ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ | ದರ್ಶನ್‌, ಆಯುಷ್, ನೇಯ್ಸ ಎಂಟರ ಘಟ್ಟಕ್ಕೆ

Last Updated 14 ಏಪ್ರಿಲ್ 2022, 13:56 IST
ಅಕ್ಷರ ಗಾತ್ರ

ಬೆಂಗಳೂರು: ದರ್ಶನ್ ಪೂಜಾರಿ, ಆಯುಷ್ ಶೆಟ್ಟಿ ಮತ್ತು ನೇಯ್ಸ ಕಾರ್ಯಪ್ಪ ಅವರು ಅಖಿಲ ಭಾರತ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ದ್ರಾವಿಡ್–ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಗುರುವಾರ ನಡೆದ 16ರ ಘಟ್ಟದ ಬಾಲಕರ ವಿಭಾಗದ ಪಂದ್ಯದಲ್ಲಿ ದರ್ಶನ್ ಪೂಜಾರಿ 14-21, 21-17, 21-16ರಲ್ಲಿ ಪ್ರಣವ್ ರಾವ್ ಎದುರು ಜಯ ಗಳಿಸಿದರು. ಅಭಿಷೇಕ್ ಸಂತೋಷ್ ಕುಮಾರ್ ವಿರುದ್ಧ 21-10. 21-13ರಲ್ಲಿ ಗೆದ್ದರು. ಬಾಲಕಿಯರ ವಿಭಾಗದಲ್ಲಿ ನೈಶಾ ಕೌರ್ ಅವರನ್ನು ನೇಯ್ಸ 21-7, 21-10ರಲ್ಲಿ ಮಣಿಸಿದರು.

ಫಲಿತಾಂಶಗಳು
ಬಾಲಕರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌:
ದರ್ಶನ್ ಪೂಜಾರಿಗೆ ಪ್ರಣವ್‌ ರಾವ್‌ ವಿರುದ್ಧ 14-21, 21-17, 21-16ರಲ್ಲಿ ಗೆಲುವು, ಲಕ್ಷ್ಯ ಶರ್ಮಾಗೆ ಸಾತ್ವಿಕ್ ರೆಡ್ಡಿ ವಿರುದ್ಧ 21-17, 21-18ರಲ್ಲಿ ಜಯ, ಆಯುಷ್‌ ಶೆಟ್ಟಿಗೆ ಅಭಿಷೇಕ್ ಸಂತೋಷ್ ಕುಮಾರ್ ವಿರುದ್ಧ 21-10, 21-13ರಲ್ಲಿ ಜಯ, ಭರತ್ ರಾಘವ್‌ಗೆ ಶಶಾಂಕ್ ಸಾರಸ್ವತ್‌ ವಿರುದ್ಧ 21-14, 21-13ರಲ್ಲಿ ಗೆಲುವು.

ಬಾಲಕಿಯರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌: ಉನ್ನತಿ ಹೂಡಾಗೆ ಮೌನಿತಾ ಎ.ಎಸ್‌ ವಿರುದ್ಧ 21-19, 21-8ರಲ್ಲಿ ಜಯ, ದೇವಿಕಾ ಸಿಹಾಗ್‌ಗೆ ಮೇಘನಾ ರೆಡ್ಡಿ ವಿರುದ್ಧ 21-7, 21-10ರಲ್ಲಿ ಜಯ, ರಕ್ಷಿತ ಶ್ರೀಗೆ ಸಾಕ್ಷಿ ಪೋಗಟ್‌ ವಿರುದ್ಧ 21-17, 21-13ರಲ್ಲಿ ಜಯ, ನೇಯ್ಸ ಕಾರ್ಯಪ್ಪಗೆ ನೈಶಾ ಕೌರ್‌ ವಿರುದ್ಧ 21-7, 21-10ರಲ್ಲಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT