<p><strong>ಹೆಸರಘಟ್ಟ:</strong> ಹುಟ್ಟಿದ್ದು ಕೇರಳದಲ್ಲಿ, ಮಾತೃಭಾಷೆ ಮಲೆಯಾಳಂ ಆದರೂ ಕನ್ನಡದಲ್ಲಿ 122 ಅಂಕ ಗಳಿಸುವ ಮೂಲಕ ಆರ್.ರಮ್ಯಾ ಸಾಧನೆ ಮಾಡಿದ್ದಾಳೆ.</p>.<p>ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ, ಕನ್ನಡ ಮಾಧ್ಯಮದಲ್ಲಿ ಓದಿದ ಈ ಬಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಗಳಿಸಿದ್ದಾಳೆ. ಇವಳು ಬಿಳಿಜಾಜಿಗ್ರಾಮದ ನಿವಾಸಿ ರಘು ಮತ್ತು ಸುಮಾ ದಂಪತಿ ಎರಡನೆ ಮಗಳು.</p>.<p>ಜೀವನ ನಿರ್ವಹಣೆಗಾಗಿ ಕೇರಳದಿಂದ ಹದಿನೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ರಘು ಅವರು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಿದರು.</p>.<p>ರಮ್ಯಾ 1ನೇ ತರಗತಿಯಿಂದ 5ನೇ ತರಗತಿಯ ವರೆಗೆ ಲಗ್ಗೆರೆಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿದಳು. ಬಳಿಕ ಹೆಸರಘಟ್ಟದಲ್ಲಿನ ನ್ಯಾಷನಲ್ ಸ್ಕೂಲ್ಗೆ ಸೇರಿ, ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಳು.</p>.<p>‘ಕನ್ನಡ ಮೇಷ್ಟ್ರುಗಳು ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು. ಅದರಿಂದ ಭಾಷೆಯಲ್ಲಿ ಆಸಕ್ತಿ ಹುಟ್ಟಿತು. ಕನ್ನಡದಲ್ಲಿನ ಪದ್ಯಗಳೆಂದರೆ ನನಗೆ ಬಹಳ ಇಷ್ಟ. ಜಿ.ಪಿ.ರಾಜರತ್ನಂ ಅವರ ‘ಬಣ್ಣದ ತಗಡಿನ ತುತ್ತೂರಿ’ ಪದ್ಯವನ್ನು ಆಗಾಗ ಗುನುಗುತ್ತಿರುತ್ತೇನೆ’ ಎನ್ನುತ್ತಾರೆ ವಿದ್ಯಾರ್ಥಿನಿ ರಮ್ಯಾ.</p>.<p>‘ಕನ್ನಡದ ನೆಲ ಬದುಕು ನೀಡಿದೆ. ಮಗಳನ್ನು ಐಎಎಸ್ ಅಧಿಕಾರಿ ಆಗಿಸುವ ಆಸೆ ಇದೆ’ ಎನ್ನುತ್ತಾರೆ ಪೋಷಕರು.</p>.<p>ರಮ್ಯಾ ಈಗ ತೋಟಗೆರೆಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದ್ದಾಳೆ. ಇವಳಿಗೆ ಉಚಿತವಾಗಿ ಪಿ.ಯು.ಸಿ. ಶಿಕ್ಷಣ ನೀಡುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಆನಂದ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ:</strong> ಹುಟ್ಟಿದ್ದು ಕೇರಳದಲ್ಲಿ, ಮಾತೃಭಾಷೆ ಮಲೆಯಾಳಂ ಆದರೂ ಕನ್ನಡದಲ್ಲಿ 122 ಅಂಕ ಗಳಿಸುವ ಮೂಲಕ ಆರ್.ರಮ್ಯಾ ಸಾಧನೆ ಮಾಡಿದ್ದಾಳೆ.</p>.<p>ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ, ಕನ್ನಡ ಮಾಧ್ಯಮದಲ್ಲಿ ಓದಿದ ಈ ಬಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಗಳಿಸಿದ್ದಾಳೆ. ಇವಳು ಬಿಳಿಜಾಜಿಗ್ರಾಮದ ನಿವಾಸಿ ರಘು ಮತ್ತು ಸುಮಾ ದಂಪತಿ ಎರಡನೆ ಮಗಳು.</p>.<p>ಜೀವನ ನಿರ್ವಹಣೆಗಾಗಿ ಕೇರಳದಿಂದ ಹದಿನೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ರಘು ಅವರು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಿದರು.</p>.<p>ರಮ್ಯಾ 1ನೇ ತರಗತಿಯಿಂದ 5ನೇ ತರಗತಿಯ ವರೆಗೆ ಲಗ್ಗೆರೆಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿದಳು. ಬಳಿಕ ಹೆಸರಘಟ್ಟದಲ್ಲಿನ ನ್ಯಾಷನಲ್ ಸ್ಕೂಲ್ಗೆ ಸೇರಿ, ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಳು.</p>.<p>‘ಕನ್ನಡ ಮೇಷ್ಟ್ರುಗಳು ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು. ಅದರಿಂದ ಭಾಷೆಯಲ್ಲಿ ಆಸಕ್ತಿ ಹುಟ್ಟಿತು. ಕನ್ನಡದಲ್ಲಿನ ಪದ್ಯಗಳೆಂದರೆ ನನಗೆ ಬಹಳ ಇಷ್ಟ. ಜಿ.ಪಿ.ರಾಜರತ್ನಂ ಅವರ ‘ಬಣ್ಣದ ತಗಡಿನ ತುತ್ತೂರಿ’ ಪದ್ಯವನ್ನು ಆಗಾಗ ಗುನುಗುತ್ತಿರುತ್ತೇನೆ’ ಎನ್ನುತ್ತಾರೆ ವಿದ್ಯಾರ್ಥಿನಿ ರಮ್ಯಾ.</p>.<p>‘ಕನ್ನಡದ ನೆಲ ಬದುಕು ನೀಡಿದೆ. ಮಗಳನ್ನು ಐಎಎಸ್ ಅಧಿಕಾರಿ ಆಗಿಸುವ ಆಸೆ ಇದೆ’ ಎನ್ನುತ್ತಾರೆ ಪೋಷಕರು.</p>.<p>ರಮ್ಯಾ ಈಗ ತೋಟಗೆರೆಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದ್ದಾಳೆ. ಇವಳಿಗೆ ಉಚಿತವಾಗಿ ಪಿ.ಯು.ಸಿ. ಶಿಕ್ಷಣ ನೀಡುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಆನಂದ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>