‘ತಮಗೆ ನೀಡಿರುವ ಡಿಜಿಟಲ್ ಡಿವೈಸ್ನ ಸಹಾಯದಿಂದ ಪಂದ್ಯದ ಸ್ಕೋರ್ ತಿರುಚುವಂತೆ2018ರಲ್ಲಿ ಬೆಲಾರ್ಡಿ ಅವರನ್ನು ಅಪರಿಚಿತ ವ್ಯಕ್ತಿಗಳು ಎರಡು ಬಾರಿ ಸಂಪರ್ಕಿಸಿದ್ದರು. ಅದಕ್ಕೆ ಬೆಲಾರ್ಡಿ ಒಪ್ಪಿರಲಿಲ್ಲ. ಆದರೆ ಆ ವ್ಯಕ್ತಿಗಳು ತಮ್ಮನ್ನು ಭ್ರಷ್ಟಾಚಾರಕ್ಕೆ ಪ್ರೇರೇಪಿಸಿದ್ದರ ಕುರಿತ ಮಾಹಿತಿಯನ್ನು ಅವರು ನಮಗೆ ನೀಡಿರಲಿಲ್ಲ. ಇದು ಅಕ್ಷಮ್ಯ ಅಪರಾಧ. ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ₹3.81 ಲಕ್ಷ ದಂಡವನ್ನೂ ವಿಧಿಸಲಾಗಿದೆ’ ಎಂದು ಟಿಐಯು ಹೇಳಿದೆ.