<p><strong>ನವದೆಹಲಿ</strong>: ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯ ನಂತರ ಭಾರತ– ಪಾಕಿಸ್ತಾನ ನಡುವೆ ತ್ವೇಷದ ವಾತಾವರಣ ತಲೆದೋರಿದೆ. ಹೀಗಾಗಿ ಮುಂದಿನ ತಿಂಗಳ ಹೀರೊ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ಆಡುವುದು ಅನುಮಾನವಾಗಿದೆ.</p>.<p>ಆಗಸ್ಟ್ 27 ರಿಂದ ಸೆಪ್ಟೆಂಬರ್ 7ರವರೆಗೆ ಬಿಹಾರದ ರಾಜಗೀರ್ನಲ್ಲಿ ಈ ಟೂರ್ನಿ ನಿಗದಿಯಾಗಿದೆ. ಪಾಕ್ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಭಾರತ ಹಾಕಿ ಫೆಡರೇಷನ್ ಸರ್ಕಾರದ ಸಲಹೆಗೆ ಕಾಯುತ್ತಿದೆ. 12ನೇ ಆವೃತ್ತಿಯ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡದ ಜೊತೆ ಪಾಕಿಸ್ತಾನ, ಜಪಾನ್, ದಕ್ಷಿಣ ಕೊರಿಯಾ, ಚೀನಾ, ಮಲೇಷ್ಯಾ, ಒಮಾನ್ ಮತ್ತು ಚೀನಾ ತೈಪೆ ಭಾಗವಹಿಸಬೇಕಾಗಿದೆ.</p>.<p>ಈ ಟೂರ್ನಿಯು ಮುಂದಿನ ವರ್ಷ ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವ ಕಪ್ಗೆ ಅರ್ಹತೆ ಪಡೆಯುವ ತಂಡವನ್ನು ನಿರ್ಧರಿಸಲಿದೆ.</p>.<p>‘ಈಗಲೇ ಏನೂ ಹೇಳಲಾಗದು. ಆದರೆ ಈ ವಿಷಯಕ್ಕೆ ಸಂಬಂಧಿಸಿ ಸರ್ಕಾರದ ನಿರ್ದೇಶನವನ್ನು ನಾವು ಅನುಸರಿಸುತ್ತೇವೆ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ ಸಿಂಗ್ ಪಿಟಿಐಗೆ ತಿಳಿಸಿದರು.</p>.<p>‘ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಬರ್ಬರ ದಾಳಿ, ನಂತರ ಸಿಂಧೂರ್ ಕಾರ್ಯಾಚರಣೆಯ ಬಳಿಕ ನಾವು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಟೂರ್ನಿಗೆ ಇನ್ನೂ ಮೂರು ತಿಂಗಳ ಸಮಯ ಇದೆ’ ಎಂದರು.</p>.<p>ಒಂದು ವೇಳೆ ಪಾಕಿಸ್ತಾನಕ್ಕೆ ಭಾರತ ಪ್ರಯಾಣಕ್ಕೆ ಅನುಮತಿ ದೊರಕದಿದ್ದಲ್ಲಿ ಟೂರ್ನಿ ಏಳು ತಂಡಗಳಿಗೆ ಸೀಮಿತಗೊಳ್ಳಲಿದೆ. ಇಲ್ಲವೇ ತೆರವಾದ ಸ್ಥಾನಕ್ಕೆ ಇನ್ನೊಂದು ತಂಡವನ್ನು ಆಡಿಸಲೂ ಅವಕಾಶವಿದೆ. ಇದು ಏಷ್ಯನ್ ಹಾಕಿ ಫೆಡರೇಷನ್ ವಿವೇಚನೆಯನ್ನು ಅವಲಂಬಿಸಿದೆ.</p>.<p>2016ರ ಜೂನಿಯರ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆದ ವೇಳೆ ಪಾಕಿಸ್ತಾನ ಆಡಿರಲಿಲ್ಲ. ಆ ಟೂರ್ನಿಗೆ ಕೆಲವೇ ತಿಂಗಳ ಮೊದಲು ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಆ ಟೂರ್ನಿಯಲ್ಲಿ ಪಾಕಿಸ್ತಾನ ಬದಲು ಮಲೇಷ್ಯಾ ಆಡಿತ್ತು. ಆದರೆ ನಂತರ ಭಾರತದಲ್ಲಿ ನಡೆದ ಟೂರ್ನಿಗಳಲ್ಲಿ ಪಾಕ್ ತಂಡ ಭಾಗವಹಿಸಿತ್ತು.</p>.<p>ಉಭಯ ದೇಶಗಳ ಬಾಂಧವ್ಯ ಹದಗೆಟ್ಟಿರುವ ಕಾರಣ, ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಚೆನ್ನೈ ಮತ್ತು ಮಧುರೈಯಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್ನಲ್ಲೂ ಪಾಕಿಸ್ತಾನದ ಭಾಗವಹಿಸುವಿಕೆ ಮೇಲೆ ಪ್ರಶ್ನೆ ಅನುಮಾನಗಳನ್ನು ಮೂಡಿಸಿದೆ.</p>.<p>ಹೆಚ್ಚಿನ ಮಹತ್ವ: ಏಷ್ಯಾಕಪ್ ಟೂರ್ನಿಯು, ವಿಶ್ವಕಪ್ಗೆ ಕ್ವಾಲಿಫೈಯರ್ ಆಗಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಟೂರ್ನಿಯ ವಿಜೇತ ತಂಡ ವಿಶ್ವಕಪ್ಗೆ ನೇರ ಪ್ರವೇಶ ಪಡೆಯಲಿದೆ. ವಿಶ್ವಕಪ್ 2026ರ ಆಗಸ್ಟ್ 14 ರಿಂದ 30ರವರೆಗೆ ಬೆಲ್ಜಿಯಂನ ವಾವ್ ಮತ್ತು ನೆದರ್ಲೆಂಡ್ಸ್ನ ಆಮ್ಸ್ಟಲ್ವೀನ್ನಲ್ಲಿ ನಡೆಯಲಿದೆ.</p>.<p>ಐದು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ, ಟೂರ್ನಿಯ ಹಾಲಿ ಚಾಂಪಿಯನ್ ಸಹ ಆಗಿದೆ. ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಸಲ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯ ನಂತರ ಭಾರತ– ಪಾಕಿಸ್ತಾನ ನಡುವೆ ತ್ವೇಷದ ವಾತಾವರಣ ತಲೆದೋರಿದೆ. ಹೀಗಾಗಿ ಮುಂದಿನ ತಿಂಗಳ ಹೀರೊ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ಆಡುವುದು ಅನುಮಾನವಾಗಿದೆ.</p>.<p>ಆಗಸ್ಟ್ 27 ರಿಂದ ಸೆಪ್ಟೆಂಬರ್ 7ರವರೆಗೆ ಬಿಹಾರದ ರಾಜಗೀರ್ನಲ್ಲಿ ಈ ಟೂರ್ನಿ ನಿಗದಿಯಾಗಿದೆ. ಪಾಕ್ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಭಾರತ ಹಾಕಿ ಫೆಡರೇಷನ್ ಸರ್ಕಾರದ ಸಲಹೆಗೆ ಕಾಯುತ್ತಿದೆ. 12ನೇ ಆವೃತ್ತಿಯ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡದ ಜೊತೆ ಪಾಕಿಸ್ತಾನ, ಜಪಾನ್, ದಕ್ಷಿಣ ಕೊರಿಯಾ, ಚೀನಾ, ಮಲೇಷ್ಯಾ, ಒಮಾನ್ ಮತ್ತು ಚೀನಾ ತೈಪೆ ಭಾಗವಹಿಸಬೇಕಾಗಿದೆ.</p>.<p>ಈ ಟೂರ್ನಿಯು ಮುಂದಿನ ವರ್ಷ ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವ ಕಪ್ಗೆ ಅರ್ಹತೆ ಪಡೆಯುವ ತಂಡವನ್ನು ನಿರ್ಧರಿಸಲಿದೆ.</p>.<p>‘ಈಗಲೇ ಏನೂ ಹೇಳಲಾಗದು. ಆದರೆ ಈ ವಿಷಯಕ್ಕೆ ಸಂಬಂಧಿಸಿ ಸರ್ಕಾರದ ನಿರ್ದೇಶನವನ್ನು ನಾವು ಅನುಸರಿಸುತ್ತೇವೆ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ ಸಿಂಗ್ ಪಿಟಿಐಗೆ ತಿಳಿಸಿದರು.</p>.<p>‘ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಬರ್ಬರ ದಾಳಿ, ನಂತರ ಸಿಂಧೂರ್ ಕಾರ್ಯಾಚರಣೆಯ ಬಳಿಕ ನಾವು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಟೂರ್ನಿಗೆ ಇನ್ನೂ ಮೂರು ತಿಂಗಳ ಸಮಯ ಇದೆ’ ಎಂದರು.</p>.<p>ಒಂದು ವೇಳೆ ಪಾಕಿಸ್ತಾನಕ್ಕೆ ಭಾರತ ಪ್ರಯಾಣಕ್ಕೆ ಅನುಮತಿ ದೊರಕದಿದ್ದಲ್ಲಿ ಟೂರ್ನಿ ಏಳು ತಂಡಗಳಿಗೆ ಸೀಮಿತಗೊಳ್ಳಲಿದೆ. ಇಲ್ಲವೇ ತೆರವಾದ ಸ್ಥಾನಕ್ಕೆ ಇನ್ನೊಂದು ತಂಡವನ್ನು ಆಡಿಸಲೂ ಅವಕಾಶವಿದೆ. ಇದು ಏಷ್ಯನ್ ಹಾಕಿ ಫೆಡರೇಷನ್ ವಿವೇಚನೆಯನ್ನು ಅವಲಂಬಿಸಿದೆ.</p>.<p>2016ರ ಜೂನಿಯರ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆದ ವೇಳೆ ಪಾಕಿಸ್ತಾನ ಆಡಿರಲಿಲ್ಲ. ಆ ಟೂರ್ನಿಗೆ ಕೆಲವೇ ತಿಂಗಳ ಮೊದಲು ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಆ ಟೂರ್ನಿಯಲ್ಲಿ ಪಾಕಿಸ್ತಾನ ಬದಲು ಮಲೇಷ್ಯಾ ಆಡಿತ್ತು. ಆದರೆ ನಂತರ ಭಾರತದಲ್ಲಿ ನಡೆದ ಟೂರ್ನಿಗಳಲ್ಲಿ ಪಾಕ್ ತಂಡ ಭಾಗವಹಿಸಿತ್ತು.</p>.<p>ಉಭಯ ದೇಶಗಳ ಬಾಂಧವ್ಯ ಹದಗೆಟ್ಟಿರುವ ಕಾರಣ, ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಚೆನ್ನೈ ಮತ್ತು ಮಧುರೈಯಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್ನಲ್ಲೂ ಪಾಕಿಸ್ತಾನದ ಭಾಗವಹಿಸುವಿಕೆ ಮೇಲೆ ಪ್ರಶ್ನೆ ಅನುಮಾನಗಳನ್ನು ಮೂಡಿಸಿದೆ.</p>.<p>ಹೆಚ್ಚಿನ ಮಹತ್ವ: ಏಷ್ಯಾಕಪ್ ಟೂರ್ನಿಯು, ವಿಶ್ವಕಪ್ಗೆ ಕ್ವಾಲಿಫೈಯರ್ ಆಗಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಟೂರ್ನಿಯ ವಿಜೇತ ತಂಡ ವಿಶ್ವಕಪ್ಗೆ ನೇರ ಪ್ರವೇಶ ಪಡೆಯಲಿದೆ. ವಿಶ್ವಕಪ್ 2026ರ ಆಗಸ್ಟ್ 14 ರಿಂದ 30ರವರೆಗೆ ಬೆಲ್ಜಿಯಂನ ವಾವ್ ಮತ್ತು ನೆದರ್ಲೆಂಡ್ಸ್ನ ಆಮ್ಸ್ಟಲ್ವೀನ್ನಲ್ಲಿ ನಡೆಯಲಿದೆ.</p>.<p>ಐದು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ, ಟೂರ್ನಿಯ ಹಾಲಿ ಚಾಂಪಿಯನ್ ಸಹ ಆಗಿದೆ. ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಸಲ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>