<p><strong>ಬೆಂಗಳೂರು:</strong> ಗುಂಡಿಗಳಿಂದಾಗಿ ಚರ್ಚೆಗೆ ಗ್ರಾಸವಾಗಿದ್ದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಅಂತೂ ಇಂತೂ ಹೊಸ ರೂಪ ಪಡೆದುಕೊಳ್ಳಲಿದೆ. ಹೊಸ ಹೊದಿಕೆ ಹಾಕುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.</p>.<p>‘ಟ್ರ್ಯಾಕ್ಗೆ ಹೊಸ ಹೊದಿಕೆ ಹಾಕಲು ಸರ್ಕಾರವು ₹ 4.98 ಕೋಟಿ ಮಂಜೂರು ಮಾಡಿದೆ. ಬಾಲಾಜಿ ಸ್ಪೋರ್ಟ್ಸ್ ಸಂಸ್ಥೆ ಕಾಮಗಾರಿ ನಿರ್ವಹಿಸಲಿದೆ. ಸೋಮವಾರ ಕಾರ್ಯಾರಂಭವಾಗಲಿದ್ದು, 90 ದಿನಗಳೊಳಗೆ ಸಂಪೂರ್ಣಗೊಳಿಸುವುದು ಕಡ್ಡಾಯ’ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ರಾಜವೇಲು ತಿಳಿಸಿದ್ದಾರೆ.</p>.<p>ಕಳಪೆ ಟ್ರ್ಯಾಕ್ ಕಾರಣದಿಂದಾಗಿ ಹೋದ ವರ್ಷ ಇಲ್ಲಿ ಆಯೋಜನೆಗೊಳ್ಳಬೇಕಾಗಿದ್ದ ರಾಷ್ಟ್ರಮಟ್ಟದ ಅಥ್ಲೆಟಿಕ್ ಕೂಟವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಲಾಗಿತ್ತು. ರಾಜ್ಯ ಅಥ್ಲೆಟಿಕ್ ಸಂಸ್ಥೆಯು ಭಾರತಅಥ್ಲೆಟಿಕ್ ಫೆಡರೇಷನ್ ಅಸಮಾಧಾನಕ್ಕೂ ಗುರಿಯಾಗಿತ್ತು.</p>.<p>ಇದೀಗ ಕಾಮಗಾರಿಯು, ಒಪ್ಪಂದದ ಪ್ರಕಾರ ಜೂನ್ ಅಂತ್ಯದ ವೇಳೆಗೆ ಸಂಪೂರ್ಣವಾಗುವ ನಿರೀಕ್ಷೆ ಇದೆ. ಅದರ ನಂತರ ಇಲ್ಲಿ ರಾಷ್ಟ್ರಮಟ್ಟದ ಕೂಟಗಳು ಆಯೋಜನೆಗೊಳ್ಳಲು ಅವಕಾಶವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗುಂಡಿಗಳಿಂದಾಗಿ ಚರ್ಚೆಗೆ ಗ್ರಾಸವಾಗಿದ್ದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಅಂತೂ ಇಂತೂ ಹೊಸ ರೂಪ ಪಡೆದುಕೊಳ್ಳಲಿದೆ. ಹೊಸ ಹೊದಿಕೆ ಹಾಕುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.</p>.<p>‘ಟ್ರ್ಯಾಕ್ಗೆ ಹೊಸ ಹೊದಿಕೆ ಹಾಕಲು ಸರ್ಕಾರವು ₹ 4.98 ಕೋಟಿ ಮಂಜೂರು ಮಾಡಿದೆ. ಬಾಲಾಜಿ ಸ್ಪೋರ್ಟ್ಸ್ ಸಂಸ್ಥೆ ಕಾಮಗಾರಿ ನಿರ್ವಹಿಸಲಿದೆ. ಸೋಮವಾರ ಕಾರ್ಯಾರಂಭವಾಗಲಿದ್ದು, 90 ದಿನಗಳೊಳಗೆ ಸಂಪೂರ್ಣಗೊಳಿಸುವುದು ಕಡ್ಡಾಯ’ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ರಾಜವೇಲು ತಿಳಿಸಿದ್ದಾರೆ.</p>.<p>ಕಳಪೆ ಟ್ರ್ಯಾಕ್ ಕಾರಣದಿಂದಾಗಿ ಹೋದ ವರ್ಷ ಇಲ್ಲಿ ಆಯೋಜನೆಗೊಳ್ಳಬೇಕಾಗಿದ್ದ ರಾಷ್ಟ್ರಮಟ್ಟದ ಅಥ್ಲೆಟಿಕ್ ಕೂಟವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಲಾಗಿತ್ತು. ರಾಜ್ಯ ಅಥ್ಲೆಟಿಕ್ ಸಂಸ್ಥೆಯು ಭಾರತಅಥ್ಲೆಟಿಕ್ ಫೆಡರೇಷನ್ ಅಸಮಾಧಾನಕ್ಕೂ ಗುರಿಯಾಗಿತ್ತು.</p>.<p>ಇದೀಗ ಕಾಮಗಾರಿಯು, ಒಪ್ಪಂದದ ಪ್ರಕಾರ ಜೂನ್ ಅಂತ್ಯದ ವೇಳೆಗೆ ಸಂಪೂರ್ಣವಾಗುವ ನಿರೀಕ್ಷೆ ಇದೆ. ಅದರ ನಂತರ ಇಲ್ಲಿ ರಾಷ್ಟ್ರಮಟ್ಟದ ಕೂಟಗಳು ಆಯೋಜನೆಗೊಳ್ಳಲು ಅವಕಾಶವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>