<p><strong>ಬೆಂಗಳೂರು: </strong>ಹಸಿ, ಒಣ ಹಾಗೂ ನೈರ್ಮಲ್ಯ (ಸ್ಯಾನಿಟರಿ) ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಮಾಡದವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ವಿಧಿಸುತ್ತಿರುವ ದಂಡ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.</p>.<p>ಈ ಕುರಿತ ಪ್ರಸ್ತಾವವನ್ನು ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.</p>.<p>‘ಕಸ ನಿರ್ವಹಣೆಯ ಹೊಸ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಗುತ್ತಿಗೆದಾರರನ್ನು ನೇಮಿಸಿದ ಬಳಿಕ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಿದ್ದೇವೆ’ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈಗ ಇರುವ ದಂಡದ ಮೊತ್ತವನ್ನು ಐದು ಪಟ್ಟು ಹೆಚ್ಚಿಸುವಂತೆ ನಾವು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಎಷ್ಟು ಪಟ್ಟು ಹೆಚ್ಚಳ ಮಾಡಲು ಅವರು ಒಪ್ಪಿಗೆ ನೀಡುತ್ತಾರೋ ಗೊತ್ತಿಲ್ಲ. ಈ ಪ್ರಸ್ತಾಪಕ್ಕೆ ಅನುಮೋದನೆ ಸಿಗುವವರೆಗೆ ಪ್ರಸ್ತುತ ಜಾರಿಯಲ್ಲಿರುವಷ್ಟು ದಂಡವನ್ನು ವಸೂಲಿ ಮಾಡುತ್ತೇವೆ’ ಎಂದು ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ತಿಳಿಸಿದರು.</p>.<p>‘ಪ್ರಸ್ತುತ ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷರು ಪ್ರಸ್ತುತ ಉದ್ದಿಮೆ ಪರವಾನಗಿ ನೀಡುವುದು ಹಾಗೂ ಪ್ಲಾಸ್ಟಿಕ್ ನಿಷೇಧ ಜಾರಿಯಂತಹ ಕಾರ್ಯದಲ್ಲಿ ಮಾತ್ರ ತೊಡಗಿದ್ದರು. ಕಸ ವಿಲೇವಾರಿ ಬಗ್ಗೆ ನಿಗಾ ಇಡುವುದಕ್ಕೂ ಅವರ ಸೇವೆ ಬಳಸಿ<br />ಕೊಳ್ಳಲಿದ್ದೇವೆ’ ಎಂದು ತಿಳಿಸಿದರು.</p>.<p>ತ್ಯಾಜ್ಯ ನಿರ್ವಹಣೆ ಟೆಂಡರ್ ಷರತ್ತುಗಳಿಗೆ ಪಾಲಿಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾದ ಬಳಿಕ ಈ ಷರತ್ತುಗಳನ್ನು ಪರಿಶೀಲನೆಗೆ ಒಳಪಡಿಸಲು ಮೇಯರ್ ಗಂಗಾಂಬಿಕೆ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸಭೆಯಲ್ಲಿ ಕಸ ನಿರ್ವಹಣೆ ಕುರಿತ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ.</p>.<p>ಹಸಿ ಕಸ ಹಾಗೂ ಒಣ ಕಸವನ್ನು ಸಂಗ್ರಹಿಸಲು ಪ್ರತ್ಯೇಕ ಟೆಂಡರ್ ಕರೆಯುವ ಕುರಿತು ಕೆಲವು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ<br />ದ್ದರು. ಆದರೆ, ಇದು ಏಕೆ ಅನಿವಾರ್ಯ ಎಂಬುದನ್ನು ಪಾಲಿಕೆ ಆಯುಕ್ತರು ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.</p>.<p>ಹೋಟೆಲ್, ಕಲ್ಯಾಣಮಂಟಪಗಳು, ಅಂಗಡಿಗಳಲ್ಲಿ ಉತ್ಪಾದನೆಯಾಗುವ ಸಗಟು ಕಸವನ್ನು (10 ಕೆ.ಜಿ.ಗಿಂತ ಹೆಚ್ಚು) ಪೌರಕಾರ್ಮಿಕರು<br />ಸ್ವೀಕರಿಸುವುದಿಲ್ಲ. ಇಂತಹ ಕಸ ಸಂಗ್ರಹಣೆಗೆ 20 ಮಂದಿ ಏಜೆನ್ಸಿಗಳನ್ನು ಪಾಲಿಕೆ ಗುರುತಿಸಿದೆ.</p>.<p>‘ಸಗಟು ಕಸ ಸ್ವೀಕರಿಸುವವರು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅದನ್ನೂ ಪಾಲಿಕೆಯ ಕಸ ನಿರ್ವಹಣಾ ಘಟಕಗಳಿಗೇ ಸಾಗಿಸಲಾಗುತ್ತಿದೆ. ಅದರ ಬದಲು ಬಿಬಿಎಂಪಿ ವತಿಯಿಂದಲೇ ಸಂಗ್ರಹಿಸಬೇಕು’ ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಕುರಿತು ಪರಿಶೀಲಿಸವುದಾಗಿ ಅಧಿಕಾರಿಗಳು ಭರವಸೆ ನೀಡಿದರು.</p>.<p>ರಾಕ್ ಕ್ರಿಸ್ಟಲ್ ಎಂಬ ಸಂಸ್ಥೆ ಕಟ್ಟಡ ತ್ಯಾಜ್ಯದಿಂದ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಕಟ್ಟಡ ಕೆಡಹುವವರು ಈ ಸಂಸ್ಥೆಗೆ ತ್ಯಾಜ್ಯವನ್ನು ನೀಡಲು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ‘ಕಟ್ಟಡ ತ್ಯಾಜ್ಯ ಮರುಬಳಕೆ ಮಾಡುವ ಇನ್ನಷ್ಟು ಸಂಸ್ಥೆಗಳಿಗೆ ಭಗ್ನಾವಶೇಷಗಳನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು’ ಎಂಬ ಬಗ್ಗೆಯೂ ಚರ್ಚೆ ನಡೆಯಿತು.</p>.<p><strong>ಯಾವುದಕ್ಕೆ ಎಷ್ಟು ದಂಡ? (ಪ್ರಸ್ತುತ ಜಾರಿಯಲ್ಲಿರುವುದು)</strong></p>.<p>ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದು, ಉಗುಳುವುದು, ಮೂತ್ರ ವಿಸರ್ಜನೆ, ಬಯಲು ಶೌಚ; ₹ 100; ₹ 200</p>.<p>ಪೌರಕಾರ್ಮಿಕರಿಗೆ ಮನೆಯ ಕಸವನ್ನು ವಿಂಗಡಿಸಿ ನೀಡದಿರುವುದು; ₹ 100; ₹ 500</p>.<p>ವಾಣಿಜ್ಯ ಮಳಿಗೆಗಳು ಸಗಟು ತ್ಯಾಜ್ಯ ವಿಂಗಡಿಸಿ ನೀಡದಿರುವುದು; ₹ 500; ₹ 1000</p>.<p>ಉದ್ಯಾನ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ ಸಮರ್ಪಕವಾಗಿ ವಿಲೇ ಮಾಡದಿರುವುದು; ₹ 500; ₹ 1000</p>.<p>ಕಳಪೆ / ಕೊಳೆತ ತ್ಯಾಜ್ಯ ಶೇಖರಣೆ; ₹ 100; ₹ 200</p>.<p>ಬೀದಿಗಳಿಗೆ ಕೊಳಚೆ ಹರಿಸುವುದು: ₹ 100 : ₹200</p>.<p>ಸತ್ತ ಪ್ರಾಣಿ, ಕೊಳೆತ ವಸ್ತುಗಳ ಅವೈಜ್ಞಾನಿಕ ವಿಲೇವಾರಿ: ₹ 100: ₹200</p>.<p>ಕಟ್ಟಡ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ: ₹ 1000; ₹ 5000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹಸಿ, ಒಣ ಹಾಗೂ ನೈರ್ಮಲ್ಯ (ಸ್ಯಾನಿಟರಿ) ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಮಾಡದವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ವಿಧಿಸುತ್ತಿರುವ ದಂಡ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.</p>.<p>ಈ ಕುರಿತ ಪ್ರಸ್ತಾವವನ್ನು ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.</p>.<p>‘ಕಸ ನಿರ್ವಹಣೆಯ ಹೊಸ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಗುತ್ತಿಗೆದಾರರನ್ನು ನೇಮಿಸಿದ ಬಳಿಕ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಿದ್ದೇವೆ’ ಎಂದು ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈಗ ಇರುವ ದಂಡದ ಮೊತ್ತವನ್ನು ಐದು ಪಟ್ಟು ಹೆಚ್ಚಿಸುವಂತೆ ನಾವು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಎಷ್ಟು ಪಟ್ಟು ಹೆಚ್ಚಳ ಮಾಡಲು ಅವರು ಒಪ್ಪಿಗೆ ನೀಡುತ್ತಾರೋ ಗೊತ್ತಿಲ್ಲ. ಈ ಪ್ರಸ್ತಾಪಕ್ಕೆ ಅನುಮೋದನೆ ಸಿಗುವವರೆಗೆ ಪ್ರಸ್ತುತ ಜಾರಿಯಲ್ಲಿರುವಷ್ಟು ದಂಡವನ್ನು ವಸೂಲಿ ಮಾಡುತ್ತೇವೆ’ ಎಂದು ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ತಿಳಿಸಿದರು.</p>.<p>‘ಪ್ರಸ್ತುತ ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷರು ಪ್ರಸ್ತುತ ಉದ್ದಿಮೆ ಪರವಾನಗಿ ನೀಡುವುದು ಹಾಗೂ ಪ್ಲಾಸ್ಟಿಕ್ ನಿಷೇಧ ಜಾರಿಯಂತಹ ಕಾರ್ಯದಲ್ಲಿ ಮಾತ್ರ ತೊಡಗಿದ್ದರು. ಕಸ ವಿಲೇವಾರಿ ಬಗ್ಗೆ ನಿಗಾ ಇಡುವುದಕ್ಕೂ ಅವರ ಸೇವೆ ಬಳಸಿ<br />ಕೊಳ್ಳಲಿದ್ದೇವೆ’ ಎಂದು ತಿಳಿಸಿದರು.</p>.<p>ತ್ಯಾಜ್ಯ ನಿರ್ವಹಣೆ ಟೆಂಡರ್ ಷರತ್ತುಗಳಿಗೆ ಪಾಲಿಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾದ ಬಳಿಕ ಈ ಷರತ್ತುಗಳನ್ನು ಪರಿಶೀಲನೆಗೆ ಒಳಪಡಿಸಲು ಮೇಯರ್ ಗಂಗಾಂಬಿಕೆ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸಭೆಯಲ್ಲಿ ಕಸ ನಿರ್ವಹಣೆ ಕುರಿತ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ.</p>.<p>ಹಸಿ ಕಸ ಹಾಗೂ ಒಣ ಕಸವನ್ನು ಸಂಗ್ರಹಿಸಲು ಪ್ರತ್ಯೇಕ ಟೆಂಡರ್ ಕರೆಯುವ ಕುರಿತು ಕೆಲವು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ<br />ದ್ದರು. ಆದರೆ, ಇದು ಏಕೆ ಅನಿವಾರ್ಯ ಎಂಬುದನ್ನು ಪಾಲಿಕೆ ಆಯುಕ್ತರು ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.</p>.<p>ಹೋಟೆಲ್, ಕಲ್ಯಾಣಮಂಟಪಗಳು, ಅಂಗಡಿಗಳಲ್ಲಿ ಉತ್ಪಾದನೆಯಾಗುವ ಸಗಟು ಕಸವನ್ನು (10 ಕೆ.ಜಿ.ಗಿಂತ ಹೆಚ್ಚು) ಪೌರಕಾರ್ಮಿಕರು<br />ಸ್ವೀಕರಿಸುವುದಿಲ್ಲ. ಇಂತಹ ಕಸ ಸಂಗ್ರಹಣೆಗೆ 20 ಮಂದಿ ಏಜೆನ್ಸಿಗಳನ್ನು ಪಾಲಿಕೆ ಗುರುತಿಸಿದೆ.</p>.<p>‘ಸಗಟು ಕಸ ಸ್ವೀಕರಿಸುವವರು ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅದನ್ನೂ ಪಾಲಿಕೆಯ ಕಸ ನಿರ್ವಹಣಾ ಘಟಕಗಳಿಗೇ ಸಾಗಿಸಲಾಗುತ್ತಿದೆ. ಅದರ ಬದಲು ಬಿಬಿಎಂಪಿ ವತಿಯಿಂದಲೇ ಸಂಗ್ರಹಿಸಬೇಕು’ ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಕುರಿತು ಪರಿಶೀಲಿಸವುದಾಗಿ ಅಧಿಕಾರಿಗಳು ಭರವಸೆ ನೀಡಿದರು.</p>.<p>ರಾಕ್ ಕ್ರಿಸ್ಟಲ್ ಎಂಬ ಸಂಸ್ಥೆ ಕಟ್ಟಡ ತ್ಯಾಜ್ಯದಿಂದ ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಕಟ್ಟಡ ಕೆಡಹುವವರು ಈ ಸಂಸ್ಥೆಗೆ ತ್ಯಾಜ್ಯವನ್ನು ನೀಡಲು ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ‘ಕಟ್ಟಡ ತ್ಯಾಜ್ಯ ಮರುಬಳಕೆ ಮಾಡುವ ಇನ್ನಷ್ಟು ಸಂಸ್ಥೆಗಳಿಗೆ ಭಗ್ನಾವಶೇಷಗಳನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು’ ಎಂಬ ಬಗ್ಗೆಯೂ ಚರ್ಚೆ ನಡೆಯಿತು.</p>.<p><strong>ಯಾವುದಕ್ಕೆ ಎಷ್ಟು ದಂಡ? (ಪ್ರಸ್ತುತ ಜಾರಿಯಲ್ಲಿರುವುದು)</strong></p>.<p>ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದು, ಉಗುಳುವುದು, ಮೂತ್ರ ವಿಸರ್ಜನೆ, ಬಯಲು ಶೌಚ; ₹ 100; ₹ 200</p>.<p>ಪೌರಕಾರ್ಮಿಕರಿಗೆ ಮನೆಯ ಕಸವನ್ನು ವಿಂಗಡಿಸಿ ನೀಡದಿರುವುದು; ₹ 100; ₹ 500</p>.<p>ವಾಣಿಜ್ಯ ಮಳಿಗೆಗಳು ಸಗಟು ತ್ಯಾಜ್ಯ ವಿಂಗಡಿಸಿ ನೀಡದಿರುವುದು; ₹ 500; ₹ 1000</p>.<p>ಉದ್ಯಾನ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ ಸಮರ್ಪಕವಾಗಿ ವಿಲೇ ಮಾಡದಿರುವುದು; ₹ 500; ₹ 1000</p>.<p>ಕಳಪೆ / ಕೊಳೆತ ತ್ಯಾಜ್ಯ ಶೇಖರಣೆ; ₹ 100; ₹ 200</p>.<p>ಬೀದಿಗಳಿಗೆ ಕೊಳಚೆ ಹರಿಸುವುದು: ₹ 100 : ₹200</p>.<p>ಸತ್ತ ಪ್ರಾಣಿ, ಕೊಳೆತ ವಸ್ತುಗಳ ಅವೈಜ್ಞಾನಿಕ ವಿಲೇವಾರಿ: ₹ 100: ₹200</p>.<p>ಕಟ್ಟಡ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ: ₹ 1000; ₹ 5000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>