವು ಸಾಧಿಸಿದ್ದರು.</p>.<p>ಉದಯೋನ್ಮುಖ ಆಟಗಾರ ಅಭಿನವ್ ಮೂರ್ತಿ ಅವರು 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಪ್ರಶಸ್ತಿ ಸುತ್ತಿನಲ್ಲಿ ಅಭಿನವ್ ಅವರು 11–5, 6–11, 13–11, 11–7, 7–11, 11–8ರಿಂದ ಅಥರ್ವ ನವರಂಗೆ ಅವರನ್ನು ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯಶಸ್ಸಿನ ಓಟ ಮುಂದುವರಿಸಿದ ಹಿಮಾಂಶಿ ಚೌಧರಿ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 19 ವರ್ಷದೊಳಗಿನ ಬಾಲಕಿಯರ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು. ಹಿಮಾಂಶಿ ಅವರು ಸೋಮವಾರ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿಯೂ ಪ್ರಶಸ್ತಿ ಜಯಿಸಿದ್ದರು.</p>.<p>ಜಯನಗರ ಟೇಬಲ್ ಟೆನಿಸ್ ಸಂಸ್ಥೆ (ಜೆಟಿಟಿಎ) ಆಶ್ರಯದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಹಿಮಾಂಶಿ ಅವರು 13–11, 11–2, 9–11, 11–4, 11–8ರಿಂದ ತೃಪ್ತಿ ಪುರೋಹಿತ್ ಎದುರು ರೋಚಕ ಜಯ ಸಾಧಿಸಿ ಕಿರೀಟ ತಮ್ಮದಾಗಿಸಿಕೊಂಡರು.</p>.<p>ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ತೃಪ್ತಿ 11–4, 11–6, 11–5, 13–11ರಿಂದ ಸಹನಾ ಮೂರ್ತಿ ವಿರುದ್ಧ; ಹಿಮಾಂಶಿ 7–11, 8–11, 11–3, 11–13, 11– 7, 11–8, 11–6ರಿಂದ ವೇದಲಕ್ಷ್ಮಿ ವಿರುದ್ಧ ಜಯ ಸಾಧಿಸಿದ್ದರು.</p>.<p>19 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಹಿಮಾಂಶಿ ಅವರು 9–11, 11–3, 5–11, 11–7, 11–8, 11–2ರಿಂದ ಇರೆನ್ ಅನ್ನಾ ಸುಭಾಷ್ ಅವರನ್ನು ಪರಾಭವಗೊಳಿಸಿದರು.</p>.<p>ವರುಣ್ ಚಾಂಪಿಯನ್:</p>.<p>ವರುಣ್ ಕಶ್ಯಪ್ ಅವರು ಪುರುಷರ ವಿಭಾಗದಲ್ಲಿ 12–10, 8–11, 11–8, 7–11, 11–5, 11–5ರಿಂದ ಸಂಜಯ್ ಮಾಧವನ್ ಅವರನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ವರುಣ್ 8–11, 5–11, 11–7, 7–11, 12–10, 11–6, 11–7ರಿಂದ ಅಭಿನವ್ ಮೂರ್ತಿ ಎದುರು ಹಾಗೂ ಸಂಜಯ್ ಅವರು 11–5, 11–5, 10–12, 10–12, 11–8, 11–6ರಿಂದ ಯಶವಂತ್ ಎದುರು ಗೆಲುವು ಸಾಧಿಸಿದ್ದರು.</p>.<p>ಉದಯೋನ್ಮುಖ ಆಟಗಾರ ಅಭಿನವ್ ಮೂರ್ತಿ ಅವರು 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಪ್ರಶಸ್ತಿ ಸುತ್ತಿನಲ್ಲಿ ಅಭಿನವ್ ಅವರು 11–5, 6–11, 13–11, 11–7, 7–11, 11–8ರಿಂದ ಅಥರ್ವ ನವರಂಗೆ ಅವರನ್ನು ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>