‘ಕೋವಿಡ್ ಕಾರಣದಿಂದಾಗಿ ಪ್ರಸ್ತುತ ಉಂಟಾಗಿರುವ ಕಾರ್ಮಿಕರ ಪರಿಸ್ಥಿತಿಗೆ ಇಂಥ ವಿಮೆ ಪರಿಹಾರವಾಗಲಿದೆ. ಮುಂದೆಯೂ ಇಂತಹ ಸ್ಥಿತಿ ಎದುರಾದ ಸಂದರ್ಭದಲ್ಲಿ ಕಾರ್ಮಿಕರಿಗೆ ರಕ್ಷಣೆ ದೊರೆಯಲಿದೆ’ ಎಂದು ಕಾರ್ಮಿಕರ ಕುರಿತಾಗಿ ಇರುವ ಸಂಸತ್ಸಮಿತಿಯ ಅಧ್ಯಕ್ಷರಾದ, ಬಿಜೆಡಿ ಸಂಸದ ಭರ್ತ್ರುಹರಿ ಮಹ್ತಾಬ್ ಅಭಿಪ್ರಾಯ ವ್ಯಕ್ತಪಡಿಸಿದರು. ‘ನಿರುದ್ಯೋಗ ವಿಮೆ ಇಲ್ಲದೇ ಇರುವುದು ಸಾಮಾಜಿಕ ಭದ್ರತೆ ಯೋಜನೆಗಳಲ್ಲಿರುವ ಅಂತರವನ್ನು ತೋರಿಸುತ್ತದೆ. ಹೀಗಾಗಿ ಸಾಮಾಜಿಕ ಭದ್ರತೆ ನಿಯಮಾವಳಿಗಳಲ್ಲಿ ‘ನಿರುದ್ಯೋಗ ವಿಮೆ’ ಸೇರ್ಪಡೆ ಸರ್ಕಾರದ ಅವಶ್ಯ ಕರ್ತವ್ಯವಾಗಿದೆ’ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.