ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ನ ಹಾಕಿಯಲ್ಲಿ ಭಾರತ ಪುರುಷ ಹಾಕಿ ತಂಡದ ಕಂಚಿನ ಪದಕ ಸಾಧನೆಯು ಎಲ್ಲ ಕ್ರಿಕೆಟ್ ವಿಶ್ವಕಪ್ ಗೆಲುವಿಗಿಂತಲೂ ಮಿಗಿಲಾದದ್ದು ಎಂದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿರುವ ಗಂಭೀರ್ ಇಂತಹದೊಂದು ಹೇಳಿಕೆಯು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಟ್ವೀಟ್ ಮಾಡಿರುವ ಗಂಭೀರ್, '1983, 2007, 2011 ಕ್ರಿಕೆಟ್ ವಿಶ್ವಕಪ್ ಗೆಲುವುಗಳನ್ನು ಮರೆತೇ ಬಿಡಿ. ಯಾವುದೇ ವಿಶ್ವಕಪ್ಗಿಂತಲೂ ಹಾಕಿ ಮಿಗಿಲಾಗಿದದ್ದು' ಎಂದು ಹೇಳಿದ್ದಾರೆ.