<p><strong>ಬೆಂಗಳೂರು</strong>: ‘ಪ್ರಪಂಚದ ಹೆಚ್ಚಿನ ದೇಶಗಳು ಅಂಧಕಾರ ಯುಗದಲ್ಲಿದ್ದಾಗಲೇ ನಮ್ಮ ದೇಶದಲ್ಲಿಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಚಿರಪರಿಚಿತವಾಗಿತ್ತು. ಭೌತ ವಿಜ್ಞಾನ, ತಂತ್ರ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ಖಗೋಳ ಶಾಸ್ತ್ರದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿತ್ತು’ ಎಂದು ಸಾಹಿತಿ ಡಾ. ವಿಜಯಾ ಸುಬ್ಬರಾಜ್ ತಿಳಿಸಿದರು.</p>.<p>ಬಿ.ಎಂ.ಶ್ರೀ. ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಮನು (ಪಿ.ವಿ. ರಂಗನ್) ಅವರ ಹೊಸ ಪರಿಕಲ್ಪನೆಯ ಕೃತಿ ‘ಮಹಾಸಂಪರ್ಕ’ದ ಕುರಿತು ಉಪನ್ಯಾಸ ನೀಡಿದರು.</p>.<p>‘ಸಿಂಧೂ ಕಣಿವೆಯ ನಾಗರಿಕತೆಯೇ ನಮ್ಮ ಜನಾಂಗ ಎಷ್ಟು ಮುಂದುವರಿದಿದೆ ಎನ್ನುವುದನ್ನು ತಿಳಿಸುತ್ತದೆ.ನಮ್ಮವರ ಪಾಂಡಿತ್ಯಕ್ಕೆ ವೇದಗಳು ಹಾಗೂ ಕಾವ್ಯಗಳೇ ಪ್ರಮುಖ ಸಾಕ್ಷಿಯಾಗಿದೆ. ಪಿ.ವಿ. ರಂಗನ್ ಅವರು ‘ಮಹಾಸಂಪರ್ಕ’ ಕೃತಿಯಲ್ಲಿ ಇದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.</p>.<p>‘ಬಹು ದೂರದ ತಾರಾ ಲೋಕದಿಂದ ಅತ್ಯಂತ ಬುದ್ಧಿಶಾಲಿ ಜನಾಂಗವೊಂದು ಭೂ ಲೋಕಕ್ಕೆ ಆಗಮಿಸಿ, ಇಲ್ಲಿನ ಜನರಿಗೆ ತಾವು ತಿಳಿದ ವಿಷಯವನ್ನು ಉಪದೇಶಿಸಿದ ಬಗ್ಗೆ ‘ಮಹಾಸಂಪರ್ಕ’ದಲ್ಲಿ ಮಾಹಿತಿಯಿದೆ. ಲೈಂಗಿಕ ಸಂಪರ್ಕದಿಂದ ಉತ್ತಮ ತಳಿಯ ಮಾನವರನ್ನು ಹುಟ್ಟಿಸಲು ಪ್ರಯತ್ನಿಸಿದ್ದಕ್ಕೆ‘ಮಹಾಭಾರತ’ದಲ್ಲಿ ಹಲವುಉದಾಹರಣೆಗಳು ಸಿಗುತ್ತವೆ’ ಎಂದರು.</p>.<p>‘ಬದಲಾದ ಸನ್ನಿವೇಶದಲ್ಲಿ ಮಾನವನ ಅತಿಯಾಸೆಗೆ ನೈಸರ್ಗಿಕ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅಪರೂಪದ ಪ್ರಾಣಿ ಸಂಕುಲಗಳೂ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕವಯಿತ್ರಿಪ್ರೊ.ಎಂ.ಆರ್. ಕಮಲಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 14 ಕವಯಿತ್ರಿಯರು ಕವನ ವಾಚಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪ್ರಪಂಚದ ಹೆಚ್ಚಿನ ದೇಶಗಳು ಅಂಧಕಾರ ಯುಗದಲ್ಲಿದ್ದಾಗಲೇ ನಮ್ಮ ದೇಶದಲ್ಲಿಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಚಿರಪರಿಚಿತವಾಗಿತ್ತು. ಭೌತ ವಿಜ್ಞಾನ, ತಂತ್ರ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ಖಗೋಳ ಶಾಸ್ತ್ರದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿತ್ತು’ ಎಂದು ಸಾಹಿತಿ ಡಾ. ವಿಜಯಾ ಸುಬ್ಬರಾಜ್ ತಿಳಿಸಿದರು.</p>.<p>ಬಿ.ಎಂ.ಶ್ರೀ. ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಮನು (ಪಿ.ವಿ. ರಂಗನ್) ಅವರ ಹೊಸ ಪರಿಕಲ್ಪನೆಯ ಕೃತಿ ‘ಮಹಾಸಂಪರ್ಕ’ದ ಕುರಿತು ಉಪನ್ಯಾಸ ನೀಡಿದರು.</p>.<p>‘ಸಿಂಧೂ ಕಣಿವೆಯ ನಾಗರಿಕತೆಯೇ ನಮ್ಮ ಜನಾಂಗ ಎಷ್ಟು ಮುಂದುವರಿದಿದೆ ಎನ್ನುವುದನ್ನು ತಿಳಿಸುತ್ತದೆ.ನಮ್ಮವರ ಪಾಂಡಿತ್ಯಕ್ಕೆ ವೇದಗಳು ಹಾಗೂ ಕಾವ್ಯಗಳೇ ಪ್ರಮುಖ ಸಾಕ್ಷಿಯಾಗಿದೆ. ಪಿ.ವಿ. ರಂಗನ್ ಅವರು ‘ಮಹಾಸಂಪರ್ಕ’ ಕೃತಿಯಲ್ಲಿ ಇದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.</p>.<p>‘ಬಹು ದೂರದ ತಾರಾ ಲೋಕದಿಂದ ಅತ್ಯಂತ ಬುದ್ಧಿಶಾಲಿ ಜನಾಂಗವೊಂದು ಭೂ ಲೋಕಕ್ಕೆ ಆಗಮಿಸಿ, ಇಲ್ಲಿನ ಜನರಿಗೆ ತಾವು ತಿಳಿದ ವಿಷಯವನ್ನು ಉಪದೇಶಿಸಿದ ಬಗ್ಗೆ ‘ಮಹಾಸಂಪರ್ಕ’ದಲ್ಲಿ ಮಾಹಿತಿಯಿದೆ. ಲೈಂಗಿಕ ಸಂಪರ್ಕದಿಂದ ಉತ್ತಮ ತಳಿಯ ಮಾನವರನ್ನು ಹುಟ್ಟಿಸಲು ಪ್ರಯತ್ನಿಸಿದ್ದಕ್ಕೆ‘ಮಹಾಭಾರತ’ದಲ್ಲಿ ಹಲವುಉದಾಹರಣೆಗಳು ಸಿಗುತ್ತವೆ’ ಎಂದರು.</p>.<p>‘ಬದಲಾದ ಸನ್ನಿವೇಶದಲ್ಲಿ ಮಾನವನ ಅತಿಯಾಸೆಗೆ ನೈಸರ್ಗಿಕ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅಪರೂಪದ ಪ್ರಾಣಿ ಸಂಕುಲಗಳೂ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಕವಯಿತ್ರಿಪ್ರೊ.ಎಂ.ಆರ್. ಕಮಲಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 14 ಕವಯಿತ್ರಿಯರು ಕವನ ವಾಚಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>