<p><strong>ಬೆಂಗಳೂರು:</strong> ತಮನ್ನಾ ನೇರ್ಲಾಜೆ ಮತ್ತು ಅರ್ಣವ್ ಮಿಥುನ್ ಅವರು ಜೆಟಿಟಿಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್ ಬಾಲಕಿಯರ ಮತ್ತು ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.</p>.<p>ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ತಮನ್ನಾ 11-9, 14-12, 6-11, 11-9 ರಿಂದ ಸಮನ್ವಿ ಸಂದೀಪ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ತಮನ್ನಾ 5-11, 11-5, 11-9, 11-7 ರಿಂದ ಸಾನ್ವಿ ಹರಿಪ್ರಸಾದ್ ರಾವ್ ವಿರುದ್ಧ; ಸಮನ್ವಿ 2-11, 11-9, 11-8, 11-4 ರಿಂದ ನಂದನಾ ಬಂಡಿ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>ಅರ್ಣವ್ ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 12-10, 11-7, 9-11, 8-11, 11-6 ರಿಂದ ಶರ್ವಿಲ್ ಕರಂಬೆಲ್ಕರ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅರ್ಣವ್ 11-4, 11-5, 11-4 ರಿಂದ ಪೂರಬ್ ಬಿಸ್ವಾಸ್ ಎದುರು; ಶರ್ವಿಲ್ 11-1,11-4,11-6ರಿಂದ ಮುಕುಂದ್ ರಾವ್ ಎದುರು ಜಯ ಸಾಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಮನ್ನಾ ನೇರ್ಲಾಜೆ ಮತ್ತು ಅರ್ಣವ್ ಮಿಥುನ್ ಅವರು ಜೆಟಿಟಿಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್ ಬಾಲಕಿಯರ ಮತ್ತು ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.</p>.<p>ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ತಮನ್ನಾ 11-9, 14-12, 6-11, 11-9 ರಿಂದ ಸಮನ್ವಿ ಸಂದೀಪ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ತಮನ್ನಾ 5-11, 11-5, 11-9, 11-7 ರಿಂದ ಸಾನ್ವಿ ಹರಿಪ್ರಸಾದ್ ರಾವ್ ವಿರುದ್ಧ; ಸಮನ್ವಿ 2-11, 11-9, 11-8, 11-4 ರಿಂದ ನಂದನಾ ಬಂಡಿ ವಿರುದ್ಧ ಗೆಲುವು ಸಾಧಿಸಿದ್ದರು.</p>.<p>ಅರ್ಣವ್ ಅವರು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 12-10, 11-7, 9-11, 8-11, 11-6 ರಿಂದ ಶರ್ವಿಲ್ ಕರಂಬೆಲ್ಕರ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅರ್ಣವ್ 11-4, 11-5, 11-4 ರಿಂದ ಪೂರಬ್ ಬಿಸ್ವಾಸ್ ಎದುರು; ಶರ್ವಿಲ್ 11-1,11-4,11-6ರಿಂದ ಮುಕುಂದ್ ರಾವ್ ಎದುರು ಜಯ ಸಾಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>